Site icon Vistara News

Ratan Rajput: ಕೋಲ್ಡ್‌ ಡ್ರಿಂಕ್ಸ್‌ನಲ್ಲಿ ಏನೋ ಮಿಕ್ಸ್‌ ಮಾಡಿದ್ರು; ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ನಟಿ!

Ratan Rajput

ಬೆಂಗಳೂರು: ಜನಪ್ರಿಯ ಕಿರುತೆರೆ ನಟಿ ರತನ್ ರಜಪೂತ್ (Ratan Rajput) ಈಗ ತಮ್ಮ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ಮಾಧ್ಯಮವೊಂದರ ಸಂವಾದದಲ್ಲಿ ರತನ್ ಅವರು ಯುವ ಪೀಳಿಗೆ ಸಿನಿಮಾ ಉದ್ಯಮದ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಬೇಕಿದೆʼʼ ಎಂದು ತಾನು ಅನುಭವಿಸಿದ ಭಯಾನಕ ಅನುಭವದ ಬಗ್ಗೆ ಮಾತನಾಡಿದರು.

ಆಜ್‌ತಕ್‌ನೊಂದಿಗಿನ ಸಂವಾದದಲ್ಲಿ, ರತನ್ ರಜಪೂತ್ ಮಾತನಾಡಿ , “ಕಾಸ್ಟಿಂಗ್ ಕೌಚ್ ಒಂದು ಉದ್ದೇಶ ಎಂದು ಕರೆಯುತ್ತೇನೆ. ಮೀಟೂ ಸಮಯದಲ್ಲಿಯೂ ನಾನು ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೆ ಅದರ ಬಗ್ಗೆ ಮಾತನಾಡುವುದು ನಿಜವಾಗಿಯೂ ಮುಖ್ಯವಾಗಿದೆ. ನನಗೆ ಯುವಕರಿಂದ ಸಾಕಷ್ಟು ವೈಯಕ್ತಿಕ ಇ-ಮೇಲ್‌ಗಳು ಬರುತ್ತವೆ. ಅವರು ನನಗೆ ಮಾರ್ಗದರ್ಶನ ನೀಡುವಂತೆ ಕೇಳುತ್ತಾರೆ. ಹಾಗಾಗಿ ಅವರು ಸತ್ಯವನ್ನು ತಿಳಿದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಹಾಗೆ ಹೇಳುವುದಾದರೆ, ಇಡೀ ಉದ್ಯಮವು ಕೆಟ್ಟದ್ದಲ್ಲ. ಅವರಲ್ಲಿ ಕೆಲವರು ಮಾತ್ರ ಹಾಗೆʼʼ ಎಂದರು.

“ಓಶಿವಾರದಲ್ಲಿ ಆಡಿಷನ್‌ಗಳು ನಡೆಯುತ್ತಿದ್ದ ಹೋಟೆಲ್‌ ಇತ್ತು. ನಾನು ಅಲ್ಲಿ ಆಡಿಷನ್‌ಗೆ ಹೋದೆ. ಅಲ್ಲಿ ಅನೇಕ ಪ್ರಸಿದ್ಧ ನಟರನ್ನು ನೋಡಿದೆ. ನಾನು ನನ್ನ ಆಡಿಷನ್ ನೀಡಿದ್ದೇನೆ ಆದರೆ ನಿರ್ದೇಶಕರು ಅಲ್ಲಿ ಇರಲಿಲ್ಲ. ಕೆಲವು ಕೋ-ಆರ್ಡಿನೇಟರ್ ನನ್ನ ಆಡಿಷನ್ ತೆಗೆದುಕೊಂಡು ಹೇಳಿದರು, “ನೀವು ತುಂಬಾ ಚೆನ್ನಾಗಿ ಮಾಡಿದ್ದೀರಿ ಮೇಡಮ್. ಸರ್ ನಿಮ್ಮ ಬಗ್ಗೆ ಮಾತ್ರ ಮಾತನಾಡುತ್ತಿದ್ದರುʼʼ ಎಂದರು. ಅದಕ್ಕೆ ಓಕೆ ಅಂದೆ. ಒಂಟಿಯಾಗಿ ಹೋಗೋದು ನನ್ನ ಅಭ್ಯಾಸವಲ್ಲ ವಾಗಿತ್ತು. ಡ್ಯಾನ್ಸ್ ಆಡಿಷನ್‌ಗೆ ನನ್ನ ಜತೆ ನನ್ನ ಫ್ರೆಂಡ್ ಕೂಡ ಬಂದಿದ್ದರು. ಆ ಕೋ-ಆರ್ಡಿನೇಟರ್ ಸ್ಕ್ರಿಪ್ಟ್ ತೆಗೆದುಕೊಂಡು ಮೀಟಿಂಗ್‌ಗಾಗಿ ರೆಡಿ ಆಗಿ ಎಂದರು. ನನಗೆ ಏನು ನಡೆಯುತ್ತಿದೆ ಎಂದು ಆಗ ಅರ್ಥವಾಗಲಿಲ್ಲʼʼ ಎಂದರು.

