Site icon Vistara News

Rashmika Mandanna: ರಶ್ಮಿಕಾ ಜಾಗ ಕಬಳಿಸಿದ ಶ್ರೀಲೀಲಾ; ನ್ಯಾಷನಲ್‌ ಕ್ರಶ್‌ ವಿರುದ್ಧ ʻಆʼ ವ್ಯಕ್ತಿಯ ಸೇಡು!

Rashmika Mandanna

ಬೆಂಗಳೂರು: ನ್ಯಾಷನಲ್‌ ಕ್ರಶ್‌ ಎಂದೇ ಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ (Rashmika Mandanna) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ನಿತಿನ್​ ಅವರು ಜತೆಯಾಗಿ ನಟಿಸುತ್ತಿರುವ ಎರಡನೇ ಸಿನಿಮಾದ ಮಹೂರ್ತ ಈ ಹಿಂದೆ ಅದ್ಧೂರಿಯಾಗಿ ನಡೆದಿತ್ತು. ‘ಭೀಷ್ಮ’ ಚಿತ್ರದಲ್ಲಿ ನಿತಿನ್‌ ರಶ್ಮಿಕಾ ಒಟ್ಟಿಗೆ ನಟಿಸಿ ಬ್ಲಾಕ್‌ ಬಸ್ಟರ್‌ ಜೋಡಿ ಎಂದೆನಿಸಿಕೊಂಡಿತ್ತು. ಆದರೀಗ ಮತ್ತೆ ನಟಿಗೆ ಹಿನ್ನಡೆಯಾಗಿದೆ. ಸದ್ಯ ಕಿರಿಕ್ ಬೆಡಗಿ ನಿತಿನ್ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಆ ಪಾತ್ರದಲ್ಲಿ ಶ್ರೀಲೀಲಾ ನಟಿಸುವ ಬಗ್ಗೆ ಗುಸುಗುಸು ಶುರುವಾಗಿದೆ. ಇದೆಲ್ಲದರ ಮಧ್ಯೆ ರಶ್ಮಿಕಾ ದಿಢೀರನೆ ಆ ಸಿನಿಮಾದಿಂದ ಹೊರ ಬಂದಿರುವುದಕ್ಕೆ ʻಆ ವ್ಯಕ್ತಿʼ ಕಾರಣ ಎನ್ನಲಾಗುತ್ತಿದೆ.

ಯಾರು ಆ ವ್ಯಕ್ತಿ?

“ರಶ್ಮಿಕಾ ಈಗಾಗಲೇ ಪುಷ್ಪ 2, ರೇನ್ಬೋ (ತಮಿಳು – ತೆಲುಗು) ಮತ್ತು ಇನ್ನೊಂದು ತೆಲುಗು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕೈಯಲ್ಲಿ ಎರಡು ಹಿಂದಿ ಪ್ರಾಜೆಕ್ಟ್‌ಗಳೂ ಇವೆ. ಹೀಗಾಗಿ ರಶ್ಮಿಕಾ ಅವರಿಗೆ ಉಳಿದ ಪ್ರಾಜೆಕ್ಟ್‌ಗಳಿಗೆ ದಿನಾಂಕ ಹೊಂದಿಸಲು ಕಷ್ಟವಾಗುತ್ತಿದೆ ಎಂದೂ ವರದಿಯಾಗಿದೆ. ಇನ್ನೊಂದು ವರದಿ ಪ್ರಕಾರ ರಶ್ಮಿಕಾ ಮಂದಣ್ಣ ಮ್ಯಾನೇಜರ್‌ ಕಿರಣ್ ಎಂಬ ವ್ಯಕ್ತಿಯೇ ನಟಿಯ ಹಿನ್ನಡೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಆತ ನಟಿಗೆ 80 ಲಕ್ಷ ರೂ. ಮೋಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಆತನನ್ನು ರಶ್ಮಿಕಾ ಕೆಲಸದಿಂದ ತೆಗೆದು ಹಾಕಿದ್ದರು ಎನ್ನಲಾಗಿತ್ತು. ಈ ವಿಚಾರವನ್ನು ಪ್ರೆಸ್‌ನೋಟ್ ಮೂಲಕ ನಟಿ ಕೂಡ ಸ್ಪಷ್ಟಪಡಿಸಿದ್ದರು. ಈಗ ರಶ್ಮಿಕಾ ಸಿನಿಮಾ ಅವಕಾಶ ಕಳೆದುಕೊಳ್ಳಲು ಆತನೇ ಮುಖ್ಯ ಕಾರಣ ಎನ್ನುವ ಮಾತುಗಳು ಕೇಳಿ ಬಂದಿದೆ. ರಶ್ಮಿಕಾ ಬಗ್ಗೆ ನಿರ್ಮಾಪಕರು, ನಿರ್ದೇಶಕರ ಬಳಿ ಆತ ಅಪಪ್ರಚಾರ ಆರಂಭಿಸಿದ್ದಾನೆ. ರಶ್ಮಿಕಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆಕೆಗೆ ತೆಲುಗು ಸಿನಿಮಾಗಳಲ್ಲಿ ನಟಿಸುವ ಆಲೋಚನೆ ಇಲ್ಲ ಎನ್ನುವ ಅರ್ಥದಲ್ಲಿ ಸುಳ್ಳು ಪ್ರಚಾರ ನಡೆಸುತ್ತಿದ್ದಾನೆ. ಅಷ್ಟೇ ಅಲ್ಲದೇ ರಶ್ಮಿಕಾ ಬದಲು ಶ್ರೀಲೀಲಾ ಹಾಗೂ ಮೃಣಾಲ್ ಠಾಕೂರ್ ಹೆಸರುಗಳನ್ನು ಫಿಲ್ಮ್ ಮೇಕರ್ಸ್ ಬಳಿ ಪ್ರಸ್ತಾಪಿಸುತ್ತಿದ್ದಾನೆ ಎನ್ನಲಾಗುತ್ತಿದೆ..

