Site icon Vistara News

Chandan Shetty: ನಿವೇದಿತಾ ಇನ್ನೊಂದು ಮದುವೆ ಆದ್ರೆ ಓಕೆ ನಾ? ಚಂದನ್‌ ಶೆಟ್ಟಿ ಹೇಳಿದ್ದೇನು?

Chandan Shetty talk about Nivedita other marriage

ಬೆಂಗಳೂರು: ನ್ನಡದ ರ್‍ಯಾಪರ್‌ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದಿರುವುದು ಗೊತ್ತೇ ಇದೆ. ಇದೀಗ ಚಂದನ್‌ ಅವರು ಹೆಚ್ಚಾಗಿ ತಮ್ಮ ಸಿನಿಮಾಗಳಿಗೆ ಒತ್ತು ನೀಡುತ್ತಿದ್ದಾರೆ. ಇದರ ಜತೆಗೆ ಹಲವು ಸಂದರ್ಶನಗಳಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹೇಳಿಕೋಳ್ಳುತ್ತಿದ್ದಾರೆ. ಇದೀಗ ವಿಸ್ತಾರ ನ್ಯೂಸ್‌ ಜತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಿವೇದಿತಾ ಕೂಡ ಈಗಾಗಲೇ ಡಿವೋರ್ಸ್‌ ಆದ ಬಳಿಕ ರೀಲ್ಸ್‌ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಕರಿಯರ್‌ಗೆ ಸಾಕಷ್ಟು ಸಮಯ ಇಡುತ್ತಿದ್ದಾರೆ. ಇದೀಗ ಚಂದನ್‌ ಅವರು ನಿವೇದಿತಾ ಇನ್ನೊಂದು ಮದುವೆಯಾದರೆ ತಮ್ಮ ಅಭಿಪ್ರಾಯ ಏನು? ಎಂಬುದನ್ನು ಹೇಳಿದ್ದಾರೆ.

ಈ ಬಗ್ಗೆ ಚಂದನ್‌ ಮಾತನಾಡಿ ʻʻನನ್‌ ಕೌಟುಂಬಿಕ ನಿರ್ಧಾರದ ಬಗ್ಗೆ ಸದ್ಯ ನನಗೆ ಆಲೋಚನೆ ಇಲ್ಲ. ಹಳೆಯ ಘಟನೆಗಳಿಂದ ಆಚೆ ಬರುತ್ತಿದ್ದೇನೆ. ಇನ್ನೂ ಮನಸ್ಸು ತಿಳಿ ಆಗಬೇಕು ಎಂದರೆ ಸಮಯ ಬೇಕು. ಸದ್ಯಕ್ಕೆ ನಾನು ಯಾರನ್ನ ನಂಬಬೇಕು? ಯಾರನ್ನ ನಂಬಬಾರದು ಎಂಬ ಗೊಂದಲದಲ್ಲಿದ್ದೇನೆ. ಸಿನಿಮಾ ಮಾಡಿದ್ದೇನೆ. ಭವಿಷ್ಯ ಏನು ಎಂದು 19ಕ್ಕೆ ಗೊತ್ತಾಗತ್ತೆ. ಮುಂದೆ ಸಿನಿಮಾ ಮಾಡಲಾ? ಹಾಡು ಮಾಡಲಾ? ಎಂಬ ಯೋಚನೆ ಇದೆ.ʼಎಂದರು.

ನಿವೇದಿತಾ ಮುಂದೆ ಮದುವೆಯಾದರೆ ಚಂದನ್‌ ಶೆಟ್ಟಿ ಅವರ ಅಭಿಪ್ರಾಯ ಏನು ಪ್ರಶ್ನೆ ಬಂತು. ಈ ಬಗ್ಗೆ ಚಂದನ್‌ ಮಾತನಾಡಿ ʻʻಅದಕ್ಕೂ ನನಗೂ ಸಂಬಂಧವೇ ಇಲ್ಲ. ಅದು ಅವರ ವೈಯಕ್ತಿಕ ಜೀವನʼʼಎಂದರು.

