Site icon Vistara News

Actor Darshan: ಆರ್ ಆರ್​​ ನಗರ ವಾಸ್ತು ಸರಿಯಿಲ್ಲ, ಕೇಸುಗಳು ಬೀಳ್ತವೆ ಎಂದಿದ್ದರು ಆರ್ಯವರ್ಧನ್​ ಗುರೂಜಿ; ದರ್ಶನ್ ವಿಷಯದಲ್ಲಿ ಸತ್ಯವಾಯ್ತೇ?

Actor Darshan aryvardhan Guruji told RR nagar vasthu

ಬೆಂಗಳೂರು: ತಮ್ಮ ಭಿನ್ನ, ವಿಭಿನ್ನ ಹೇಳಿಕೆಯ ಮೂಲಕವೇ ಸದಾ ಚಾಲ್ತಿಯಲ್ಲಿರುವ ಬಿಗ್‌ ಬಾಸ್‌ ಮಾಜಿ ಖ್ಯಾತಿಯ ಆರ್ಯವರ್ಧನ್‌ ಗುರೂಜಿ (Aryavardhan Guruji) ದರ್ಶನ್ ಮೇಲೆ ಕೇಸ್​ ಬೀಳಬಹುದು ಎಂದು ಅಂದಾಜಿಸಿದ್ದರೇ? ಖಂಡಿತಾ ಇಲ್ಲ. ಆದರೆ, ಆರ್​ಆರ್​ ನಗರದ ವಾಸ್ತು ಸರಿಯಿಲ್ಲ. ಅಲ್ಲಿನವರಿಗೆ ಕೇಸುಗಳು ಬೀಳ್ತವೆ ಎಂದು ಹೇಳಿದ್ದರು. ಈಗ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ದರ್ಶನ್ ಮನೆಯಿರುವುದು ಆರ್​ಆರ್​​ನಗರದಲ್ಲಿ ಆಗಿರುವ ಕಾರಣ ಗುರೂಜಿಯ ಭವಿಷ್ಯ ಒಂದು ಮಟ್ಟಿಗೆ ಸತ್ಯವಾಗಿದೆ. ಹಿಂದೆ ಯಾವತ್ತೋ ಅವರು ಹೇಳಿದ ಮಾತು ಇದೀಗ ದರ್ಶನ್​ ಜೈಲು ಸೇರುತ್ತಿದ್ದಂತೆ ವೈರಲ್ ಆಗಿದೆ. ಆರ್ಯವರ್ಧನ್ ಅವರು ಆರ್​ಆರ್​ ನಗರ ವಾಸ್ತು ಕುರಿತಾಗಿ ನೀಡಿದ ಸೂಪರ್‌ ಡೂಪರ್‌ ವಿಡಿಯೊ ವೈರಲ್‌ ಆಗುತ್ತಿದೆ. ಕೀರ್ತಿ ಇಎನ್‌ಟಿ ಕ್ಲಿನಿಕ್‌ ಯ್ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಹಿಂದೆ ಆರ್ಯವರ್ಧನ್‌ ಗುರೂಜಿ ನೀಡಿದ ಸಂದರ್ಶನ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ದರ್ಶನ್‌ ಕೇಸ್‌ಗೂ ಆರ್ಯವರ್ಧನ ಗುರೂಜಿ ಭವಿಷ್ಯಕ್ಕೂ ಲಿಂಕ್‌ ಇರಲೂಬಹುದು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಈಗಾಗಲೇ ಅರೆಸ್ಟ್‌ ಆಗಿದ್ದಾರೆ. ದರ್ಶನ್‌ ಮನೆ ಇರುವುದು ಆರ್‌ಆರ್‌ನಗರದಲ್ಲಿ . ರೇಣುಕಾ ಸ್ವಾಮಿ ಹತ್ಯೆ ಆಗಿರುವುದು ಇದೇ ಆರ್‌ಆರ್‌ನ ಆಸುಆಸುಪಾಸಿನಲ್ಲಿ. ಇದೀಗ ಇದೇ ಆರ್‌ಆರ್‌ ನಗರದ ವಾಸ್ತು ಬಗ್ಗೆ ಆರ್ಯವರ್ಧನ್‌ ಗುರೂಜಿ ಭವಿಷ್ಯ ನುಡಿದಿದ್ದ ವಿಡಿಯೊವನ್ನು ಯಾರೋ ವೈರಲ್‌ ಮಾಡಿದ್ದಾರೆ. ಇದೀಗ ಈ ಭವಿಷ್ಯ ಸತ್ಯ ವಿರಬಹುದು ಎನ್ನುತ್ತಿದ್ದಾರೆ ನೆಟ್ಟಿಗರು.

ಆರ್ಯವರ್ಧನ್‌ ಗುರೂಜಿ ಭವಿಷ್ಯ ನುಡಿದಿದ್ದೇನು?