ಇದನ್ನೂ ಓದಿ: Casting Couch | ಅಡ್ಜೆಸ್ಟ್‌ ಆಗಬೇಕು ಅಂದಿದ್ದ ನಿರ್ಮಾಪಕ: ರತನ್‌ ರಜಪೂತ್‌ ಕಾಸ್ಟಿಂಗ್‌ ಕೌಚ್‌ ಬಗ್ಗೆ ಹೇಳಿದ್ದೇನು?

ರತನ್ ಮಾತು ಮುಂದುವರಿಸಿ, “ನಾನು ಮೀಟಿಂಗ್‌ಗಾಗಿ ಮತ್ತೊಂದು ಹೋಟೆಲ್‌ಗೆ ಹೋಗಿದ್ದೆ, ಅಲ್ಲಿ ಅವರು ಕೋಲ್ಡ್‌ ಡ್ರಿಂಕ್ಸ್‌ ಕುಡಿಯಲು ಒತ್ತಾಯಿಸುತ್ತಿದ್ದರು. ಬಳಿಕ ನನ್ನನ್ನು ಮತ್ತೊಂದು ಆಡಿಷನ್‌ಗೆ ಕರೆಯುವುದಾಗಿ ಹೇಳಿದರು. ನಾನು ಮತ್ತು ನನ್ನ ಸ್ನೇಹಿತ ಮನೆಗೆ ತಲುಪಿದೆವು. ಕೋಲ್ಡ್‌ ಡ್ರಿಂಕ್ಸ್‌ನಲ್ಲಿ ಏನಾದರೂ ಮಿಕ್ಸ್‌ ಮಾಡಿದ್ರಾ ಎಂದು ಅನುಮಾನ ಶುರುವಾಯಿತು. ಕೆಲವು ಗಂಟೆಗಳ ನಂತರ, ಮತ್ತೊಂದು ಆಡಿಷನ್‌ಗೆ ಬರಲು ನನಗೆ ಕರೆ ಬಂದಿತು. ಸ್ಕ್ರಿಪ್ಟ್ ಸಂಪೂರ್ಣವಾಗಿ ಮುಗಿದಿದೆʼʼಎಂದು.

ನಟಿ ಮತ್ತಷ್ಟು ಮಾತನಾಡಿ, “ಹಾಗಾಗಿ ನಾನು ಮತ್ತು ನನ್ನ ಸ್ನೇಹಿತರು ಮ್ಹಾಡಾದಲ್ಲಿ ಆಡಿಷನ್‌ಗೆ ಹೋಗಿದ್ದೆವು. ಅದು ತುಂಬಾ ವಿಚಿತ್ರವಾದ ಸ್ಥಳವಾಗಿತ್ತು. ನಾನು ಸ್ಥಳಕ್ಕೆ ಪ್ರವೇಶಿಸಿ ನೋಡಿದಾಗ ಇಡೀ ಸ್ಥಳವು ಅವ್ಯವಸ್ಥೆಯಿಂದ ಕೂಡಿತ್ತು. ಬೆಳಕು ಇಲ್ಲದೆ, ಬಟ್ಟೆಗಳನ್ನು ಎಲ್ಲೆಡೆ ಎಸೆಯಲಾಗಿತ್ತು. ಅಲ್ಲಿ ಒಬ್ಬ ಹುಡುಗಿ ಮದ್ಯಪಾನದಿಂದ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ನಾನು ನೋಡಿದೆ. ಏನಾಗಬೇಕೋ ಅದು ಆಗಲೇ ಮುಗಿದಿದೆ ಎಂದು ನಾನು ಗ್ರಹಿಸಬಲ್ಲೆ” ಎಂದು ಹೇಳಿದರು.

