Site icon Vistara News

Spandana Vijay Raghavendra: ಸ್ಪಂದನಾ ಬಾಲ್ಯ ಹೇಗಿತ್ತು? ಹಳೆಯ ಫೋಟೊಗಳು ವೈರಲ್‌!

Spandana Vijay Raghavendra childhood Photos

ಬೆಂಗಳೂರು: ಸ್ಯಾಂಡಲ್‌ವುಡ್‌ ‘ಚಿನ್ನಾರಿ ಮುತ್ತ’ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್‌ ರಾಘವೇಂದ್ರ (Spandana Vijay Raghavendra) ಪ್ರವಾಸಕ್ಕೆಂದು ಬ್ಯಾಂಕಾಕ್‌ಗೆ ತೆರಳಿದ್ದರು. ಅಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇದಾದ ಬಳಿಕ ಅವರ ಒಂದಷ್ಟು ಹಳೆಯ ಫೋಟೊಗಳು ಮತ್ತು ಬಾಲ್ಯದ ನೆನಪುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಂತ್ಯಕ್ರಿಯೆ ಮುಗಿದ ಬಳಿಕವೂ ಆ ಫೋಟೊ ವೈರಲ್ ಆಗುತ್ತಿದೆ. ವಿಜಯ್ ರಾಘವೇಂದ್ರ ಅಭಿಮಾನಿಗಳು ಸ್ಪಂದನಾ ಅವರನ್ನು ನೆನೆದು ಭಾವುಕರಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ‘ನಮ್ ಕಥೆ ನಿಮ್ ಜೊತೆ’ ಸಂದರ್ಶನದಲ್ಲಿ ಸ್ಪಂದನಾ ಅವರ ಬಾಲ್ಯದ ದಿನಗಳ ಬಗ್ಗೆ ಅವರ ಅಣ್ಣ ರಕ್ಷಿತ್‌ ಮಾತನಾಡಿದ್ದರು.

ಸ್ಪಂದನಾ ಹಳೆಯ ಫೋಟೊ ಕಂಡು ವಿಜಯ್‌ ಫ್ಯಾನ್ಸ್‌ ಭಾವುಕ!

ಸ್ಪಂದನಾ ಟೀನೇಜ್‌ನಲ್ಲಿದ್ದ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ವಿಜಯ್ ರಾಘವೇಂದ್ರ ಅಭಿಮಾನಿಗಳು ಸ್ಪಂದನಾರನ್ನು ನೆನೆದು ಭಾವುಕರಾಗಿದ್ದಾರೆ. ಶಾಲಾ ದಿನಗಳಲ್ಲಿ ಸ್ನೇಹಿತೆಯರೊಂದಿಗೆ ನಿಂತು ತೆಗೆಸಿಕೊಂಡಿದ್ದ ಫೋಟೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Spandana Vijay Raghavendra: ಚಿನ್ನಾರಿ ಮುತ್ತನ ಮುತ್ತು ಸ್ಪಂದನಾ ಪಂಚಭೂತಗಳಲ್ಲಿ ಲೀನ; ಎಲ್ಲೆಡೆ ಕಂಬನಿ, ಮೌನ

ಸ್ಪಂದನಾ ಬಾಲ್ಯ ಹೇಗಿತ್ತು?

ಸ್ಪಂದನಾ ಅವರ ತಂದೆ ತಂದೆ ಬಿ. ಕೆ ಶಿವರಾಂ ದಕ್ಷ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಹಾಗಾಗಿ ಮನೆಯಲ್ಲಿ ಬಹಳ ಶಿಸ್ತಿನ ವಾತಾವರಣ ಇತ್ತು. ಸೌಮ್ಯ ಸ್ವಭಾವದ ಸ್ಪಂದನಾ ಅಣ್ಣ ರಕ್ಷಿತ್ ಜತೆ ಆಡಿ ಬೆಳೆದವರು. ಸಹೋದರ ರಕ್ಷಿತ್ ಕೂಡ ತಮ್ಮಿಬ್ಬರ ಬಾಲ್ಯ ಹೇಗಿತ್ತು ಎನ್ನುವುದನ್ನು ವಿವರಿಸಿದ್ದರು. ತಂದೆ ಬಿ. ಕೆ ಶಿವರಾಂ ಶಿಸ್ತಿನ ವ್ಯಕ್ತಿಯಾದರೂ ಸ್ಪಂದನಾ ಜತೆ ಅಷ್ಟೇನೂ ಸ್ಟ್ರಿಕ್ಟ್ ಆಗಿ ಇರುತ್ತಿರಲಿಲ್ಲವಂತೆ. ಸ್ಪಂದನಾ ಚಿಕ್ಕಂದಿನಲ್ಲಿ ಬಹಳ ಸೈಲೆಂಟ್ ಆಗಿ ಇರುತ್ತಿದ್ದರು. ಏನೇ ಇದ್ದರೂ ಸಂಜೆ ತಂದೆ ಮನೆಗೆ ಬಂದಮೇಲೆ ಹೇಳುತ್ತಿದ್ದರಂತೆ. ಅದಕ್ಕೇ ಅವರನ್ನು ಚಾಡಿಬುರುಕಿ ಎಂದು ಕರೆಯುತ್ತಿದ್ದರಂತೆ. ಚಿಕ್ಕವಳಿದ್ದಾಗ ಅತೀ ಕಡಿಮೆ ಬಟ್ಟೆ ಹಾಕುತ್ತಿದ್ದಳು. ಅದಕ್ಕೆ ಅಪ್ಪ ಪ್ರೀತಿಯಿಂದ ʻಮೋಗ್ಲಿʼ ಎಂದು ಕರೆಯುತ್ತಿದ್ದರು ಎಂದು ಅಣ್ಣ ನೆನಪಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಅಪ್ಪನ ಮುದ್ದಿನ ಮಗಳು ಆಗಿದ್ದರು.

