Site icon Vistara News

Kiran Raj | ಸೆಟ್ ಏರಿತು ಕನ್ನಡದ ʼಶೇರ್ʼ; ಕಿರಣ್‌ ರಾಜ್‌ ಹೇಳಿದ್ದೇನು?

ಕಿರಣ್ ರಾಜ್

ಬೆಂಗಳೂರು: ಕಿರುತೆರೆ ಕನ್ನಡತಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟ ಕಿರಣ್ ರಾಜ್ ಅವರ ನೂತನ ಸಿನಿಮಾ ಸೆಟ್ಟೇರಿದೆ. ಬಡ್ಡಿಸ್ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದ ಅವರು, ಈಗ ಶೇರ್ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದರ ಮುಹೂರ್ತ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಿದೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಆಗಸ್ಟ್‌ 22ಕ್ಕೆ ಚಿತ್ರೀಕರಣ ಆರಂಭವಾಗಲಿದೆ. ಭರ್ಜರಿ ಗಂಡು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸುರೇಖಾ ಶೇರ್‌ನಲ್ಲಿ ನಾಯಕಿಯಾಗಿದ್ದಾರೆ.

ಡಾ.ಸುದರ್ಶನ್ ಸುಂದರ್ ರಾಜ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ತನಿಶಾ ಕುಪ್ಪಂಡ, ಯಶ್ ಶೆಟ್ಟಿ, ಬಾಲ ರಾಜವಾಡಿ ಮತ್ತು ಶರತ್ ಲೋಹಿತಾಶ್ವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭರ್ಜರಿ ಗಂಡು ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೆ ಯೋಜಿಸಿದ್ದರೆ, ಅವರ ಇತರ ಚಿತ್ರಗಳಾದ ಬಡ್ಡಿಸ್, ಚಿಕನ್ ಪುಳಿಯೊಗರೆ, ಚತುಷ್ಪಥ ಮತ್ತು ವಿಕ್ರಮ್ ಗೌಡ ನಿರ್ಮಾಣದ ವಿವಿಧ ಹಂತಗಳಲ್ಲಿವೆ ಎಂದು ಕಿರಣ್‌ ರಾಜ್‌ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Buddies : ಕಿರುತೆರೆ ನಟ ಕಿರಣ್‌ರಾಜ್ ಈಗ ಸ್ಯಾಂಡಲ್‌ವುಡ್‌ಗೆ

Exit mobile version