ʻʻನನ್ನ ಕರಿಯರ್‌ನಲ್ಲಿ ಹಲವಾರು ಅವಮಾನಗಳನ್ನು ಎದುರಿಸಿದ್ದೇನೆ. ನನ್ನ ಹಾಡುಗಳು ಬ್ಯಾನ್‌ ಆಗಿತ್ತು. ಆಗ ಬೇಜರಾಗಿತ್ತು. ಆದರೆ ಅದೆಲ್ಲ ಹೊಸದಾಗಿ ಇತ್ತು. ನನಗೆ ಗೊತ್ತಿಲ್ಲದೇ ಆದ ತಪ್ಪು ಆಗಿತ್ತು. ಟ್ರೋಲ್‌ ಕೂಡ ಆಗಿತ್ತು. ಇನ್ನು ನಮ್ಮ ಉದ್ಯಮದಲ್ಲಿ ಸಂಗೀತ ನಿರ್ದೇಶಕರಿಗೂ ಕಷ್ಟವಾಗುತ್ತಿದೆ. ಹಾಗೇ ಫ್ಯಾನ್ಸ್‌ ಸಹಕಾರ ಇದೆ. ಆ ನಂಬಿಕೆಯಲ್ಲಿ ನಟನೆ ಮೂಲಕ ಬರುತ್ತಿದ್ದೇನೆʼʼಎಂದರು.

ಇದನ್ನೂ ಓದಿ: Chandan Shetty: ಡಿವೋರ್ಸ್‌ ಬಳಿಕ ಚಂದನ್‌-ನಿವೇದಿತಾ ಒಟ್ಟಿಗೆ ಕೈ ಕೈ ಹಿಡಿದುಕೊಂಡು ಬಂದಿದ್ದೇಕೆ?

ʻʻಡಿವೋರ್ಸ್‌ ಎನ್ನುವ ವಿಚಾರ ಖುಷಿಯಿಂದ ಆಗುವಂತದಲ್ಲ. ತುಂಬ ಕಷ್ಟ. ಡಿವೋರ್ಸ್‌ ಅಂದಾಕ್ಷಣ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ ಎನ್ನುವುದು ಅಲ್ಲ. ಅವತ್ತು ಆಕೆ ಜತೆ ಯಾರೂ ಇರಲಿಲ್ಲ. ಒಬ್ಬಳೇ ಇದ್ದಳು. ಇಬ್ಬರೇ ಫ್ಯಾಮಿಲಿ ಕೋರ್ಟ್‌ಗೆ ಹೋಗಿದ್ದೇವು. ಅವಳನ್ನ ಮನೆಗೆ ಯಾರು ತಲುಪಿಸುತ್ತಿದ್ದರು. ಮಾನವೀಯತೆ ದೃಷ್ಟಿಯಿಂದ ಅಂದು ನಿವೇದಿತಾ ಅವರ ಕೈ ಹಿಡಿದು ನಾನು ಕರೆದುಕೊಂಡು ಹೋದೆ. ಅಂದು ಮಾಧ್ಯಮಗಳು ಇದ್ದವು. ಅಂತಹ ಸಂದರ್ಭದಲ್ಲಿ ಒಬ್ಬರೇ ಬಿಟ್ಟು ಬರುವುದು ಸರಿಯಲ್ಲ ಅನ್ನಿಸಿತು. ಇಷ್ಟು ವರ್ಷ ಜತೆಗೆ ಇದ್ದಿದ್ದಕ್ಕೆ ಅವರನ್ನ ಸೇಫ್‌ ಮಾಡುವುದು ನನ್ನ ಕರ್ತವ್ಯ. ಇನ್ನು ಇಬ್ಬರ ಇದ್ದಾಗ ಸಾಕಷ್ಟು ನಿರೀಕ್ಷೆ ಕೂಡ ಇತ್ತು. ಆದರೆ ಅದರ ಬಗ್ಗೆ ಹೇಳಲು ನಾನು ಇಷ್ಟ ಪಡುವುದಿಲ್ಲ ಎಂದರು.

ಡಿವೋರ್ಸ್‌ ಬೆನ್ನಲ್ಲೇ ಗುಡ್‌ ನ್ಯೂಸ್‌ ಕೊಟ್ಟ ಚಂದನ್‌ ಶೆಟ್ಟಿ!

ಅರುಣ್ ಅಮುಕ್ತ ನಿರ್ದೇಶನದ ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಚಿತ್ರದ ಸ್ಟೂಡೆಂಟ್ ಪಾರ್ಟಿ ವೀಡಿಯೊ ಸಾಂಗ್ ಬಿಡುಗಡೆಗೊಂಡಿದೆ ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈಗ ಬಿಡುಗಡೆಗೊಂಡಿರೋ ಹಾಡು ರ್ಯಾಪ್ ಶೈಲಿಯಲ್ಲಿ ಮೂಡಿ ಬಂದಿದೆ. ಚೇತನ್ ಕುಮಾರ್ ಸಾಹಿತ್ಯಕ್ಕೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ. ಇದು ವಿಜೇತ್ ಕೃಷ್ಣ ಮತ್ತು ಚಂದನ್ ಶೆಟ್ಟಿ ಅವರುಗಳ ಎರಡನೇ ಸಮಾಗಮ.

Exit mobile version