ಇದನ್ನೂ ಓದಿ: Spandana Vijay Raghavendra : ಒಳಗೆ ಅವಳು ಶಾಂತಮೂರ್ತಿ, ಹೊರಗೆ ಇವನು ಕಲ್ಲುಬಂಡೆ!

ಕೋಪ ಬಂದರೆ ಅಷ್ಟೇ!

ತಂದೆ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ಮನೆಯಲ್ಲಿ ಹೆಚ್ಚು ಇರುತ್ತಿರಲಿಲ್ಲ. ಅಣ್ಣನ ಜವಾಬ್ದಾರಿ ತಂಗಿಯ ಮೇಲಿತ್ತು! ಕೋಪ ಬಂದಾಗ ಯಾರು ಏನೇ ಮಾಡಿದರೂ ತಕ್ಷಣ ಯಾರ ಬಳಿಯಾದರೂ ಸ್ಪಂದನಾ ಪ್ರತಿಕ್ರಿಯಿಸಿಬಿಡುತ್ತಿದ್ದರಂತೆ. ಚಿತ್ರರಂಗದ ವ್ಯಕ್ತಿಗೆ ಸ್ಪಂದನಾರನ್ನ ಮದುವೆ ಮಾಡಿಕೊಡಬೇಕು ಎಂದಾಗ ಮನೆಯವರು ಬಹಳ ಯೋಚಿಸಿದ್ದರಂತೆ. ಎಲ್ಲರೂ ಇಷ್ಟಪಡುವಂತಹ ಸಜ್ಜನ, ಸರಳ ವ್ಯಕ್ತಿ ನನ್ನ ಭಾವನಾಗಿ ಬಂದಿದ್ದು ನಮ್ಮ ಅದೃಷ್ಟ ಎಂದು ವಿಜಯ್‌ ಅವರ ಬಗ್ಗೆ ರಕ್ಷಿತ್ ಹೇಳಿದ್ದರು.

ಬೆಂಗಳೂರಿನ ಸ್ಟೆಲಾ ಮೇರಿಸ್ ಎಕ್ಸ್ಟ್ರೀಮ್ ಶಾಲೆಯಲ್ಲಿ ಓದಿದ ಸ್ಪಂದನಾ, ನಂತರ ಕೇರಳದ ಎಂಇಎಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ತಮ್ಮದೇ ಬ್ಯಾನರ್‌ನಲ್ಲಿ ‘ಕಿಸ್ಮತ್’ ಸಿನಿಮಾ ನಿರ್ಮಿಸಿದ್ದರು. ‘ಅಪೂರ್ವ’ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು.

ಇದನ್ನೂ ಓದಿ: Spandana Vijay Raghavendra: ತಮ್ಮಂದಿರಿಗೆ ಧೈರ್ಯ ತುಂಬಿಯೂ ಬಿಕ್ಕಿ ಬಿಕ್ಕಿ ಅತ್ತ ದೊಡ್ಮನೆ ಸೊಸೆ ಅಶ್ವಿನಿ

2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್‌ – ಸ್ಪಂದನಾ ಜೋಡಿ 16 ವರ್ಷ ಯಶಸ್ವಿ ಜೀವನ ಸಾಗಿಸಿದ್ದರು. ಶೌರ್ಯ ಎಂಬ ಮಗ ಇದ್ದಾನೆ. ಬಿಗ್ ಬಾಸ್‌ನಲ್ಲಿ ವಿಜಯ್ ರಾಘವೇಂದ್ರ ಗೆದ್ದಿದ್ದರು. ಆಗ ಕೂಡ ಅವರು ಹೆಂಡತಿಯನ್ನು ನೆನೆದು ಕಣ್ಣೀರಿಟ್ಟಿದ್ದೂ ಇದೆ. ಸ್ಪಂದನಾ ಯಾವಾಗಲೂ ಶಾಂತ ಸ್ವಭಾವದಿಂದ ಎಲ್ಲರ ಮನ ಗೆದ್ದಿದ್ದರು.

Exit mobile version