Site icon Vistara News

Actor Darshan: ದರ್ಶನ್‌ ತುಂಬ ಮುಗ್ದ, ತಾಯಿ ಕಣ್ಣೀರು ಹಾಕೊಂಡು ಮಗನನ್ನು ಬೆಳೆಸಬೇಕು ಎಂದಿದ್ರು ಎಂದ ಲಹರಿ ವೇಲು!

Actor Darshan Lahari Velu About Darshan Arrest

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್‌ (Darshan Arrested) ಸೇರಿ ನಾಲ್ವರು ಆರೋಪಿಗಳ ಪೊಲೀಸ್‌ ಕಸ್ಟಡಿ ಅಂತ್ಯವಾಗುತ್ತಿದ್ದು, ಇಂದು (ಜೂನ್‌ 22) ಪೊಲೀಸರು ಮೂರನೇ ಬಾರಿಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಇಲ್ಲಿ ದರ್ಶನ್‌ ಭವಿಷ್ಯ ನಿರ್ಧಾರವಾಗಲಿದೆ. ಇದೀಗ ಲಹರಿ ಸಂಸ್ಥೆಯ ವೇಲು ಅವರು ದರ್ಶನ್‌ ಕುತಾಗಿ ಬೇಸರ ಹೊರಹಾಕಿದ್ದಾರೆ. ವಿಸ್ತಾರ ಜತೆ ಮಾತನಾಡಿದ ಲಹರಿ ವೇಲು ಅವರು ʻʻಮುಂಚೆ ದರ್ಶನ್‌ ತುಂಬ ಮುಗ್ದನಾಗಿದ್ದ. ಒಂಥರ ಶೈ ವ್ಯಕ್ತಿತ್ವ. ದರ್ಶನ್‌ ತಾಯಿ ಆಗ ಮಗನನ್ನು ಬೆಳೆಸಬೇಕು ಎಂದು ಕಣ್ಣೀರಿಟ್ಟಿದ್ದರುʼʼಎಂದರು.

ಲಹರಿ ವೇಲು ಮಾತನಾಡಿ ʻʻಹಲವು ವರ್ಷಗಳಿಂದ ದರ್ಶನ್‌ ಅವರನ್ನು ನೋಡಿಕೊಂಡು ಬಂದಿದ್ದೆ. ಪೊರ್ಕಿ ಸಿನಿಮಾ ಆಡಿಯೊ ಲಾಂಚ್‌ ವೇಳೆ ದರ್ಶನ್‌ ನೋಡುವಾಗ ತುಂಬ ಮುಗ್ದ ಮನುಷ್ಯ. ಶೈ ವ್ಯಕ್ತಿತ್ವ. ತುಂಬ ಸ್ಮಾರ್ಟ್‌. ತಾಯಿ ಕಣ್ಣೀರಿಟ್ಟು ಮಗನನ್ನು ಬೆಳೆಸಬೇಕು ಎಂದಿದ್ದರು. ಆದರೆ ಬೆಳದ ಮೇಲೆ ಹೇಗೆ ಇರಬೇಕು ಎಂದು ನಾವು ಒಮ್ಮೆ ಪ್ರಶ್ನೆ ಕೇಳಿಕೊಳ್ಳಬೇಕು. ನಾನು ಯಾವಾಗಲೂ ಎಲ್ಲರಿಗೂ ಅದೇ ಹೇಳೋದು. ನೆಗೆಟಿವ್‌ ಇರೋ ಜಾಗದಲ್ಲಿ ಇರಬೇಡಿ ಎಂದು. ನಿಮ್ಮ ಸಂಘ ತುಂಬ ಮುಖ್ಯ ಆಗತ್ತೆ. ಸಮಾಜ ನಮ್ಮನ್ನು ಹೇಗೆ ನೋಡುತ್ತಿದೆ ಎನ್ನುವುದು ತಿಳಿದಿಕೊಳ್ಳಬೇಕು. ಗ್ರಹಣ ಹಿಡಿದ ಮೇಲೆ ನಂತರ ಒಳ್ಳೆಯದಾಗಲೇ ಬೇಕು. ಆಗಬಿಡುತ್ತೆ. ಚಲನಿಚಿತ್ರ ನಂಬಿಕೊಂಡು ಲಕ್ಷಾಂತರ ಜನ ಇದ್ದಾರೆ. ಇದೀಗ ಇಂತಹ ಘಟನೆಗಳು ಸಂಭವಿಸಿದಾಗ ಭಯ ಆಗತ್ತೆʼʼಎಂದರು.

