Site icon Vistara News

Salman Khan: ನಿಮ್ಮ ಚಿತ್ರವನ್ನು ನಾವು ಒಪ್ಪುತ್ತೇವೆ, ಆದರೆ ನಮ್ಮ ಚಿತ್ರವನ್ನು ನೀವು ಒಪ್ಪುವುದಿಲ್ಲವಲ್ಲ? ಚಿರುಗೆ ಸಲ್ಲು ಹೀಗೆ ಹೇಳಿದ್ದೇಕೆ?

Salman Khan

ನಿಮ್ಮ ಚಿತ್ರವನ್ನು ಬಾಲಿವುಡ್‌ನವರು (bollywood) ಒಪ್ಪಿಕೊಳ್ಳುತ್ತಾರೆ. ಆದರೆ ನಮ್ಮ ಚಿತ್ರವನ್ನು ದಕ್ಷಿಣದವರು ಒಪ್ಪಿಕೊಳ್ಳುವುದಿಲ್ಲ ಎಂದು ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು ಮೆಘಾಸ್ಟಾರ್‌ ಚಿರಂಜೀವಿ (Chiranjeevi) ಅವರಿಗೆ ಹೇಳಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral news) ಆಗಿದೆ. ಇದಕ್ಕೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ.

ಸಂವಾದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಒಟ್ಟಿಗೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಈ ಮಾತನ್ನು ಹೇಳಿದ್ದು ಕೇಳಿ ಚಿರಂಜೀವಿ ಅವರು ಜೋರಾಗಿ ನಕ್ಕರು. ಕಠಿಣವಾದ ಧ್ವನಿಯಲ್ಲಿ ಸಲ್ಮಾನ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ದಕ್ಷಿಣದಲ್ಲಿ ಬಾಲಿವುಡ್ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಚಿರಂಜೀವಿಗೆ ಹೇಳಿದ್ದಾರೆ.

ರೆಡಿಟ್‌ನಲ್ಲಿ ವೈರಲ್ ಆಗಿರುವ ಕ್ಲಿಪ್‌ನಲ್ಲಿ ಸಲ್ಮಾನ್ ಖಾನ್ “”ಚಿರುಗಾರು, ನಿಮ್ಮ ಚಿತ್ರಗಳನ್ನು ಉತ್ತರ ಭಾರತದಲ್ಲಿ ಸ್ವೀಕರಿಸಲಾಗಿದೆ. ಆದರೆ ಅಲ್ಲಿಯ ಜನ ನಮ್ಮ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲʼʼ ಎಂದು ಚಿರಂಜೀವಿ ಹೇಳುತ್ತಲೇ ಜೋರಾಗಿ ನಗಲು ಪ್ರಾರಂಭಿಸಿದರು.

ʼರೆಡ್ಡಿಟರ್‌ʼಗಳು ಸ್ಟಾರ್ ಗಳ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ, ಇದು ತಪ್ಪಾದ ಹೇಳಿಕೆಯಾಗಿದೆ. ಹಿಂದಿ ಸಿನಿಮಾಗಳ ಪ್ರಾದೇಶಿಕ ಡಬ್ಬಿಂಗ್ ಗೆ ದಕ್ಷಿಣದಲ್ಲಿ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಆದರೆ ಹಿಂದಿ ಚಲನಚಿತ್ರಗಳ ಹಿಂದಿ ಆವೃತ್ತಿಗಳು ದಕ್ಷಿಣದಲ್ಲಿ ಉತ್ತಮ ವ್ಯಾಪಾರವನ್ನು ಮಾಡುತ್ತವೆ ಎಂದು ಹೇಳಿದ್ದಾರೆ.

