Site icon Vistara News

ಸ್ಯಾಂಡಲ್​ವುಡ್​ ನಿರ್ದೇಶಕ-ನಿರ್ಮಾಪಕರ ನಡುವೆ ಗಲಾಟೆ; ಕಡ್ಡಿಪುಡಿ ಚಂದ್ರು ವಿರುದ್ಧ ಪಿ.ಸಿ.ಶೇಖರ್​ ಪೊಲೀಸರಿಗೆ ದೂರು

sandalwood director PC Shekhar Police complaint against Kaddipudi Chandru

#image_title

ಇತ್ತೀಚೆಗೆ ತೆರೆಕಂಡ ‘ಲವ್​ ಬರ್ಡ್ಸ್​’ ಸಿನಿಮಾದ ನಿರ್ದೇಶಕ ಪಿ.ಸಿ.ಶೇಖರ್ (Director PC Shekhar) ಅವರು ಕನ್ನಡದ ನಿರ್ಮಾಪಕ, ನಟ ಕಡ್ಡಿಪುಡಿ ಚಂದ್ರು (ಎಂ.ಚಂದ್ರು) ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಣಕಾಸಿನ ವಿಷಯದಲ್ಲಿ ಪಿ.ಸಿ.ಶೇಖರ್​ ಮತ್ತು ಕಡ್ಡಿಪುಡಿ ಚಂದ್ರು ನಡುವೆ ವಿವಾದ ಎದ್ದಿದ್ದು, ಅದೀಗ ಪೊಲೀಸರ ಎದುರು ಹೋಗಿದೆ. ನಿರ್ಮಾಪಕ ಕಡ್ಡಿಪುಡಿ ಚಂದ್ರು ಅವರು ತಮಗೆ ನೀಡಬೇಕಾದ ಸಂಭಾವನೆಯನ್ನು ಪೂರ್ಣವಾಗಿ ನೀಡಿಲ್ಲ ಎಂದು ನಿರ್ದೇಶಕ ಪಿ.ಸಿ ಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ

ಅವರ ಲವ್​ ಬರ್ಡ್ಸ್ ಸಿನಿಮಾದಲ್ಲಿ 20 ಲಕ್ಷಕ್ಕೆ ನಿರ್ದೇಶಕರಾಗಿ ಕೆಲಸ ಮಾಡಲು ಒಪ್ಪಂದವಾಗಿತ್ತು. ಆದರೆ ಸಿನಿಮಾ ಎಡಿಟಿಂಗ್​​ಗಾಗಿ 5 ಲಕ್ಷ ರೂಪಾಯಿ ಹೆಚ್ಚುವರಿ ಹಣ ನೀಡುವ ಬಗ್ಗೆ ಮಾತುಕತೆಯಾಗಿತ್ತು. ಅಂದರೆ ಒಟ್ಟು 25 ಲಕ್ಷ ರೂಪಾಯಿಯನ್ನು ನಿರ್ಮಾಪಕರು ನನಗೆ ಕೊಡಬೇಕಿತ್ತು. ಆದರೆ ಇದುವರೆಗೆ ಒಟ್ಟು ಆರೂವರೆ ಲಕ್ಷ ರೂ. ಮಾತ್ರ ನೀಡಿದ್ದಾರೆ. ಉಳಿದ ಹಣ ಕೇಳಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಸೆನ್ಸಾರ್​ ಮತ್ತು ಇತರ ಸಂಗತಿಗಳನ್ನು ನನ್ನ ಗಮನಕ್ಕೆ ತರದೆ ಮಾಡಿ ಮುಗಿಸಿದ್ದಾರೆ ಎಂದು ಪಿ.ಸಿ.ಶೇಖರ್ ಹೇಳಿದ್ದಾರೆ.

ಇನ್ನೂ ಹದಿನೆಂಟೂವರೆ ಲಕ್ಷ ರೂ.ಬಾಕಿ ಉಳಿಸಿಕೊಂಡಿರುವ ಕಡ್ಡಿಪುಡಿ ಚಂದ್ರು ವಿರುದ್ಧ ನಕಲಿ ಸಹಿ ಆರೋಪವೂ ಎದ್ದಿದೆ. ‘ನನಗೆ ಎಲ್ಲ ಹಣ ನೀಡಿದ್ದಾಗಿ ದಾಖಲಿಸಿ ನಕಲಿ ಸಹಿ ಮಾಡಿದ್ದಾರೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಪಿ.ಸಿ.ಶೇಖರ್​ಗೆ ಅವಕಾಶ ಕೊಡಬೇಡಿ ಎಂದು ಹಲವಾರು ನಿರ್ಮಾಪಕರಿಗೆ ಹೇಳಿದ್ದಾರೆ’ ಎಂದು ಪಿ.ಸಿ.ಶೇಖರ್​ ತಿಳಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ARM Teaser: ಮಲಯಾಳಿ ಹಿರೋನ ಪ್ಯಾನ್ ಇಂಡಿಯಾ ಸಿನಿಮಾ ಟೀಸರ್​ ಬಿಡುಗಡೆ ಮಾಡಿದ ನಟ ರಕ್ಷಿತ್ ಶೆಟ್ಟಿ

ಪಿ.ಸಿ.ಶೇಖರ್​ ಅವರು ಕನ್ನಡ ಚಿತ್ರರಂಗದಲ್ಲಿ 2010ರಿಂದಲೂ ಸಕ್ರಿಯರಾಗಿದ್ದು, ದಿ ಟೆರರಿಸ್ಟ್​, ರಾಗಾ, ಇತ್ತೀಚೆಗೆ ತೆರೆಕಂಡ, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ಲವ್​ ಬರ್ಡ್ಸ್​ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಕಡ್ಡಿಪುಡಿ ಚಂದ್ರು ಎಂದೇ ಖ್ಯಾತರಾದ ನಿರ್ಮಾಪಕ ಎಂ.ಚಂದ್ರು ಅವರು ‘ಕಡ್ಡಿಪುಡಿ, ಸ್ವಯಂವರ‘ ಇತ್ಯಾದಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ‘ಕೃಷ್ಣನ್​ ಲವ್​ ಸ್ಟೋರಿ, ಸಾಗರ ಸಿನಿಮಾಗಳಲ್ಲಿ ನಟನೆಯನ್ನೂ ಮಾಡಿದ್ದಾರೆ.

Exit mobile version