ಇದನ್ನೂ ಓದಿ: Physical Abuse : ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೆ ಯತ್ನಿಸಿದ ಕಾಮುಕ

ʻʻನಟ ನಟಿಯರು, ತಂತ್ರಜ್ಞರು ಕಲಾವಿದರೂ ಹೀಗೆ, ಎಲ್ಲರೂ ನಮ್ಮ ಕುಂಟುಂಬ. ನಾವು 48 ವರ್ಷದಿಂದ ಲ ಹರಿ ನಡೆಸುಕೊಂಡು ಬರುತ್ತ ಇದ್ದೇವೆ. ಇದು ಕರುನಾಡು. ನಮಗೆ ಆದ ಇತಿಹಾಸ ಇದೆ. ಸಿನಿಮಾಗಳನ್ನು ನೋಡಿ, ಹಾಡುಗಳನ್ನು ಕೇಳಿ ಬದುಕು ಕಟ್ಟಿಕೊಂಡಂತಹ ಜೀವನ ನಮ್ಮದು. ಯಾರ ಜೀವನದಲ್ಲಿ ಕೆಟ್ಟ ಘಟನೆಗಳು ಸಂಭವಿಸಬಾರದು. ಚನಚಿತ್ರೋತ್ಸವ ಬೆಳಸೆದಂತಹವರು ಹೊಟ್ಟೆ ಹಿಟ್ಟಿಲ್ಲ ಅಂದರೂ ಪಕ್ಕದ ಮನೆ ಕೇಳಿಲ್ಲ.‌ ಕಲಾವಿದರಿಗೆ ತುಂಬ ಗೌರವ ಇದೆ. ಅದನ್ನು ಕಾಪಾಡಿಕೊಳ್ಳಬೇಕು. ಕಲಾವಿದರಿಗೆ ಮಾನವೀಯತೆ, ಮನುಷ್ಯತ್ವ ತುಂಬ ಮುಖ್ಯ. ತುಂಬ ಒಳ್ಳೆಯ ಮನಸ್ಸು ಇರೋರು ಕಲಾವಿದರು ಆಗೋದು. ಕಲೆಗೆ ಬೆಲೆ ಕಟ್ಟಲಾಗದು. ಅಭಿಮಾನಿಗಳು ಕೂಡ ಅಷ್ಟೇ ಬೆಳೆಸುತ್ತಾರೆ. ಬೆಳೆಸಿದಾಗ ಆಸ್ಥಾನವನ್ನು ಕಾಪಾಡಿಕೊಳ್ಲಬೇಕು. ನಾವು ಇರೋದೆ ಮೂರು ದಿನ. ಹಾಗಿದ್ದಾಗ ಸಮಾಜಕ್ಕೆ ನಾವು ಮಾದರಿಯಾಗಿ ಬದಕಬೇಕುʼʼಎಂದರು

ನಟ ದರ್ಶನ್ ಜತೆಗೆ ವಿನಯ್, ಪ್ರದೋಶ್ ಮತ್ತು ಧನರಾಜ್ ಕಸ್ಟಡಿ ಅಂತ್ಯವಾಗುತ್ತಿದ್ದು, ಪೊಲೀಸರು ಸಂಜೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನಲ್ಲಿ ದರ್ಶನ್‌ನನ್ನು ಬಂಧಿಸಿದ್ದರು. ಈಗಾಗಲೇ 12 ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆದಿರುವ ದರ್ಶನ್ ಮತ್ತು ಇನ್ನಿತರ ಆರೋಪಿಗಳಿಗೆ ಕೋರ್ಟ್‌ ಬಹುತೇಕ ನ್ಯಾಯಾಂಗ ಬಂಧನದ ಆದೇಶ ನೀಡುವ ಸಾಧ್ಯತೆ ಇದೆ.

