Site icon Vistara News

Duniya Vijay- Ganesh: ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್ ಸಿನಿಮಾ ಬರೋದು ಪಕ್ಕಾ; ʻಭೀಮʼನದ್ದೇ ಆ್ಯಕ್ಷನ್‌ ಕಟ್‌!

Duniya Vijay- Ganesh To Combined together make Movie in future

ಬೆಂಗಳೂರು: ದುನಿಯಾ ವಿಜಯ್ ಹಾಗೂ ಗಣೇಶ್ (Duniya Vijay- Ganesh) ಒಂದು ಗ್ರೌಂಡ್​ನಲ್ಲಿ ಭೇಟಿ ಆಗಿದ್ದಾರೆ. ಈ ಭೇಟಿ ವೇಳೆ ಹಳೆಯ ದಿನಗಳ ಬಗ್ಗೆ ಇವರು ಮಾತನಾಡಿಕೊಂಡಿದ್ದಾರೆ. ದುನಿಯಾ ವಿಜಯ್ ನಟನೆಯ ‘ಭೀಮ’ (ಆಗಸ್ಟ್ 9) ಹಾಗೂ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ (ಆಗಸ್ಟ್ 15) ಒಂದು ವಾರ ಗ್ಯಾಪ್​ನಲ್ಲಿ ರಿಲೀಸ್ ಆಗುತ್ತಿದೆ. ʻಮುಂಗಾರು ಮಳೆʼ ಮತ್ತು ʻದುನಿಯಾʼ ಗೆದ್ದಾಗ ಇಂಡಸ್ಟ್ರಿ ಚೇತರಿಸಿಕೊಂಡಿತ್ತು. ಹೊಸ ರೀತಿಯ ಸಿನಿಮಾ ನಿರೀಕ್ಷೆಯಲ್ಲಿದ್ದ ಜನಕ್ಕೆ ಈ ಎರಡೂ ಸಿನಿಮಾ ಬೇರೆ ರೀತಿಯ ಕಥೆ ಹೇಳಿದ್ದವು. ಎರಡೂ ಸಿನಿಮಾಗಳು ಜನರಿಗೆ ಎರಡು ರೀತಿಯಲ್ಲಿಯೇ ಇಷ್ಟ ಆಗಿದ್ದವು. ಎರಡೂ ಸಿನಿಮಾಗಳು ಬಂದು ಹೆಚ್ಚು ಕಡಿಮೆ 17 ರಿಂದ 18 ವರ್ಷಗಳೇ ಕಳೆದಿವೆ. ಇದೀಗ ಮತ್ತೆ ಈ ಇಬ್ಬರೂ ನಾಯಕರ ಬೇರೆ ಬೇರೆ ಸಿನಿಮಾಗಳು ತೆರೆಗೆ ಬರುತ್ತಿವೆ. ಇಬ್ಬರ ಮಾತುಕತೆ ನಡೆದಿದ್ದು ಹೀಗೆ.

