Site icon Vistara News

Shivarajkumar: ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ: ಸಮಾಧಾನ ಮಾಡಿದ ಬಾಲಯ್ಯ

Shivarajkumar gets emotional after watching Puneeth's video

ಬೆಂಗಳೂರು: ಶಿವ ರಾಜ್‌ಕುಮಾರ್ ಅಭಿನಯದ (Shivarajkumar) ‘ವೇದ ಸಿನಿಮಾ’ ತೆಲುಗಿಗೆ ‘ಶಿವ ವೇದ’ ಎಂಬ ಹೆಸರಿನಲ್ಲಿ ಡಬ್ ಆಗುತ್ತಿದೆ. ಚಿತ್ರದ ಪ್ರೀ ರಿಲೀಸ್ ಇವೆಂಟ್ ಫೆಬ್ರವರಿ ರಂದು ಹೈದರಾಬಾದ್‌ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಂದಮೂರಿ ಬಾಲಕೃಷ್ಣ ಆಗಮಿಸಿದ್ದರು. ಪುನೀತ್‌ ಅವರ ವಿಡಿಯೊ ಪ್ಲೇ ಆಗುತ್ತಿದ್ದಂತೆ ಶಿವಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೇಳೆ ಬಾಲಯ್ಯ ಶಿವಣ್ಣ ಅವರನ್ನು ಸಮಾಧಾನ ಮಾಡಿದ್ದಾರೆ.

ಶಿವರಾಜ್‌ಕುಮಾರ್‌ ಅಭಿನಯದ ವೇದ ಸಿನಿಮಾ ತೆಲುಗಿಗೆ ‘ಶಿವ ವೇದ’ ಎಂಬ ಹೆಸರಿನಲ್ಲಿ ಡಬ್ ಆಗುತ್ತಿದೆ. ಫೆಬ್ರವರಿ 9 ರಂದು ಥಿಯೇಟರ್‌ಗೆ ಬರಲಿದೆ. ಚಿತ್ರದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ನಟ ಪುನೀತ್ ರಾಜ್‌ಕುಮಾರ್ ಒಳಗೊಂಡ ಎವಿ ಪ್ಲೇ ಆಗುತ್ತಿದ್ದಂತೆಶಿವರಾಜ್‌ಕುಮಾರ್‌ ಕಣ್ಣೀರು ಹಾಕಿದ್ದಾರೆ. ಬಾಲಯ್ಯ ಅವರು ಶಿವಣ್ಣ ಅವರಿಗೆ ಸಮಾಧಾನ ಮಾಡಿದ್ದಾರೆ. ನಂತರ ಇಬ್ಬರೂ ವೇದಿಕೆಗೆ ಬಂದು ಪುನೀತ್‌ ಅವರ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: Vedha Movie | ನಾಳೆ ವೇದ ಸಿನಿಮಾ ಆರ್ಭಟ ಶುರು: ರಾಜ್ಯಾದ್ಯಂತ ಶಿವಣ್ಣನ ಅಬ್ಬರ!

ಇದನ್ನೂ ಓದಿ: Vedha Movie | ʻವೇದʼ ಸಿನಿಮಾ 3 ದಿನಗಳಲ್ಲಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿದ್ದೆಷ್ಟು?

ಶಿವರಾಜ್‌ಕುಮಾರ್ ಅವರ 125ನೇ ಸಿನಿಮಾವಾಗಿರುವ ʻವೇದʼ ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಮೂಡಿ ಬರುತ್ತಿದೆ. ನಿರ್ದೇಶಕ ಎ ಹರ್ಷ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌ನ ನಾಲ್ಕನೇ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಝೀ ಸ್ಟುಡಿಯೊ ಕೈ ಜೋಡಿಸಿದೆ. ಗಾನವಿ ಚಿತ್ರದ ನಾಯಕಿಯಾಗಿದ್ದು, ಅರ್ಜುನ್‌ ಜನ್ಯ ಸಂಗೀತ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Exit mobile version