Site icon Vistara News

Amruthadhaare Serial: ಜೋಡಿ ಜೀವಗಳ ಒಲವಧಾರೆ; ಭೂಮಿಗೆ ʻಐಲವ್‌ಯೂʼ ಎಂದ ಡುಮ್ಮ ಸರ್‌!

Amruthadhaare Serial Gautham Propose Bhoomika

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರೇಕ್ಷಕರ ಮೆಚ್ಚಿನ ಸೀರಿಯಲ್‌ ಅಂದರೆ ಅದುವೇ ʻಅಮೃತಧಾರೆʼ (Amruthadhaare Serial). ಇದರಲ್ಲಿ ಛಾಯಾ ಸಿಂಗ್ ನಾಯಕ ನಟಿಯ ಪಾತ್ರವನ್ನು ಅಭಿನಯಿಸುತ್ತಿದ್ದಾರೆ. ನಾಯಕ ನಟನಾಗಿ ನಟರಾಜ ನಟ ರಂಗ ನಟಿಸುತ್ತಿದ್ದಾರೆ. ಇಷ್ಟು ದಿನ ಡುಮ್ಮ ಸರ್‌ (ಗೌತಮ್‌ ದಿವಾನ್‌) ಭೂಮಿಕಾಗೆ ಯಾವಾಗ ತಮ್ಮ ಪ್ರೀತಿಯನ್ನು ಹೇಳುತ್ತಾರೋ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಇತ್ತು. ಆ ಸಮಯ ಇದೀಗ ಬಂದಾಗಿದೆ. ಜೋಡಿ ಜೀವಗಳ ಒಲವಧಾರೆ ಶುರುವಾಗಿದೆ. ಭೂಮಿ ಎದುರು ಪ್ರೀತಿ ಹೇಳಿಕೊಂಡೇ ಬಿಟ್ಟರು ಡುಮ್ಮ ಸರ್‌.

ಇದೀಗ ಜೀ ಕನ್ನಡ ವಾಹಿನಿ ಹೊಸ ಪ್ರೋಮೊ ಹಂಚಿಕೊಂಡಿದೆ. ಭೂಮಿಕಾ ಕಾಫಿ ಫ್ಯಾಕ್ಟರಿ ಭೇಟಿ ಆದ ಬಳಿಕ, ಗೌತಮ್‌ ಮಾರನೇ ದಿನ ಸರ್‌ಪ್ರೈಸ್‌ಆಗಿ ಭೂಮಿಕಾಳನ್ನು ಕರೆದುಕೊಂಡು ಪ್ರೀತಿ ವ್ಯಕ್ತಪಡಿಸಿಲು ಹೋಗುತ್ತಾರೆ. ಅಲ್ಲಿ ಗೌತಮ್‌ , ಭೂಮಿಕಾಗೆ ಐಲವ್‌ಯೂ ಎಂದು ಪ್ರಪೋಸ್‌ ಮಾಡಿದ್ದಾನೆ. ಪ್ರೀತಿ ಹೇಳಿಕೊಳ್ಳುವ ಮುಂಚೆ ಗೌತಮ್‌ ಚಡಪಡಿಸುತ್ತಾನೆ. ಅಂತೂ ಗೌತಮ್‌, ಭೂಮಿ ನೀವು ಎಂದರೆ ಇಷ್ಟ ಎಂದು ಹೇಳಿಯೇ ಬಿಡುತ್ತಾನೆ. ಭೂಮಿಕಾ ಕೂಡ ನಾಚಿ ನೀರಾಗುತ್ತಾಳೆ. ʻʻಭೂಮಿಕಾ ನನಗೆ ಗೊತ್ತಿಲ್ಲದ ಹಾಗೇ ನಿಮ್ಮ ಮೇಲೆ ಪ್ರೀತಿ ಹುಟ್ಟಿದೆ. ಅದು ಯಾವ ರೀತಿ ಪ್ರೀತಿ ಗೊತ್ತಿಲ್ಲ. ನನ್ನಲ್ಲಿನ ತುಂಬ ಚೇಂಜಸ್‌ಗೆ ನೀವು ಕಾರಣರಾದ್ರಿ. ಐಲವ್‌ಯೂʼʼಎಂದು ಪ್ರಪೋಸ್‌ ಮಾಡಿಯೇ ಬಿಟ್ಟ ಗೌತಮ್‌.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಇನ್ನೊಂದೆಡೆ ಇದರಲ್ಲಿ ಛಾಯಾ ಸಿಂಗ್ ಗರ್ಭಿಣಿ ಮಲ್ಲಿಯನ್ನು ಸದಾ ಕಾಯುತ್ತಿರುತ್ತಾಳೆ. ಆದರೀಗ ಗೌತಮ್‌ ಭೂಮಿಕಾ ಚಿಕ್ಕಮಗಳೂರಿನಲ್ಲಿ ಇರೋದರಿಂದ ಈ ಚಾನ್ಸ್ ಬಳಸಿಕೊಂಡ ಜಯದೇವ್, ತನ್ನ ಹೆಂಡ್ತಿ ಮಲ್ಲಿಯನ್ನು ಕೊಲ್ಲಲು ಪ್ಲ್ಯಾನ್ ಹಾಕಿ ಮೊದಲು ಸೋಲುತ್ತಾನೆ. ಮಲ್ಲಿಯನ್ನು ನೀನೆ ನೋಡಿಕೊಳ್ಳಬೇಕು ಅಂತ ಭೂಮಿ, ಮಹಿಮಾಗೆ ಹೇಳಿದ್ದಳು. ಹೀಗಾಗಿ ಮಹಿಮಾ, ಮಲ್ಲಿ ಜತೆ ಇದ್ದಾಳೆ. ಆದರೀಗ ಹೊಸ ಪ್ರೋಮೊದಲ್ಲಿ ಮಹಿಮಾ ಮಲ್ಲಿಗೆ ಕೊಟ್ಟ ಊಟವನ್ನು ತಾನೇ ಮಾಡುತ್ತೇನೆ ಎಂದು ಕೂತಿದ್ದಾಳೆ. ಆದರೆ ಆ ಊಟದಲ್ಲಿ ಜೈ ದೇವ ವಿಷ ಹಾಕಿದ್ದಾನೆ. ಇದೀಗ ಈ ಊಟ ಮಹಿಮಾ ಪಾಲಾಗತ್ತಾ ಎಂದು ನೋಡಬೇಕಿದೆ.

ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಸದಾಶಿವ ಪಾತ್ರದಲ್ಲಿ ಛಾಯಾ ಸಿಂಗ್, ಜಯದೇವ್ ಪತ್ನಿ ಮಲ್ಲಿ ಪಾತ್ರದಲ್ಲಿ ರಾಧಾ ಭಗವತಿ, ಜಯದೇವ್ ಪಾತ್ರದಲ್ಲಿ ರಾಣವ್ ಗೌಡ ಅವರು ನಟಿಸುತ್ತಿದ್ದಾರೆ.

Exit mobile version