ಮತ್ತೊಬ್ಬರು ಬಾಲಿವುಡ್ ಚಿತ್ರಗಳನ್ನು ಉತ್ತರದಲ್ಲಿ ಸ್ವೀಕರಿಸಲಾಗುತ್ತಿದೆಯಂತೆ ಎಂದು ಹೇಳಿದ್ದಾರೆ. ಅವರ ಚಿತ್ರಗಳು ಇಲ್ಲಿ ಸಾರ್ವಕಾಲಿಕ ಉತ್ತಮ ವ್ಯಾಪಾರವನ್ನು ಮಾಡುತ್ತವೆ ಎಂಬುದು ತಪ್ಪು ಹೇಳಿಕೆಯಾಗಿದೆ. ಉತ್ತರ ಭಾರತದಲ್ಲಿ ಸೌತ್ ಚಿತ್ರಗಳು ಹಿಟ್ ಅಂಡ್ ಮಿಸ್ ಆಗಿವೆ. ಅವು ಫ್ಲಾಪ್ ಆಗಿರಲೂಬಹುದು. ಅಪರೂಪಕ್ಕೆ ಹಿಟ್ ಆಗುತ್ತೆ. ಹಿಟ್ ಆಗಿದ್ದು ಕೂಡ ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಚಿತ್ರಗಳು ಎಂದಿದ್ದಾರೆ. ಇನ್ನೊಬ್ಬರು ಶಾರುಖ್ ಚಲನಚಿತ್ರಗಳನ್ನು ದಕ್ಷಿಣದಲ್ಲಿ ಚೆನ್ನಾಗಿ ಸ್ವೀಕರಿಸಲಾಗಿದೆ. ಕೇರಳದ ಜನರು ವಿಶೇಷವಾಗಿ ಅವರನ್ನು ಮತ್ತು ಅವರ ಪಾತ್ರಗಳನ್ನು ತುಂಬಾ ಇಷ್ಟಪಡುತ್ತಾರೆ ಎಂದಿದ್ದಾರೆ.


ಇತ್ತೀಚೆಗೆ ಗಮನ ಸೆಳೆದಿರುವ ಪ್ರಭಾಸ್ ಕುರಿತ ಅರ್ಷದ್ ವಾರ್ಸಿ ಅವರ ಕಾಮೆಂಟ್‌ಗಳ ನಡುವೆ ಸಲ್ಮಾನ್ ಅವರ ಈ ವಿಡಿಯೋ ಮರುಕಳಿಸಿದೆ. ಕಲ್ಕಿ 2898 ಎಡಿಯಲ್ಲಿ ಪ್ರಭಾಸ್ ‘ಜೋಕರ್’ನಂತೆ ಕಾಣುತ್ತಿದ್ದರು ಎಂದು ಅರ್ಷದ್ ವಾರ್ಸಿ ಹೇಳಿದ್ದರು. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಶ್ವತ್ಥಾಮ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅವರನ್ನು ನೋಡಲು ಇಷ್ಟವಾದರೂ ಪ್ರಭಾಸ್ ಅವರು ಪ್ರಭಾವಿತರಾಗಲಿಲ್ಲ ಎಂದು ಅರ್ಷದ್ ಹೇಳಿದ್ದರು.

ಇದನ್ನೂ ಓದಿ: Rishab Shetty : ಕಂಬಳ ಬಳಿಕ ಕಾಂತಾರ- 2ನಲ್ಲಿ ಕಳರಿ ಪಯಟ್ಟು ಪ್ರದರ್ಶನಕ್ಕೆ ಸಜ್ಜಾದ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ

ಅರ್ಷದ್ ಅವರ ಈ ಹೇಳಿಕೆಯು ಪ್ರಭಾಸ್ ಅಭಿಮಾನಿಗಳನ್ನು ಕೆರಳಿಸಿತ್ತು. ಸಾಕಷ್ಟು ಮಂದಿ ಇದಕ್ಕೆ ಕಾಮೆಂಟ್ ಮಾಡಿ ಅರ್ಷದ್ ಅವರನ್ನು ದೂಷಿಸಿದ್ದಾರೆ.

Exit mobile version