Site icon Vistara News

Randeep Hooda: ಕೇವಲ 4 ತಿಂಗಳಲ್ಲಿ 26 ಕೆಜಿ ತೂಕ ಇಳಿಸಿಕೊಂಡ ರಣದೀಪ್ ಹೂಡಾ; ಪ್ರಶ್ನೆ ಮಾಡೋರಿಗೆ ನಿರ್ಮಾಪಕ ಹೇಳಿದ್ದೇನು?

Randeep Hooda lost 26 kgs

ಬೆಂಗಳೂರು: ನಟ ರಣದೀಪ್ ಹೂಡಾ (Randeep Hooda) ʻಸ್ವಾತಂತ್ರ್ಯ ವೀರ್ ಸಾವರ್ಕರ್ʼ (Swatantrya Veer Savarkar) ಸಿನಿಮಾ ಮೂಲಕ ತೆರೆಗೆ ಬರುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಬಯೋಪಿಕ್‌ನ ನಿರ್ಮಾಪಕ ಆನಂದ್ ಪಂಡಿತ್ ಅವರು ರಣದೀಪ್ ಹೂಡಾ ಈ ಸಿನಿಮಾದ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ನೀಡಿದ್ದರು ಎಂದು ಬಹಿರಂಗಪಡಿಸಿದರು. ನಟ ಈ ಪಾತ್ರಕ್ಕಾಗಿ 4 ತಿಂಗಳು 1 ಲೋಟ ಹಾಲು ಒಂದು ಖರ್ಜೂರ ತಿಂದು 26 ಕೆಜಿ ತೂಕ ಇಳಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಚಿತ್ರದ ಚಿತ್ರೀಕರಣಕ್ಕಾಗಿ ನಟ ರಣದೀಪ್ ಹೂಡಾ ಅವರ ಆಹಾರಕ್ರಮದ ಬಗ್ಗೆ ಸಂದರ್ಶನದಲ್ಲಿ, ನಿರ್ಮಾಪಕ ಆನಂದ್ ಪಂಡಿತ್ ಅವರು ಮಾತನಾಡಿ ʻʻನಟ ರಣದೀಪ್ ಹೂಡಾ ತಮ್ಮ ಪಾತ್ರದಲ್ಲಿ ತುಂಬಾ ತೊಡಗಿಸಿಕೊಂಡಿದ್ದರು. ಶೂಟಿಂಗ್ ಮುಗಿಯುವವರೆಗೆ 1 ಲೋಟ ಹಾಲು ಒಂದು ಖರ್ಜೂರ ತಿಂದು 26 ಕಜಿ ತೂಕ ಇಳಿಸಿಕೊಂಡರು. ವೀರ್ ಸಾವರ್ಕರ್‌ಗೆ ಕೂದಲು ಇಲ್ಲದ ಕಾರಣ, ತಮ್ಮ ಕೂದಲನ್ನು ಸಹ ಬೋಳಿಸಿಕೊಂಡಿದ್ದಾರೆ” ಎಂದು ಹೇಳಿದರು. ಬಯೋಪಿಕ್‌ನಲ್ಲಿ ಅಂಕಿತಾ ಲೋಖಂಡೆ ಮತ್ತು ಅಮಿತ್ ಸಿಯಾಲ್ ಕೂಡ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್‌ ಬಿಡುಗಡೆಗೊಂಡಿದೆ.

ನಟನೆ ಮಾತ್ರವಲ್ಲ ನಿರ್ದೇಶಕನಾಗಿ ಸ್ವಾತಂತ್ರ್ಯ ವೀರ ಸಾವರ್ಕರ್ ಚಿತ್ರದ ಮೂಲಕ ರಣದೀಪ್ ಬಿ-ಟೌನ್‌ಗೆ ತೋರಿಸಿಕೊಟ್ಟಿದ್ದಾರೆ. ಚಿತ್ರಕಥೆ ಬರಹಗಾರ ಉತ್ಕರ್ಷ್ ನೈತಾನಿ ಜತೆ ರಣದೀಪ್ ಕೂಡ ಸಿನಿಮಾ ಕಥೆ ಬರೆದಿದ್ದಾರೆ. 2023ರ ಅಂತ್ಯದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ: Randeep Hooda | ಕುದುರೆಯಿಂದ ಬಿದ್ದು ಗಾಯಗೊಂಡ ನಟ ರಣದೀಪ್ ಹೂಡಾ ಆಸ್ಪತ್ರೆಗೆ ದಾಖಲು: ಸ್ಥಿತಿ ಗಂಭೀರ

ಮೇ 28ರಂದು ವೀರ ಸಾವರ್ಕರ್ ಜಯಂತಿ ಪ್ರಯುಕ್ತ ಚಿತ್ರತಂಡ ಚಿತ್ರದ ಟೀಸರ್ ಹಾಗೂ ಲುಕ್ ರಿಲೀಸ್ ಮಾಡಿದೆ. ಎಂದೂ ಕಾಣಿಸಿಕೊಳ್ಳದ ರಣದೀಪ್ ಅವತರಾ ನೋಡಿ ಸಿನಿ ರಸಿಕರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ನಾಲ್ಕು ತಿಂಗಳುಗಳ ಕಾಲ ಒಂದು ಚೂರು ಬದಲಾಗದೆ ಹೇಗೆ ರಣದೀಪ್ ಈ ರೀತಿ ಕಾಣಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಮಾಡುವವರಿಗೆ ನಿರ್ಮಾಪಕರು ಉತ್ತರ ಕೊಟ್ಟಿದ್ದಾರೆ.


Exit mobile version