Site icon Vistara News

Brindavana Serial Kannada: ಅಪರೂಪದ ಕತೆಯೊಂದಿಗೆ ʻಕನ್ನಡತಿ’ ಅಮ್ಮಮ್ಮ; ʻಬೃಂದಾವನʼಕ್ಕೆ ಯೋಗರಾಜ್ ಭಟ್ ಸಾಥ್‌!

Brundavana Kannada Serial

ಬೆಂಗಳೂರು: ಬಿಗ್‌ ಬಾಸ್‌ ಪ್ರಸಾರದ ಅನೌನ್ಸ್‌ ಬೆನ್ನಲ್ಲೇ ಕಲರ್ಸ್‌ ಕನ್ನಡ ಮತ್ತೊಮ್ಮೆ ಸಿಹಿ ಸುದ್ದಿಯನ್ನು ಹೊತ್ತು ತಂದಿದೆ. ಅಷ್ಟೇ ಅಲ್ಲದೇ ‘ಕನ್ನಡತಿ’ ಧಾರಾವಾಹಿ ಮೂಲಕ ಅಮ್ಮಮ್ಮ ಎಂದೇ ಖ್ಯಾತಿ ಪಡೆದ ಚಿತ್ಕಲಾ ಬಿರಾದಾರ್ (Chitkala Biradar) ಅವರು ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಲು ರೆಡಿ ಆಗಿದ್ದಾರೆ. ‘ಪುಟ್ಟಗೌರಿ ಮದುವೆ’, ‘ಮಂಗಳಗೌರಿ ಮದುವೆ’, ‘ರಂಗನಾಯಕಿ’, ‘ನಾಗಿಣಿ- 2’, ‘ಗೀತಾ’, ‘ರಾಣಿ’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ. ಎಸ್ ರಾಮ್‌ ಜೀ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮತ್ತೆ ಬೃಂದಾವನ(Brundavana Serial Kannada) ಧಾರಾವಾಹಿ ಮೂಲಕ ಹೊಸ ಕತೆಯನ್ನು ಹೊತ್ತು ತರುತ್ತಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿ ಬೃಂದಾವನ ಧಾರಾವಾಹಿಯ ಪ್ರೋಮೊ ಹಂಚಿಕೊಂಡಿದೆ. ಪ್ರೋಮೊದಲ್ಲಿ ಅಮ್ಮಮ್ಮ ಪ್ರಮುಖ ಹೈಲೈಟ್‌. ಈ ಪ್ರೋಮೊದಲ್ಲಿ ಕೂಡು ಕುಟುಂಬದ ಕಥೆ ಎದ್ದು ಕಾಣುತ್ತಿದೆ. ಈ ಕುಟುಂಬದಲ್ಲಿ 36 ಜನ ಇದ್ದಾರೆ. ಯೋಗರಾಜ್ ಭಟ್ ಧ್ವನಿಯಲ್ಲಿ ಪ್ರೋಮೊ ಮೂಡಿ ಬಂದಿದೆ. ಮೊಮ್ಮೊಗನಿಗೆ ಮದುವೆ ಮಾಡಬೇಕು ಎನ್ನುವುದು ಸುಧಾ ಮೂರ್ತಿ (ಚಿತ್ಕಲಾ ಬಿರಾದಾರ್) ಆಸೆ. ಆದರೆ, ಮನೆಯಲ್ಲಿರುವ ಎಲ್ಲರ ಒಪ್ಪಿಗೆ ಇದಕ್ಕೆ ಸಿಗಬೇಕು. ಸದ್ಯ ಧಾರಾವಾಹಿ ಪ್ರೋಮೊ ಗಮನ ಸೆಳೆಯುತ್ತಿದೆ. ನೋಡುಗರು ʻʻಬೃಂದಾವನ ಹೆಸರು ಕೇಳಿದಾಗಲೇ ಗೊತ್ತಿತ್ತು. ಇದು ಕೂಡು ಕುಟುಂಬ ಅಂತ. ಆದರೆ ಇಷ್ಟೊಂದು ದೊಡ್ಡ ಕುಟುಂಬ ಅಂತ ಗೊತ್ತಿರಲಿಲ್ಲ. ಪ್ರೋಮೊ ಮಾತ್ರ ಯಾವ ಸಿನಿಮಾ ಟೀಸರ್‌ಗೂ ಕಡಿಮೆ ಇಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ.

ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಮತ್ತು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಣಿ’ ಧಾರಾವಾಹಿಯನ್ನು ರಾಮ್ ಜೀ ನಿರ್ದೇಶಿಸುತ್ತಿದ್ದಾರೆ. ಮೂಲಗಳ ಪ್ರಕಾರ ‘ಗೀತಾ’ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಈ ಧಾರಾವಾಹಿ ಮುಗಿದ ಬಳಿಕ ‘ಬೃಂದಾವನ’ ಆರಂಭ ಆಗಲಿದೆ ಎನ್ನಲಾಗುತ್ತಿದೆ. ಪ್ರೋಮೊ ಕಂಡವರು ʻಕನ್ನಡತಿ’ ಧಾರಾವಾಹಿಯ ಅಮ್ಮಮ್ಮ ಅವರನ್ನು ಕಂಡು ಕಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ‘ಬೃಂದಾವನ’ ಧಾರಾವಾಹಿಯಲ್ಲಿ ಹೊಸ ರೀತಿಯ ಪಾತ್ರದ ಮೂಲಕ ಮತ್ತೆ ಬಂದಿದ್ದಾರೆ.

ಇದನ್ನೂ ಓದಿ: Kannada Serials TRP: ʻಅಮೃತಧಾರೆʼ ಬೀಟ್‌ ಮಾಡಿದ ʻಗಟ್ಟಿಮೇಳʼ; ಟಿಆರ್‌ಪಿ ರೇಸ್‌ನಲ್ಲಿ ʻಶ್ರೀರಸ್ತು ಶುಭಮಸ್ತುʼ!

‘ರಾಮಾಚಾರಿ’ ಸೇರಿ ಹಲವು ಧಾರಾವಾಹಿಗಳು ಇನ್ನು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದು, ಇವುಗಳ ಜತೆಗೆ ಈಗ ‘ಬೃಂದಾವನ’ ಧಾರಾವಾಹಿ ಕೂಡ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಸಂಜೆ 7 ಗಂಟೆ ಸ್ಲಾಟ್‌ಗೆ ಬಿಗ್ ಬಾಸ್ – ಸೀಸನ್ 10 ಮುಗಿದ ಬಳಿಕ ಪ್ರಸಾರವಾಗಲಿದೆ ಎಂದು ವರದಿಯಾಗಿದೆ.

Exit mobile version