ʻʻಆರ್‌ಆರ್‌ನಗರ ಏರಿಯಾನೇ ವಾಸ್ತು ಸರಿಯಿಲ್ಲ. ಅಲ್ಲಿ ಹೋದವರೆಲ್ಲ ಒಂದಲ್ಲ ಒಂದು ಕೇಸ್‌ ಹಾಕಿಸಿಕೊಳ್ಳುತ್ತಾರೆ. ಎಂಟ್ರೆನ್ಸ್​ನಲ್ಲಿ ಈಶಾನ್ಯ ಮೂಲೆಯಲ್ಲಿ ಮೋರಿ ಇದೆ. ಅಲ್ಲೊಂದು ಮಾಲ್‌ ಇದೆ. ಯಾವಾಗ ನೋಡಿದ್ರು ಬೆಂಕಿ ಬಿತ್ತು ಅಂತಿರ್ತಾರೆ. ಹಾಗಾಗಿ ಆರ್​ಆರ್​ ನಗರದ ಎಂಟ್ರೆನ್ಸ್‌ ಸರಿಯಿಲ್ಲʼʼಎಂದು ಕೀರ್ತಿ ಜತೆ ಮಾತುಕತೆ ನಡೆಸಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ʻʻಯಾವ ಬಾಯಲ್ಲಿ ಈ ರೀತಿ ಹೇಳಿದ್ರೋ ಅದೇ ರೀತಿ ಆಗ್ತಾ ಇದೆʼʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Actor darshan Arrested : ದರ್ಶನ್‌ಗೆ ಎಣ್ಣೆ ಹೊಡೆಯಲು, ಸಿಗರೇಟ್​ ಸೇದಲು ಠಾಣೆಗೇ ಶಾಮಿಯಾನ ಹಾಕಿದರೆ ಪೊಲೀಸರು?

ಆರ್ಯವರ್ಧನ್‌ ಗುರೂಜಿ ಭವಿಷ್ಯ ನುಡಿದು ಸಾಕಷ್ಟು ಬಾರಿ ಟ್ರೋಲ್‌ ಆಗಿದ್ದಾರೆ, ಜತೆಗೆ ಈ ಮುಂಚೆ ಅವರ ಮೇಲೆ ಕಿಚ್ಚ ಫ್ಯಾನ್ಸ್‌ ಅಟ್ಯಾಕ್‌ ಕೂಡ ಮಾಡಿದ್ದರು. ವಿಸ್ತಾರ ನ್ಯೂಸ್‌ನಲ್ಲಿ ಆರ್ಯವರ್ಧನ್‌ ಗುರೂಜಿ ಅವರು ಬಿಗ್‌ ಬಾಸ್‌ ಸೀಸನ್‌ 10ರ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಜತೆಗೆ ಕಿಚ್ಚ ಅವರ ಕುರಿತಾಗಿಯೂ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು. ಸುದೀಪ್ ಅಭಿಮಾನಿಗಳ ಸಂಘದ ಅಧ್ಯಕ್ಷ ನವೀನ್ ಗೌಡ ಹಾಗೂ ಬೆಂಬಲಿಗರು ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಗುರೂಜಿ ಅವರ ಕಚೇರಿಗೆ ನುಗ್ಗಿ ಸುದೀಪ್ ಸರ್ ಎದುರು ಬಂದು ಕ್ಷಮೆ ಕೇಳಿ ಎಂದು ಆರ್ಯವರ್ಧನ್‌ ಅವರಿಗೆ ವಾರ್ನಿಂಗ್‌ ಕೂಡ ಮಾಡಿದ್ದರು.

ಆರ್ಯವರ್ಧನ್‌ ಗುರೂಜಿ ಯಾರು?

ಆರ್ಯವರ್ಧನ್‌ ಗುರೂಜಿ ಅವರು ಸಂಖ್ಯಾಶಾಸ್ತ್ರ ತಜ್ಞರಾಗಿದ್ದಾರೆ. ಇವರು ಐಪಿಎಲ್‌ ಸಂದರ್ಭದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಸಂಖ್ಯಾಬಲದ ಮೂಲಕ ಯಾವ ತಂಡ ಗೆಲ್ಲುತ್ತದೆ? ಸೋಲುತ್ತದೆ ಎಂಬ ಬಗ್ಗೆ ಊಹಿಸುತ್ತಿದ್ದರು. ಆದರೆ, ಅವರ ಲೆಕ್ಕಾಚಾರ ತಪ್ಪಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದರು. ಸಾಕಷ್ಟು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸಿಕೊಂಡ ಬಂದಿದ್ದ ಆರ್ಯವರ್ಧನ್‌ ಅವರಿಗೆ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ. ಜನ್ಮದಿನಾಂಕ, ನಕ್ಷತ್ರದ ಮೇಲೆ ಆರ್ಯವರ್ಧನ್ ಅವರು ವ್ಯಕ್ತಿಗಳ ಭವಿಷ್ಯ ಹೇಳುತ್ತಾರೆ. 

Exit mobile version