Site icon Vistara News

Rashmika Mandanna: ರಶ್ಮಿಕಾ ಜತೆ ಸೆಲ್ಫಿ ತೆಗೆದುಕೊಳ್ಳುವಾಗ ಅಭಿಮಾನಿಯನ್ನು ತಳ್ಳಿದ ಬಾಡಿ ಗಾರ್ಡ್‌; ವಿಡಿಯೊ ವೈರಲ್‌!

Rashmika Mandanna SHOCK After Her Bodyguard Drags Away her Fan

ಬೆಂಗಳೂರು: ಮೇ 16ರಂದು ಹೈದರಾಬಾದ್‌ನಲ್ಲಿ ನಡೆದ ತೆಲುಗು ಸಿನಿಮಾ ʻಬೇಬಿʼ ಹಾಡು ಬಿಡುಗಡೆ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು. ಅದಾದ ಬಳಿಕ ನಟಿ (Rashmika Mandanna) ಹೊರಡುತ್ತಿದ್ದ ವೇಳೆ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಪಟ್ಟುಬಿಡದ ಅಭಿಮಾನಿಗಳು ನಟಿಯನ್ನು ಗುಂಪುಗೂಡಿ ಅನುಚಿತ ವರ್ತನೆಯನ್ನು ತೋರಿದ್ದಾರೆ. ಅಭಿಮಾನಿಯೊಬ್ಬರು ನಟಿಯೊಂದಿಗೆ ಸೆಲ್ಫಿಗೆಂದು ಮುಗಿಬಿದ್ದಾಗ ನಟಿಯ ಬಾಡಿ ಗಾರ್ಡ್‌ ಅಭಿಮಾನಿಯನ್ನು ತಳ್ಳಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವೈರಲ್‌ ಆಗಿರುವ ವಿಡಿಯೊದಲ್ಲಿ, ರಶ್ಮಿಕಾ ಈವೆಂಟ್‌ ಮುಗಿಸಿ ಹೊರ ಬರುತ್ತಿದ್ದಾಗ ಅವರ ಫ್ಯಾನ್ಸ್‌ ಸೆಲ್ಫಿಗೆಂದು ಮುಗಿಬಿದ್ದಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಸೆಲ್ಫಿಗೆಂದು ಮುಂದೆ ಬಂದಾಗ ನಟಿಯ ಬಾಡಿಗಾರ್ಡ್‌ ಅವರನ್ನು ತಳ್ಳಿದ್ದಾರೆ. ರಶ್ಮಿಕಾ ಬಾಡಿ ಗಾರ್ಡ್‌ನನ್ನು ತಡೆದು ಅಭಿಮಾನಿಯನ್ನು ವಿಚಾರಿಸಿ ಮುಂದೆ ನಡೆದಿದ್ದಾರೆ. ಬಾಡಿಗಾರ್ಡ್ ವರ್ತನೆ ನೋಡಿ ರಶ್ಮಿಕಾ ಮಂದಣ್ಣಗೆ ಶಾಕ್ ಆಗಿದೆ. ಮುಂದಕ್ಕೆ ನಡೆಯುತ್ತ ಅವರು ಹಿಂದಕ್ಕೆ ತಿರುಗಿ ನೋಡಿದ್ದಾರೆ. ಆದರೆ, ಆ ವ್ಯಕ್ತಿ ಕಾಣಿಸಿಲ್ಲ. ಬಳಿಕ ಮಹಿಳಾ ಅಭಿಮಾನಿಯೊಬ್ಬರು ರಶ್ಮಿಕಾ ಅವರನ್ನು ಬೆನ್ನಟ್ಟಿದ್ದು, ಫೋಟೊ ತೆಗೆಯುವಂತೆ ವಿನಂತಿಸಿದ್ದಾರೆ. ನಂತರ ರಶ್ಮಿಕಾ ಸೆಲ್ಫಿಗೆ ಪೋಸ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Rashmika Mandanna: ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್‌?

ವೈರಲ್‌ ವಿಡಿಯೊ

ಕಾರ್ಯಕ್ರಮಕ್ಕಾಗಿ, ರಶ್ಮಿಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದರು. ಕ್ರೀಮ್ ಲೆಹೆಂಗಾ ಧರಿಸಿದ್ದರು.
ರಶ್ಮಿಕಾ ಸದ್ಯ ತಮ್ಮ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ರಣಬೀರ್ ಕಪೂರ್ ಎದುರು ʻಅನಿಮಲ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಬೀರ್ ಸಿಂಗ್ ಮತ್ತು ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರವನ್ನು ನವದೆಹಲಿಯ ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದೆ. ಇದಲ್ಲದೇ, ಪುಷ್ಪ 2 ಗಾಗಿ ರಶ್ಮಿಕಾ ಅವರು ಅಲ್ಲು ಅರ್ಜುನ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ತೆಲುಗು ಚಿತ್ರ ʻರೈನ್ಬೋʼದಲ್ಲಿಯೂ ನಟಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ವಿಕ್ಕಿ ಕೌಶಲ್ ಜತೆ ‘ಛವಾ’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾಗೆ ರಶ್ಮಿಕಾ ವಿಶೇಷವಾದ ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ನಿಭಾಯಿಸಲಿದ್ದಾರೆ.

ಚಿತ್ರದ ಪ್ರೊಡಕ್ಷನ್‌ ಹಂತ ಭರದಿಂದ ಸಾಗಿದೆ. “ಚಿತ್ರವು ಪ್ರಾಥಮಿಕವಾಗಿ ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದ್ದರೂ, ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ನಿರ್ವಹಿಸುತ್ತಿದ್ದರು ಎನ್ನುವುದು ವಿಶೇಷ. ಈ ವಿಚಾರ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಲಿದೆ.

Exit mobile version