Site icon Vistara News

Chetan Kumar: ಸ್ಟಾರ್‌ಗಳು ಸ್ಮಾರಕಗಳಿಗೆ ಸಾರ್ವಜನಿಕರ ಜಾಗ, ಹಣ ಬಳಸಬಾರದು: ನಟ ಚೇತನ್‌

Actor Chetan Ahimsa Kumar Gets Bail Over Objectionable Tweet On Hindutva

Actor Chetan Ahimsa Kumar Gets Bail Over Objectionable Tweet On Hindutva

ಬೆಂಗಳೂರು: ಚಲನಚಿತ್ರ ಸ್ಟಾರ್‌ಗಳು ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ, ಮತ್ತು ಸಂಪನ್ಮೂಲಗಳನ್ನು ಬಳಸಬಾರದು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ (Chetan Kumar) ಟ್ವೀಟ್‌ ಮೂಲಕ ಧ್ವನಿ ಎತ್ತಿದ್ದಾರೆ.

ಹಲವಾರು ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಚಲನಚಿತ್ರ ಸ್ಟಾರ್‌ಗಳು, ಈಗಾಗಲೇ ನಮ್ಮ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ತಮ್ಮ ಚಲನಚಿತ್ರಗಳ ಯಶಸ್ಸಿಗೆ ಅನಗತ್ಯವಾಗಿ ಗಮನ ಪಡೆಯುತ್ತಾರೆ. ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತು ಸಂಗ್ರಹಾಲಯಗಳಿಗೆ ಸ್ಮಾರಕ ಭೂಮಿಗಳು ಒಳ್ಳೆಯ ಉಪಯೋಗಕ್ಕೆ ಬರುತ್ತವೆ.ಹಾಗಾಗಿ ಸ್ಮಾರಕಗಳನ್ನು ಕಟ್ಟದಂತೆ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: BCCI Selection Committee | ಮತ್ತೆ ಟೀಮ್​ ಇಂಡಿಯಾ ಆಯ್ಕೆ ಸಮಿತಿಗೆ ಚೇತನ್​ ಶರ್ಮಾ ಸಾರಥ್ಯ; ಬಿಸಿಸಿಐ ಅಧಿಕೃತ ಪ್ರಕಟಣೆ

ಇದನ್ನೂ ಓದಿ: Pathaan Film | ʻʻಬುದ್ಧ ಮತ್ತು ಬಸವನವರ ಕೇಸರಿ ಬಣ್ಣವನ್ನು ಹಿಂದುತ್ವವು ತನ್ನದಾಗಿಸಿಕೊಂಡಿದೆʼʼ: ನಟ ಚೇತನ್‌

ನಿನ್ನೆಯಷ್ಟೇ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಉದ್ಘಾಟನೆ ಆಗಿದೆ. ಈ ಬೆನ್ನಲ್ಲೇ ಚೇತನ್ ಇಂತಹ ಮಾತುಗಳನ್ನು ಆಡಿದ್ದಾರೆ. ನಟ ಚೇತನ್ ಹೇಳಿಕೆ ಪರ-ವಿರೋಧ ಚರ್ಚೆಯಾಗುತ್ತಿದೆ. ಅನೇಕರು ಚೇತನ್ ಪರ ಮಾತನಾಡಿದರೆ ಇನ್ನು ಕೆಲವರು ಚೇತನ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. 

Exit mobile version