Site icon Vistara News

Varamahalakshmi Festival | ಸ್ಯಾಂಡಲ್‌ವುಡ್‌ ಪೋಸ್ಟರ್‌ ಧಮಾಕಾ: ತೋತಾಪುರಿ ರಿಲೀಸ್‌ ಡೇಟ್‌ ಫಿಕ್ಸ್‌

Varamahalakshmi Festival

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ (Varamahalakshmi Festival) ಪ್ರಯುಕ್ತ ಸ್ಯಾಂಡಲ್‌ವುಡ್‌ ಸಿನಿಮಾಗಳು ಪೋಸ್ಟ್‌ರ್‌ ಬಿಡುಗಡೆ ಮಾಡುವುದರ ಮೂಲಕ ಹಬ್ಬ ಆಚರಿಸಿವೆ. ಸಾಲುಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು, ಪೋಸ್ಟರ್‌ಗಳನ್ನು ಅನಾರಣಗೊಳಿಸಿವೆ.

ತೋತಾಪುರಿ
ನವರಸ ನಾಯಕ ಜಗ್ಗೇಶ್‌ ಅಭಿನಯದ “ತೋತಾಪುರಿ ಚಾಪ್ಟರ್‌-1ʼ ಸಿನಿಮಾ ರಿಲೀಸ್‌ ಡೇಟ್‌ ರಿವೀಲ್‌ ಆಗಿದೆ. ಈ ಚಿತ್ರವು ಇದೇ ವರ್ಷ ಸೆಪ್ಟೆಂಬರ್​ 30ಕ್ಕೆ ಬಿಡುಗಡೆ ಆಗುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಈ ಹಿಂದೆ ಟ್ರೈಲರ್‌ ಬಿಡುಗಡೆಗೊಂಡಿದ್ದು, ಸಿನಿಮಾಗಳಲ್ಲಿ ಸಾಕಷ್ಟು ಡಬಲ್‌ ಮೀನಿಂಗ್‌ ಡೈಲಾಗ್‌ಗಳು ಸಹಜವಾಗಿತ್ತು.

ಬಾನದಾರಿಯಲ್ಲಿ
ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯಿಸುತ್ತಿರುವ “ಬಾನದಾರಿಯಲ್ಲಿʼ ಸಿನಿಮಾ ತಂಡ ಹಬ್ಬದ ಕುರಿತಾಗಿ ಶುಭ ಹಾರೈಸಿರುವ ಪೋಸ್ಟರ್‌ ಹಾಕಿಕೊಂಡಿದೆ. ಬೆಂಗಳೂರು ಜತೆಗೆ ಆಫ್ರಿಕಾದಲ್ಲಿ ಕೂಡ ಈ ಚಿತ್ರದ ಶೂಟಿಂಗ್‌ ಆಗಲಿದೆ. “ಬೀರಬಲ್‌ʼ ಚಿತ್ರದ ಖ್ಯಾತಿಯ ನಟಿ ರುಕ್ಮಿಣಿ ವಸಂತ್‌ ನಾಯಕಿಯಾಗಿ ಅಭಿನಯಿಸಲಿದ್ದಾರೆ. “ಬಾನದಾರಿಯಲ್ಲಿʼ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನಿರ್ದೇಶಕರಾಗಿದ್ದು, ಅಭಿಲಾಶ್‌ ಕಳತ್ತಿ ಛಾಯಾಗ್ರಹಣ ಮಾಡಿದ್ದಾರೆ. ಪ್ರೀತಮ್‌ ಗುಬ್ಬಿ ಅವರ ಫಿಲ್ಮ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರ ತೆರೆ ಕಾಣಲಿದೆ. ಶ್ರೀ ವಾರಿ ಟಾಕಿಸ್‌ ಚಿತ್ರವನ್ನು ನಿರ್ಮಿಸಿದೆ.

ಇದನ್ನೂ ಓದಿ | Gaalipata 2 | ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್: ಭಾಗಿಯಾದ ಸ್ಯಾಂಡಲ್‌ವುಡ್‌ ತಾರಾ ಬಳಗ

ಶುಗರ್‌ ಫ್ಯಾಕ್ಟರಿ
“ಲವ್‌ ಮಾಕ್ಟೇಲ್‌ʼ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ “ಶುಗರ್‌ ಫ್ಯಾಕ್ಟರಿʼ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರಾಗಿ ಅಭಿನಯಿಸುತಿದ್ದಾರೆ. ಸೊನಾಲ್ ಮಾಂಟೆರೊ ಹಾಗೂ ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ರಂಗಾಯಣ ರಘು, ‘ಲವ್ ಮಾಕ್ಟೇಲ್’ ಖ್ಯಾತಿಯ ಅಭಿ ಕೂಡ ಬಣ್ಣ ಹಚ್ಚಿದ್ದಾರೆ.

ರಾಣಾ
“ರಾಣಾʼ ಸಿನಿಮಾದ ಪೋಸ್ಟರ್‌ ಬಿಡುಗಡೆಗೊಂಡಿದೆ. ನಂದ ಕಿಶೋರ್‌ ನಿರ್ದೇಶನದ ಈ ಸಿನಿಮಾಗೆ ಶ್ರೇಯಸ್‌ ಮಂಜು ನಾಯಕನಾಗಿ ನಟಿಸುತ್ತಿದ್ದಾರೆ.

ಶಿವ 143
ಅನೀಲ್‌ ಕುಮಾರ್‌ ನಿರ್ದೇಶನದ “ಶಿವ 143ʼ ಆಗಸ್ಟ್‌ 26ಕ್ಕೆ ತೆರೆಗೆ ಅಪ್ಪಳಿಸಲಿದೆ. ಹೊಸ ತಂಡದ ಈ ಚಿತ್ರ ಹೇಗೆ ಸಿನಿಪ್ರಿಯರನ್ನು ರಂಜಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬ್ಯಾಡ್‌ ಮ್ಯಾನರ್ಸ್‌
ಯಂಗ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ನಟನೆಯ “ಬ್ಯಾಡ್‌ ಮ್ಯಾನರ್ಸ್‌ʼ ಸಿನಿಮಾ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯ ತಿಳಿಸಿದೆ. ಸುಧೀರ್‌ ಕೆ ಎಂ ಇದನ್ನು ನಿರ್ಮಾಣ ಮಾಡಿದ್ದಾರೆ.

ಜೋಗ್‌ 101
ರಾಘವೇಂದ್ರ ಅಭಿನಯದ “ಜೋಗ್‌ 101ʼ ಪೋಸ್ಟರ್‌ ಬಿಡುಗಡೆಗೊಂಡಿದೆ. ವಿಜಯ್‌ ಕನ್ನಡಿಗ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸುನೀತ್‌ ಹಲಗೇರಿ ಛಾಯಾಗ್ರಹಣ ಮಾಡಿದ್ದು, ಅವಿನಾಶ್‌ ಆರ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ಶಂಭೋ ಶಿವ ಶಂಕರ
ಈ ಸಿನಿಮಾದ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನು ಶಂಕರ್‌ ಕೋಣಮನಹಳ್ಳಿ ನಿಭಾಯಿಸುತ್ತಿದ್ದಾರೆ. ವರ್ತೂರು ಮಂಜು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ | Kannada Movies | ಒಗ್ಗಟ್ಟಿಗೆ ಸಾಕ್ಷಿಯಾದ ಸ್ಯಾಂಡಲ್‌ವುಡ್‌; ಇದು ತಾರೆಗಳ ಸಮಾಗಮ!

Exit mobile version