ಗಣೇಶ್‌ ಅವರು ಮಾತನಾಡಿ ʻʻಭೀಮ ಟ್ರೈಲರ್‌ ನೋಡಿ ಬಹಳ ಖುಷಿ ಆಯ್ತು. ಭೀಮನ ಪಾತ್ರ ನೋಡಿ ನನಗೆ ರಿಯಲ್‌ ದುನಿಯಾ ವಿಜಯ್‌ ಎಂದು ಅನಿಸಿತು. ನಾನು ದುನಿಯಾ ವಿಜಯ್‌ ಕೂದಲಿಗೆ ದೊಡ್ಡ ಫ್ಯಾನ್‌. ಶಾರುಖ್‌ ತರ ಕಾಣುತ್ತಿದ್ದʼʼ ಎಂದು ಗಣೇಶ್‌ ಗುಣಗಾನ ಮಾಡಿದ್ದಾರೆ. ಅದರ ಜತೆಗೆ ದುನಿಯಾ ವಿಜಯ್‌ ಕೂಡ ʻʻಗಣೇಶ್‌ ಅವರನ್ನು ಹೊಗಳಿದ್ದಾರೆ. ʻʻನೀನು ಪಟ್ಟಿರುವ ಕಷ್ಟ ಎಲ್ಲವನ್ನು ನೋಡಿದ್ದೇನೆ. ನಿನ್ನ ಸಿನಿಮಾ ಕೂಡ ಹಿಟ್‌ ಆಗಲಿ. ದೇವರು ಈಗಾಗಲೇ ಒಳ್ಳೆಯ ಹಂತದಲ್ಲಿ ಇಟ್ಟಿದ್ದಾನೆ. ನಮ್ಮಿಬ್ಬರನ್ನು ದೇವರು ಹಾಗೂ ಅಭಿಮಾನಿಗಳು ಒಳ್ಳೆಯ ರೀತಿ ನಡೆಸುಕೊಂಡು ಹೋಗುತ್ತಿದ್ದಾರೆ. ಮತ್ತೆ ನಮ್ಮನ್ನ ತೆರೆ ಮೆಲೆ ನೋಡುವ ಸಮಯ ಬಂದಿದೆ, ನಾನು ಬಂದು ನಿನ್ನ ಸಿನಿಮಾ ನೀಡುತ್ತೇನೆ. ನೀನು ಬಂದು ನನ್ನ ಸಿನಿಮಾ ನೋಡುʼʼ ಎಂದಿದ್ದಾರೆ. ಇದಕ್ಕೆ ಗಣೇಶ್‌ ಕೂಡ ʻʻಖಂಡಿತವಾಗಿ ನೋಡುವೆʼʼಎಂದಿದ್ದಾರೆ,

ಇದನ್ನೂ ಓದಿ: Kannada New Movie: ʻಇದು ಎಂಥಾ ಲೋಕವಯ್ಯʼ ಸಿನಿಮಾ ಬಿಡುಗಡೆಗೆ ಸಜ್ಜು; ತಂಡಕ್ಕೆ ನಟ ಅನಂತ್ ನಾಗ್ ಸಾಥ್‌!

ಮುಂಗಾರು ಮಳೆ ಹಾಗೂ ದುನಿಯಾ ಬಂದು 18 ವರ್ಷಗಳೇ ಆದವು. ಈ ಬಗ್ಗೆ ಗಣೇಶ್‌ ಮಾತನಾಡಿ ʻʻ ಇಬ್ಬರದ್ದು ಎರಡು ಸಿನಿಮಾಗಳು ಹಿಟ್‌ ಆಗುವಾಗ ಇಬ್ಬರಿಗೂ ಅ ಟೇಸ್ಟ್‌ ಗೊತ್ತೇ ಆಗಿಲ್ಲ. ವಿಜಯ್‌ ಅವರ ಸಲಗ ಮಾಡುವಾಗ ನನಗೆ ಖುಷಿ ಆಯ್ತು. ವಿಜಯ್‌ ಬೇರೆನೆ ಲೈಫ್‌ ತೋರಿಸ್ತಾ ಇದ್ದಾರೆ ಅನ್ನಿಸುತ್ತೆ. ನಾವು ಯಾವುದೇ ರೀತಿಯ ಕ್ಲಾಶ್‌ ಮಾಡಿಕೊಂಡಿಲ್ಲ. ಬೈಕೊಂಡಿಲ್ಲ. ಹಳೆದನ್ನು ನೆನೆಸಿಕೊಂಡು ಕಾಲು ನಾವು ಎಳೆದುಕೊಳ್ಳುತ್ತಿದ್ವಿ. ನಮ್ಮ ವಿಜಯ್‌ ನಟ ನಿರ್ದೇಶಕ ಆಗಿದ್ದಾನೆ, ಅವನು ತುಂಬ ಕಷ್ಟ ಪಟ್ಟು ಬಂದಿದ್ದಾನೆ. ಬೆಳಗ್ಗೆ ಪಾರ್ಕ್‌ನಲ್ಲಿ 5 ಗಂಟೆ ಎದ್ದು ಒಬ್ಬನೇ ಓಡಾಡುವನು. ಎರಡು ದಿನಕ್ಕೆ 20 ದಿನ ತಯಾರಿ ಮಾಡುತ್ತಿದ್ದʼʼಎಂದು ಹೇಳಿದರು.

