Site icon Vistara News

Amrit Mahotsav | ವಂದೇ ಮಾತರಂ ಗೀತೆ ಚಿತ್ರೀಕರಣ ಪೂರ್ಣ; ಸ್ಯಾಂಡಲ್‌ವುಡ್‌ ನಟರು ಭಾಗಿ

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ

ಬೆಂಗಳೂರು: ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ (Amrit Mahotsav) ಹಿನ್ನೆಲೆಯಲ್ಲಿ ಬಿಜೆಪಿಯಿಂದ ನಿರ್ಮಾಣವಾಗುತ್ತಿರುವ “ವಂದೇ ಮಾತರಂ ಗೀತೆ”ಯ ಹಾಡಿನ ಚಿತ್ರೀಕರಣ ನೆರವೇರಿದೆ. ಈ ಹಾಡಿನಲ್ಲಿ ಸ್ಯಾಂಡಲ್‌ವುಡ್‌ ನಟರು ಅಭಿನಯಿಸಿದ್ದು, ಇದೇ ಆಗಸ್ಟ್‌ ೧೫ರಂದು ಬಿಡುಗಡೆಗೊಳ್ಳಲಿದೆ.

ಸಂತೋಷ್‌ ಆನಂದ್ ರಾಮ್ ವಂದೇ ಮಾತರಂ ಹಾಡಿಗೆ ನಿರ್ದೇಶನ ಮಾಡಿದ್ದು, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಹಾಡಿನ ಚಿತ್ರೀಕರಣ ನೆರವೇರಿದೆ. ಅಂದಾಜು ಏಳು ಲಕ್ಷ ರೂಪಾಯಿಯಲ್ಲಿ ಹಾಡಿನ ಚಿತ್ರೀಕರಣ ಆಗಿದೆ ಎನ್ನಲಾಗಿದೆ.

ʻಹರ್ ಘರ್ ತಿರಂಗಾʼ ಅಭಿಯಾನದ ಹಿನ್ನೆಲೆಯಲ್ಲಿ, ಖ್ಯಾತ ನಟರಿಂದ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಹಾಡಿನ ಚಿತ್ರೀಕರಣ ಇದಾಗಿದೆ. ಈ ಹಾಡಿನಲ್ಲಿ ನಟ ರವಿಚಂದ್ರನ್, ಅನಂತ್‌ನಾಗ್, ರಮೇಶ್ ಅರವಿಂದ್, ಜಗ್ಗೇಶ್, ರಿಷಬ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ | Yash |‌ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ರಾಕಿಂಗ್‌ ಸ್ಟಾರ್‌ ಯಶ್ ರೆಡಿ: ಅಭಿಮಾನಿಗಳಿಗೆ ಹೇಳಿದ್ದೇನು?

Exit mobile version