ಪೊಲೀಸರಿಂದ ಸಿದ್ಧತೆ

ದರ್ಶನ್ ಸೇರಿ 4 ಜನ ಬಂಧಿತ ಆರೋಪಿಗಳನ್ನು ಇಂದು ಕೋರ್ಟ್‌ಗೆ ಹಾಜರು ಪಡಿಸಲಿರುವ ಪೊಲೀಸರು ಅದಕ್ಕಾಗಿ ಸಿದ್ಧತೆ ಕೈಗೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಕಳೆದ 12 ದಿನಗಳಿಂದ ಎಲ್ಲ 17 ಆರೋಪಿಗಳ ವಿಚಾರಣೆ ನಡೆಸಿರುವ ಪೊಲೀಸರು ಈಗಾಗಲೇ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಂತರ ಕೃತ್ಯಕ್ಕೆ ಸಂಬಂಧಿಸಿದ ಹಲವೆಡೆ ಮಹಜರು ಪ್ರಕ್ರಿಯೆ ನಡೆಸಿ, ಕೊಲೆಗೆ ಸಂಬಂಧಿಸಿದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನೂ ಸಂಗ್ರಹಿಸಿದ್ದಾರೆ.

ಕೊಲೆ ನಡೆದ ಆರ್.ಆರ್‌.ನಗರ ಶೆಡ್ ಬಳಿಯಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಮೃತದೇಹ ಪತ್ತೆಯಾದ ಜಾಗ, ಆರೋಪಿಗಳು ಚಲನವಲನ ನಡೆಸಿದ್ದ ಜಾಗಗಳಲ್ಲಿನ ಸಾಕ್ಷ್ಯ ಕಲೆ ಹಾಕಿದ್ದಾರೆ. ಈಗಾಗಲೇ ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಸೀಜ್ ಮಾಡಲಾಗಿದೆ. ಕೃತ್ಯ ನಡೆದ ದಿನ ಆರೋಪಿಗಳ ಸಂಪರ್ಕದಲ್ಲಿದ್ದ ನಟ ಚಿಕ್ಕಣ್ಣ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತಿತರರ ಹೇಳಿಕೆಗಳನ್ನೂ ದಾಖಲಿಸಲಾಗಿದೆ.

ಡಿ ಗ್ಯಾಂಗ್ ಕೊಲೆಯ ಆರೋಪ ಸಾಬೀತು ಪಡಿಸಲು ಪ್ರತಿಯೊಂದು ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಬಟ್ಟೆಗಳು, ರಕ್ತ ಮತ್ತು ಕೂದಲಿನ ಮಾದರಿ ಪಡೆದು ಎಫ್ಎಸ್ಎಲ್‌ಗೆ ರವಾನಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದ್ದು, ಮೊಬೈಲ್ ಡೇಟಾ ರಿಟ್ರೀವ್ ಮಾಡಿ ತನಿಖೆ ಕೈಗೊಳ್ಳಲಾಗಿದೆ. ತನಿಖೆ ವಿಚಾರವಾಗಿ ಖುದ್ದು ಕಮಿಷನರ್ ದಯಾನಂದ್ ನಿಗಾ ವಹಿಸಿದ್ದು, ಪ್ರತಿದಿನ ತನಿಖೆ ‌ವರದಿ ಪಡೆದು‌ ಚಾರ್ಜ್ ಶೀಟ್ ತಯಾರಿಕೆಗೆ ಸಿದ್ಧತೆ ನಡೆಸಿದ್ದಾರೆ. ದರ್ಶನ್‌ ಜೈಲಿಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

.

Exit mobile version