Site icon Vistara News

Vinay Rajkumar: ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ರ ವಿನಯ್ ರಾಜ್ ಕುಮಾರ್? ದೊಡ್ಮನೆ ಫ್ಯಾನ್ಸ್‌ಗೆ ಶಾಕ್‌!

Vinay Rajkumar wedding pictures swathishta krishnan have gone viral

ಬೆಂಗಳೂರು: ಈಗಾಗಲೇ ದೊಡ್ಮನೆಯ ಕುಡಿ ಯುವರಾಜ್‌ (Vinay Rajkumar) ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಗೊತ್ತೇ ಇದೆ. ವಿಚ್ಚೇದನದ ಹಂತಕ್ಕೂ ತಲುಪಿದೆ. ಈ ಪ್ರಕರಣ ಬೆನ್ನಲ್ಲೇ ವಿನಯ್ ರಾಜ್ ಕುಮಾರ್ ಅವರ ಮದುವೆ ಸುದ್ದಿ ಕೂಡ ಜೋರಾಗಿದೆ. ಇದಕ್ಕೆ ಪೂರಕವಾಗಿ ಸ್ವಾತಿಷ್ಠಾ ಕೃಷ್ಣನ್ ಮತ್ತು ವಿನಯ್ ರಾಜ್ ಕುಮಾರ್ ಮಧುಮಗ ಮತ್ತು ಮಧುಮಗಳ ಗೆಟಪ್ಪಿನಲ್ಲಿರುವ ಫೋಟೊಗಳು ವೈರಲ್ ಆಗಿವೆ. ಹಾಗಾದರೆ ಈ ಸುದ್ದಿ ನಿಜನಾ? ಇವರಿಬ್ಬರ ಮದುವೆ ಗಾಸಿಪ್‌ ಆಗಿದ್ದೇಕೆ ಎಂದು ತಿಳಿಯಲು ಮುಂದೆ ಓದಿ!

ಪ್ರೇಮಕಥೆಯ ತೆರೆಯ ಹಿಂದಿನ ಕಥೆ ಎಂಬ ಸಾಲನ್ನೂ ಬರೆದಿದ್ದರು. ಆದರೆ ಈ ಚಿತ್ರ ವೈರಲ್‌ ಆಗುತ್ತಿದ್ದಂತೆ ಇದ್ಯಾವುದು ಗಮನಿಸಿದ ಕೆಲವರು ಜೋಡಿ ಚೆನ್ನಾಗಿದೆ ಎಂದು ಕಮೆಂಟ್‌ ಮೂಲಕ ವಿಶ್‌ ಮಾಡಿದ್ದಾರೆ. ಮಾತ್ರವಲ್ಲ ನಿಮ್ಮಿಬ್ಬರ ಜೋಡಿ ತುಂಬ ಚೆಂದವಾಗಿದೆ ಎಂದು ಶುಭಾಶಯ ತಿಳಿಸುತ್ತಿದ್ದಾರೆ.

ಇನ್ನೂ ಕೆಲವರು ವಿನಯ್ ರಾಜ್ ಕುಮಾರ್ ಅವರ ಮದುವೆ ಆಯ್ತು, ಆದರೆ.. ನಮಗೆ ಗೊತ್ತೇ ಆಗಲಿಲ್ಲವಲ್ಲಾ ಎಂದು ಬೇಸರವನ್ನೂ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಹಲವರಿಗೆ ಈ ಫೋಟೊ ವೈರಲ್‌ ಆಗುತ್ತಿದ್ದಂತೆ ಬೇಸರವನ್ನುಂಟು ಮಾಡಿವೆ. ಇನ್ನೂ ಮದುವೆಯ ಶುಭಾಶಯಗಳ ಮಹಾಪೂರ ಹರಿದು ಬಂದ ಬೆನ್ನಲ್ಲಿಯೇ, ‘ಅಯ್ಯೋ.. ನಾನು ನನ್ನ ಪೋಸ್ಟ್‌ನಲ್ಲಿಯೇ ಬಹಳ ಕ್ಲಿಯರ್‌ ಆಗಿ ಬರೆದಿದ್ದೇನೆ. ಇದು ಚಿತ್ರೀಕರಣದ ಸಮಯದಲ್ಲಿ ತೆಗೆದ ಫೋಟೊ ಎಂದು . ಮನವಿಯನ್ನೂ ಸ್ವಾತಿಷ್ಠಾ ಕೃಷ್ಣನ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Vinay Rajkumar: ವಿನಯ್‌ ರಾಜ್‌ಕುಮಾರ್ ನಟನೆಯ ʻಗ್ರಾಮಾಯಣʼ ಸೆಟ್‌ಗೆ ಭೇಟಿ ಕೊಟ್ಟ ಶಿವಣ್ಣ-ಗೀತಾ!

 ವಿನಯ್‌ ರಾಜ್ ಕುಮಾರ್ (Vinay Rajkumar) ಅವರು ʻಒಂದು ಸರಳ ಪ್ರೇಮ ಕಥೆʼ ಸಿನಿಮಾ ಬಳಿಕ ʻಗ್ರಾಮಾಯಣʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಟ ಶಿವರಾಜ್ ಕುಮಾರ್ (Shivaraj Kumar) ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಸೆಟ್‌ಗೆ ಭೇಟಿ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಗ್ರಾಮಾಯಣ’ ಸಿನಿಮಾ ಆರಂಭವಾಗಿ ಮೂರ್ನಾಲ್ಕು ವರ್ಷಗಳಾಗಿವೆ. ಆದರೆ ಹಲವು ಕಾರಣಗಳಿಂದ ನಿಂತು ಹೋಗಿದ್ದ ಚಿತ್ರವನ್ನು ಖ್ಯಾತ ನಿರ್ಮಾಪಕ ಕೆ.ಪಿ ಶ್ರಿಕಾಂತ್ ಅವರು ಲಹರಿ ಫಿಲ್ಮ್ಸ್ ಮನೋಹರ್ ನಾಯ್ಡು ಜತೆಗೆ ಸೇರಿ ಆರಂಭಿಸುತ್ತಿದ್ದಾರೆ.

‘ಯುಐ’ ಸಿನಿಮಾದ ನಂತರ ಶ್ರಿಕಾಂತ್ ಮತ್ತು ಮನೋಹರ್ ನಾಯ್ಡು ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಖ್ಯಾತ ಕಲಾವಿದ ಗೋಪಾಲಕೃಷ್ಣ ದೇಶಪಾಂಡೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಅಪರ್ಣಾ ಕೂಡ ಇದರಲ್ಲಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದೆ. ದೇವನೂರು ಚಂದ್ರು (Devanur Chandru) ನಿರ್ದೇಶನದ ‘ಗ್ರಾಮಾಯಣ’ ಸಿನಿಮಾ ಒಂದೇ ಒಂದು ಟೀಸರ್‌ನಿಂದ ಹಲವರ ಗಮನ ಸೆಳೆದಿತ್ತು.

ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾ ಬಹಳ ಹಿಂದೆ ಸೆಟ್ಟೇರಿತ್ತು. ಆದರೆ ನಾಯಕಿ ಯಾರೆಂಬುದರ ಬಗ್ಗೆ ಸಿನಿರಸಿಕರು ಕುತೂಹಲದಿಂದ ಕಾದಿದ್ದರು. ಇದೀಗ ಮೇಘಾ ಶೆಟ್ಟಿ ನಾಯಕಿ ಎಂಬುದು ಕನ್‌ಫರ್ಮ್‌ ಆಗಿದೆಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿಯ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರು.

Exit mobile version