ರತನ್ ತನ್ನ ಕಥೆಯನ್ನು ಮುಂದುವರಿಸಿ, “ಆ ವ್ಯಕ್ತಿ ಹೊರಗೆ ಬಂದು ‘ಗೆಳೆಯನ ಜತೆ ಬಂದಿದ್ಯಾ? ಎಂದು ನನ್ನನ್ನು ಗದರಿಸಿದನು. ನನ್ನ ಜತೆಯಲ್ಲಿ ಬಂದಿದ್ದು ನನ್ನ ಅಣ್ಣ ಎಂದು ಹೇಳಿದ್ದೆ, ಆ ಡ್ರಿಂಕ್ಸ್‌ನಲ್ಲಿ ಏನೋ ಪ್ರಜ್ಞೆ ಬಂದರೂ ನಿಯಂತ್ರಣ ತಪ್ಪಿದಂತಿತ್ತು, ಕ್ಷಮಿಸಿ ಎಂದು ಹೇಳಿ ಅಲ್ಲಿಂದ ಓಡಿಹೋದೆವು. ಅದರ ಬಗ್ಗೆ ನಾನು ಬಹಿರಂಗವಾಗಿ ಹೇಗೆ ಮಾತನಾಡಲಿ, ಇಲ್ಲದಿದ್ದರೆ ಜನರು ನನಗೆ ಕೆಲಸ ನೀಡುವುದಿಲ್ಲ,. ಆದರೆ ನಾವು ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರಬೇಕು, ಆದ್ದರಿಂದ ನಾವು ಅದರ ಬಗ್ಗೆ ಮಾತನಾಡಬೇಕು ಎಂದು ನನಗೆ ಅನಿಸುತ್ತದೆ. ಇಂಡಸ್ಟ್ರಿಯಲ್ಲಿ ಇರುವವರು ಎಲ್ಲರೂ ಹಾಗಲ್ಲ. ಆದರೆ ಅದರಲ್ಲಿರುವ ಕೆಲವರು ಹಾಗಿದ್ದಾರೆ. ಆ ವ್ಯಕ್ತಿಗೆ ಒಂದು ಕನ್ನೆಗೆ ಬಾರಿಸಬೇಕೆಂಬಷ್ಟು ಸಿಟ್ಟಿದ್ದರೂ ಆಗಿಲ್ಲ. ಇಂಡಸ್ಟ್ರಿಯಲ್ಲಿ ಆತನಿಗೆ ದೊಡ್ಡ ಹೆಸರಿತ್ತುʼʼ ಎಂದು ಬಹಿರಂಗಪಡಿಸಿದರು.

ಇದನ್ನೂ ಓದಿ: Powerful Kannada Movies | ಈ ಹಳೇ ಕನ್ನಡ ಸಿನಿಮಾಗಳಿಗೂ ಪ್ಯಾನ್ ಇಂಡಿಯಾ ಖದರು‌ ಇತ್ತು!

ರತನ್ ರಜಪೂತ್ ಅವರು ʻಅಗ್ಲೆ ಜನಮ್ ಮೋಹೆ ಬಿತಿಯಾ ಹಿ ಕಿಜೋದಲ್ಲಿʼ ಲಾಲಿಯ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಮಹಾಭಾರತದಲ್ಲಿ ಅಂಬಾ ಮತ್ತು ʻಸಂತೋಷಿ ಮಾʼದಲ್ಲಿ ಸಂತೋಷಿ ಪಾತ್ರವನ್ನು ನಿಭಾಯಿಸಿದ್ದರು. ರತನ್ ಹುಟ್ಟಿ ಬೆಳೆದದ್ದು ಬಿಹಾರದಲ್ಲಿ. 2013ರಲ್ಲಿ ರತನ್ ಬಿಗ್ ಬಾಸ್ 7 ರಲ್ಲಿ ಸ್ಪರ್ಧಿಯಾಗಿದ್ದರು.

Exit mobile version