Site icon Vistara News

Tanushree Dutta | ಮೀಟೂ ನಂತರ ಕೊಲೆ ಯತ್ನದ ಬಗ್ಗೆ ಭಯಾನಕ ಸತ್ಯ ಬಾಯ್ಬಿಟ್ಟ ನಟಿ ತನುಶ್ರೀ ದತ್ತಾ!

Tanushree Dutta

ಬೆಂಗಳೂರು: ʻಆಶಿಕ್​ ಬನಾಯಾ ಆಪ್ನೆʼ ಸಿನಿಮಾ ಖ್ಯಾತಿಯ ತನುಶ್ರೀ ದತ್ತಾ (Tanushree Dutta) ಮೀಟೂ ಪ್ರಕರಣದ ಕಾರಣಗಳಿಂದ ಸುದ್ದಿಯಾಗಿದ್ದರು. ಬಾಲಿವುಡ್‌ನಲ್ಲಿ ಮೀಟೂ ಬಗ್ಗೆ ಮೊದಲು ಕೂಗೆಬ್ಬಿಸಿದ್ದೇ ತನುಶ್ರೀ ದತ್ತಾ. ಬಳಿಕ ಇದು ಅಭಿಯಾನದ ರೂಪವನ್ನು ಪಡೆದುಕೊಂಡಿತ್ತು. ಆದರೆ, ಇದೇ ಅವರ ಪಾಲಿಗೆ ಮುಳುವಾಗಿದೆ ಎನ್ನಲಾಗಿದ್ದು, ತಮ್ಮ ಮೇಲೆ ಕೊಲೆ ಪ್ರಯತ್ನಗಳು ನಡೆದಿದ್ದವು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ತನುಶ್ರೀ ದತ್ತಾ ಈ ವಿಚಾರವಾಗಿ ಮಾತನಾಡಿದ್ದು, ʻʻನನ್ನ ಮೇಲೆ ಹಲವಾರು ಬಾರಿ ಕೊಲೆ ಪ್ರಯತ್ನ ನಡೆದಿತ್ತು. ಒಂದು ವೇಳೆ ನನ್ನ ಪ್ರಾಣಕ್ಕೆ ಏನಾದರೂ ಆದರೆ ನಟ ನಾನಾ ಪಾಟೇಕರ್‌, ಲೀಗಲ್‌ ಟೀಮ್‌ ಕಾರಣ. ಬಾಲಿವುಡ್ ಮಾಫಿಯಾದಿಂದ ಬಿಡಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ.

ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ ಆಗಿದ್ದ ತನುಶ್ರೀಗೆ ಮೀಟೂ ಆರೋಪದ ಬಳಿಕ ಸಿನಿಮಾದಲ್ಲಿ ಬೇಡಿಕೆ ಕಡಿಮೆಯಾಗಿತ್ತು. ಅನೇಕ ಪ್ರಾಜೆಕ್ಟ್‌ಗಳಿಗೆ ಮಾತುಕತೆ ನಡೆಸಿದ್ದರು, ಕೊನೆಗೆ ಈ ಕಾರಣಾಂತರದಿಂದ ಪ್ರಾಜೆಕ್ಟ್‌ ಕೈತಪ್ಪಿಹೋಗುವಂತಾಯಿತು. ಇದನ್ನು ಸ್ವತಃ ತನುಶ್ರೀ ಹೇಳಿಕೊಂಡಿದ್ದಾರೆ. ನಟಿ 2005ರಲ್ಲಿ ತೆರೆಕಂಡ ʻಆಶಿಕ್‌ ಬನಾಯಾ ಆಪ್ನೆʼ ಮೂಲಕ ಜನಪ್ರಿಯತೆ ಪಡೆದಿದ್ದರು. 2010ರ ಬಳಿಕ ಯಾವುದೇ ಚಿತ್ರದಲ್ಲಿ ನಟಿಸಿಲ್ಲ.
ಇದನ್ನೂ ಓದಿ | MeToo Case | ರೋಡ್‌ ರೋಮಿಯೊ ಸಿನಿಮಾ ಖ್ಯಾತಿಯ ಆಶಿತಾಗೂ ಮೀಟು ಕಾಟ!

Exit mobile version