ಇದನ್ನೂ ಓದಿ: Rashmika Mandanna: ಇದೆಲ್ಲ ಹೇಗೆ ಆಯಿತು.. ನಾನು ಇಲ್ಲಿಗೆ ಹೇಗೆ ಬಂದೆ ಅಂತಿದ್ದಾರೆ ನ್ಯಾಶನಲ್‌ ಕ್ರಶ್‌!

ನಟಿಯ ಬಳಿ ಡೇಟ್ಸ್‌ ಇಲ್ಲ!

ಬಾಲಿವುಡ್‌ನಲ್ಲಿಯೂ ನಟಿ ಸಖತ್‌ ಬ್ಯುಸಿಯಾಗಿದ್ದು, ಟಾಲಿವುಡ್‌ನಲ್ಲೂ ಒಳ್ಳೆ ಅವಕಾಶಗಳು ರಶ್ಮಿಕಾಗೆ ಸಿಗುತ್ತಿವೆ. ಹಿಂದಿ, ತೆಲುಗು, ತಮಿಳಿನಲ್ಲಿ ಒಂದಷ್ಟು ಸಿನಿಮಾಗಳ ಚರ್ಚೆ ನಡೀತಿದೆ.

ಶ್ರೀಲೀಲಾ ಎಂಟ್ರಿ ಕೊಡ್ತಾರಾ?

ನಿತಿನ್​-ರಶ್ಮಿಕಾ ಕಾಂಬಿನೇಷನ್​ನ ಹೊಸ ಸಿನಿಮಾಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಬಂಡವಾಳ ಹೂಡುತ್ತಿದೆ ಎನ್ನಲಾಗಿತ್ತು. ಚಿತ್ರಕ್ಕಾಗಿ ವೆಂಕಿ ಕುದುಮುಲ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮುಹೂರ್ತಕ್ಕೆ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ತೆಲುಗು ಚಿತ್ರರಂಗದ ಸ್ಟಾರ್​ ನಿರ್ದೇಶಕರಾದ ಗೋಪಿಚಂದ್​ ಮಲಿನೇನಿ, ಹನು ರಾಘವಪುಡಿ ಮುಂತಾದವರು ಕೂಡ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದರು. ಆದರೀಗ ರಶ್ಮಿಕಾ ಜಾಗಕ್ಕೆ ಶ್ರೀಲೀಲಾ ಎಂಟ್ರಿ ಕೊಡುತ್ತಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

Exit mobile version