Site icon Vistara News

Jai Hanuman: ʻಜೈ ಹನುಮಾನ್‌ʼ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್‌ ಬಾಬು, ಹನುಮಾನ್‌ನಾಗಿ ಚಿರಂಜೀವಿ?

Jai Hanuman cinema Chiranjeevi, Mahesh Babu give green signal

ಬೆಂಗಳೂರು: ನಿರ್ದೇಶಕ ಪ್ರಶಾಂತ್‌ ವರ್ಮಾ ನಿರ್ದೇಶನ ಹಾಗೂ ತೇಜ ಸಜ್ಜಾ ಅಭಿನಯದ ʻಹನುಮಾನ್‌ʼ ಸಿನಿಮಾ ಸೂಪರ್‌ ಹಿಟ್‌ ಆಗಿದೆ. ಈಗಾಗಲೇ 250 ಕೋಟಿ ಕಲೆಕ್ಷನ್‌ ಮಾಡಿದೆ. ಇದೀಗ ಈ ಸಿನಿಮಾದ ಸೀಕ್ವೆಲ್‌ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ‘ಜೈ ಹನುಮಾನ್’ ಟೈಟಲ್‌ನಲ್ಲಿ ಸಿನಿಮಾ ಘೋಷಣೆ ಆಗಿದೆ. ಆದರೆ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ? ಎನ್ನುವ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಪ್ರಶಾಂತ್‌ ವರ್ಮಾ ಅವರು ಸಂದರ್ಶನದಲ್ಲಿ ʻಜೈ ಹನುಮಾನ್’ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು, ಹನುಮಂತನಾಗಿ ಚಿರಂಜೀವಿ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ.

ನಿರ್ದೇಶಕ ಪ್ರಶಾಂತ್ ವರಮಾ ಮಾತನಾಡಿ “ʻಜೈ ಹನುಮಾನʻ ಬಹಳ ದೊಡ್ಡ ಬಜೆಟ್‌ ಸಿನಿಮಾ. ಹಾಗಾಗಿ ಸ್ಟಾರ್ ಕಲಾವಿದರು ನಟಿಸುವ ಸಾಧ್ಯತೆಯಿದೆ. ʻಹನುಮಂತʼನ ಪಾತ್ರದಲ್ಲಿ ನಟಿಸಲು ಬಾಲಿವುಡ್ ನಟರು ಸಿದ್ಧರಿದ್ದಾರೆ. ಆದರೆ ನೋಡಿದಾಗ ನಮಗೆ ಭಕ್ತಿಯಿಂದ ಕೈಮುಗಿಯಬೇಕು ಅನಿಸಬೇಕು. ಆ ರೀತಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಬೇಕು. ಹೀಗಾಗಿ ಈ ಲಿಸ್ಟ್‌ನಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಇರಬಹುದುʼʼ ಎಂದಿದ್ದಾರೆ.’ಹನುಮಾನ್’ ಸಿನಿಮಾ ಟ್ರೈಲರ್ ನೋಡಿ ಚಿರಂಜೀವಿ ಮೆಚ್ಚಿಕೊಂಡಿದ್ದರು. ಹೀಗಾಗಿ ಚಿರು ಅವರು ಹನುಮಂತನ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದೀಗ ಮಹೇಶ್‌ ಬಾಬು , ಚಿರಂಜೀವಿ ಬಗ್ಗೆ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

ಇದನ್ನೂ ಓದಿ: Bhakshak Trailer Out: ತನಿಖಾ ಪತ್ರಕರ್ತೆಯಾಗಿ ಭೂಮಿ ಪೆಡ್ನೇಕರ್; ‘ಭಕ್ಷಕ್’ ಸಿನಿಮಾಗೆ ಶಾರುಖ್‌ ಸಾಥ್‌!

ಅಯೋಧ್ಯೆಗೆ 2.66 ಕೋಟಿ ರೂ. ದೇಣಿಗೆ ನೀಡಿದ್ದ ʻಹನುಮಾನ್‌ʼ ಚಿತ್ರತಂಡ!

ಟಾಲಿವುಡ್‌ ನಟ ತೇಜ ಸಜ್ಜನ ಅಭಿನಯದ ‘ಹನುಮಾನ್’ ಚಿತ್ರತಂಡ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ 2.66 ಕೋಟಿ ರೂ. ದೇಣಿಗೆ ನೀಡಿತ್ತು. ಇದು ಸಾಕಷ್ಟು ಸುದ್ದಿಯಾಗಿತ್ತು. ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇನ್ನೂ ಹಲವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕಂಡಗಟ್ಲ ನಿರಂಜನ ರೆಡ್ಡಿ. ಸಿನಿಮಾ ಈ ವರೆಗೆ ಸುಮಾರು 250 ಕೋಟಿ ಗಳಿಕೆ ಮಾಡಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಸುಮಾರು 7.56 ಕೋಟಿ ರೂ. ಬಾಚಿಕೊಂಡಿತ್ತು.

Exit mobile version