ವಿಜಯ್‌ ಕೂಡ ಮಾತನಾಡಿ ʻ ಗಣೇಶ್‌ ಎಲ್ಲೂ ಬದಲಾಗಲೇ ಇಲ್ಲ. ನನ್ನ ಮಗಳಿಗೆ ಹೇಳಿದ್ದೆ ನಿನ್ನ ಬಗ್ಗೆ. ನಾನು ಯಾವಗಲೂ ಹೇಳೋದು ನೀವು ನೋಡದೇ ಇರುವ ಗಣೇಶ್‌ ನಾನು ನೋಡಿದ್ದೆ, ನಾವು ಇರೊವಷ್ಟು ಖುಷಿ ಪಡುತ್ತಿದ್ದೆವು. ಏನು ಆಗುತ್ತೋ ಎಂದು ಹೇಳಿಯೇ ಇಲ್ಲಿ ತನಕ ಬಂದೆವು. ಇಗ ದ್ವಾಪರ ಸಾಂಗ್‌ ನೋಡಿ ಖುಷಿ ಆಯ್ತು. ನಂಗು ಅದೇ ತರ ಮಾಡಬೇಕು ಎಂದು ಅರ್ಜುನ್‌ಗೆ ಹೇಳಿದೆ. ನಾನು ಗಣೇಶ್‌ ಡ್ಯಾನ್ಸ್‌ ನೋಡಿ ಖುಷಿ ಆಯ್ತು. ನನಗೆ ಡ್ಯಾನ್ಸ್‌ ಬರಲ್ಲ. ನಾವಿಬ್ಬರೂ ಯಾಕೆ ಚೆನ್ನಾಗಿದ್ದೇವೆ ಎಂದರೆ ನಾವು ತುಂಬ ಪಾತಾಳ ನೋಡಿದ್ದೇವೆ. ನನ್ನ ಡೈರಕ್ಷನ್ನಲ್ಲಿ ನಾವಿಬ್ಬರೂ ಕಾಂಬಿನೇಶನ್‌ ಸಿನಿಮಾ ಮಾಡಬೇಕುʼʼ ಎಂದರು. ಅದಕ್ಕೆ ಗಣೇಶ್‌ ಕೂಡ ಮಾಡುತ್ತೇನೆ ಎಂದು ಭಾಷೆ ಕೂಡ ಕೊಟ್ಟರು. ʻʻನೀನು ಯಾವಾಗ ಕರೆಯುತ್ತೇವೋ ಆಗ ಬರ್ತೀನಿʼʼ ಎಂದು ಗಣೇಶ್‌ ಹೇಳಿದರು.

ಆ ಬಳಿಕ ಇಬ್ಬರೂ ಒಬ್ಬರ ಸಿನಿಮಾಗೆ ಒಬ್ಬರು ವಿಶ್ ಮಾಡಿದ್ದಾರೆ. ‘ಭೀಮ’ ಚಿತ್ರವನ್ನು ಥಿಯೇಟರ್​ನಲ್ಲಿ ಗಣೇಶ್ ನೋಡಿ ಹಾರೈಸಲಿದ್ದಾರಂತೆ. ಅದೇ ರೀತಿ ‘ಕೃಷ್ಣ ಪ್ರಣಯ ಸಖಿ’ ಚಿತ್ರವನ್ನು ದುನಿಯಾ ವಿಜಯ್ ವೀಕ್ಷಿಸಲಿದ್ದಾರೆ.

Exit mobile version