Site icon Vistara News

Rashmika Mandanna | ನಟ ನಾಗಶೌರ್ಯ ಜತೆ ನಟಿ ಕಿರಿಕ್‌, ರಶ್ಮಿಕಾ ಮಂದಣ್ಣ ಬ್ಯಾನ್‌ ಮಾಡಲು ಅಸಾಧ್ಯ: ತೋಟಾ ಪ್ರಸಾದ್‌

Rashmika Mandanna (tota prasad)

ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣ (Rashmika Mandanna) ವಿರುದ್ಧ ಹಲವಾರು ನೆಗೆಟಿವ್‌ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ತೆಲುಗಿನ ಯುಟ್ಯೂಬ್‌ ಸಂದರ್ಶನವೊಂದರಲ್ಲಿ ತೆಲುಗಿನ ಖ್ಯಾತ ಚಲನಚಿತ್ರ ಬರಹಗಾರ ತೋಟಾ ಪ್ರಸಾದ್‌ ರಶ್ಮಿಕಾ ಮಂದಣ್ಣ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಕಿರಿಕ್‌ ಪಾರ್ಟಿ ಸಿನಿಮಾ ಹೆಸರನ್ನು ಹೇಳಿಕೊಳ್ಳದೆ ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದ್ದರು. ಇದಾದ ನಂತರ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಿದ್ದಾರೆಂಬ ಸುದ್ದಿಗಳು ಹರಿದಾಡಿದವು. ಇದೀಗ ಇವೆಲ್ಲದರ ಕುರಿತು ಮಾತನಾಡಿದ ತೋಟಾ ಪ್ರಸಾದ್‌ ʻʻರಶ್ಮಿಕಾ ಮಂದಣ್ಣ ಅವರು ರಕ್ಷಿತ್‌ ಶೆಟ್ಟಿ ಅವರ ಜತೆ ಬ್ರೇಕ್‌ ಅಪ್‌ ಆದ ಕಾರಣದಿಂದ ಅವರು ʻಕಿರಿಕ್‌ ಪಾರ್ಟಿʼ ಸಿನಿಮಾದ ಹೆಸರನ್ನು ತೆಗೆದುಕೊಳ್ಳಲಿಲ್ಲ. ಆದರೆ ಆ ಚಿತ್ರದ ನಿರ್ದೇಶಕರ ಹೆಸರನ್ನು ಹೇಳಬಹುದಿತ್ತು. ಇನ್ನೂ ಅವರು ತೆಲುಗು ಚಿತ್ರರಂಗ ಪ್ರವೇಶಿಸಿದ ʻಚಲೋʼ ಚಿತ್ರದ ನಟ ನಾಗಶೌರ್ಯ ಅವರ ಹೆಸರನ್ನು ಸಹ ರಶ್ಮಿಕಾ ಎಲ್ಲಿಯೂ ಹೇಳಿಲಿಲ್ಲ. ರಕ್ಷಿತ್‌ ಶೆಟ್ಟಿ ಅವರ ಜತೆ ಬ್ರೇಕ್‌ ಆದ ಕಾರಣ ಹೆಸರನ್ನು ತೆಗೆದುಕೊಳ್ಳಲಿಲ್ಲ. ಸರಿ ಆದರೆ ನಾಗಶೌರ್ಯ ಅವರ ಹೆಸರು ತೆಗೆದುಕೊಳ್ಳಬಹುದಿತ್ತು. ಇತ್ತೀಚೆಗಷ್ಟೇ ʻಚಲೋʼ ಚಿತ್ರದ ವಾರ್ಷಿಕೋತ್ಸವದ ಕುರಿತು ರಶ್ಮಿಕಾ ಮಂದಣ್ಣ ಟ್ವೀಟ್‌ ಮಾಡಿದ್ದರು. ಅದರಲ್ಲಿ ʻಚಲೋʼ ಚಿತ್ರದ ನಿರ್ದೇಶಕರನ್ನು ಮೆನ್ಷನ್‌ ಮಾಡಿದ್ದರು. ಆದರೆ ಎಲ್ಲಿಯೂ ಕೂಡ ನಾಗಶೌರ್ಯ ಅವರ ಹೆಸರನ್ನು ಟ್ವೀಟ್‌ನಲ್ಲಿ ಬರೆಯಲಿಲ್ಲ. ಇದರಲ್ಲಿಯೇ ಗೊತ್ತಾಗುತ್ತದೆ. ಎಷ್ಟೇ ಆದರೂ ಮೊದಲು ತುತ್ತು ಇಟ್ಟವರನ್ನು ಮರೆಯಬಾರದು, ಕೃತಜ್ಞತೆ ಇರಬೇಕುʼʼಎಂದು ಬೇಸರ ಹೊರಹಾಕಿದರು.

ಇದನ್ನೂ ಓದಿ | Actor Naga Shourya | ಬೆಂಗಳೂರು ಮೂಲದ ಹುಡುಗಿ ಜತೆ ಸಪ್ತಪದಿ ತುಳಿಯಲಿದ್ದಾರೆ ತೆಲುಗು ನಟ ನಾಗ ಶೌರ್ಯ!

ಮಾತು ಮುಂದುವರಿಸಿದ ತೋಟಾ ಪ್ರಸಾದ್‌ ʻʻಕನ್ನಡ ಚಿತ್ರರಂಗದಲ್ಲಿ ರಶ್ಮಿಕಾ ಅವರನ್ನು ಬ್ಯಾನ್‌ ಮಾಡುತ್ತೇವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಯಾವ ಚಿತ್ರರಂಗಕ್ಕೂ ಯಾವುದೇ ನಟ, ನಟಿಯ ಮೇಲೆ ನಿಷೇಧ ಹೇರಲು ಆಗುವುದಿಲ್ಲ. ಅದರಲ್ಲಿಯೂ ಯಶಸ್ಸಿನ ಹಾದಿಯಲ್ಲಿರುವ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್‌ ಮಾಡುವುದು ಅಸಾಧ್ಯʼʼ ಎಂದು ಹೇಳಿದರು.

ಇದನ್ನೂ ಓದಿ | Rashmika Mandanna | ದಳಪತಿ ವಿಜಯ್‌-ರಶ್ಮಿಕಾ ಮಂದಣ್ಣ ಕಾಂಬಿನೇಶನ್‌ ಸಿನಿಮಾಗೆ ನೋಟಿಸ್‌

Exit mobile version