Site icon Vistara News

Gattimela Serial: ಅಂತ್ಯ ಹಾಡುತ್ತಿದೆ ‘ಗಟ್ಟಿಮೇಳ’ ಧಾರಾವಾಹಿ; ಶೂಟಿಂಗ್ ಮುಕ್ತಾಯ

Gattimela Serial Final Episode Will Be Telecast On January 5th

ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿ ಈಗಾಗಲೇ 1200 ಎಪಿಸೋಡ್ ಪೂರ್ಣಗೊಳಿಸಿದೆ. ಜನವರಿ 5ರಂದು (ಶುಕ್ರವಾರ) ಧಾರಾವಾಹಿ ಕೊನೆಗೊಳ್ಳಲಿದೆ. ರಕ್ಷ್ ಹಾಗೂ ನಿಶಾ ರವಿಕೃಷ್ಣನ್ ಅವರು ‘ಗಟ್ಟಿಮೇಳ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇದುವೆರೆಗೆ ಟಿಆರ್‌ಪಿಯಲ್ಲಿ ಎರಡು ಹಾಗೂ ಮೂರನೇ ಸ್ಥಾನ ಕಾಪಾಡಿಕೊಂಡು ಬರುತ್ತಲೇ ಇತ್ತು. ಆದರೀಗ ಧಾರಾವಾಹಿ ಕೊನೆಗೂ ಅಂತ್ಯ ಹಾಡುತ್ತಿದೆ.

ರಕ್ಷ್ ರಾಮ್, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ಇದರಲ್ಲಿ ಇದ್ದಾರೆ. ಈ ಮಧ್ಯಮ ವರ್ಗದ ಮನೆಯ ಹೆಣ್ಣು ಮಕ್ಕಳನ್ನು ಹೇಗೆ ಪರಿಮಳಾ ಹಾಗೂ ಮಂಜುನಾಥ್ ದಂಪತಿ ಮದುವೆ ಮಾಡುತ್ತಾರೆ ಎಂಬುದು ಒನ್‌ಲೈನ್‌ ಸ್ಟೋರಿ. 2019ರ ಮಾರ್ಚ್ ತಿಂಗಳಲ್ಲಿ ಧಾರಾವಾಹಿ ಪ್ರಾರಂಭಗೊಂಡಿತ್ತು.  ಕಳೆದ ಕೆಲ ತಿಂಗಳಿಂದ ಧಾರಾವಾಹಿ ಪೂರ್ಣಗೊಳ್ಳುವ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಈಗ ಕಥೆ ಅಂತಿಮ ಹಂತ ತಲುಪಿದೆ. ಈ ಜಾಗದಲ್ಲಿ ಹೊಸ ಧಾರಾವಾಹಿ ಪ್ರಸಾರ ಕಾಣಲಿದೆ.

ಧ್ರುವ ಅಗ್ನಿ ಮತ್ತು ಬೆಟ್ಟಪ್ಪನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಗಟ್ಟಿಮೇಳ ಧಾರಾವಾಹಿ ವೀಕ್ಷಕರಿಗೆ ಕುತೂಹಲ ಮೂಡಿಸುತ್ತಿರುವ ಈ ಸಂದರ್ಭದಲ್ಲೇ ಮುಕ್ತಾಯ ಕಾಣುವ ಸಮಯ ಬಂದಿದೆ ಎನ್ನಲಾಗುತ್ತಿದೆ. ಈಗಾಗಲೇ ಕುಟುಂಬಕ್ಕೆ ಇಷ್ಟು ವರ್ಷ ತಿಳಿಯದೇ ಇದ್ದ ಸತ್ಯ ಬಯಲಾಗಿದೆ. ಇನ್ನೇನಿದ್ದರೂ ಸೂರ್ಯನಾರಾಯಣ, ವೇದಾಂತ್, ವಿಕ್ಕಿ, ಎಲ್ಲರೂ ಮನೆ ಸೇರಬೇಕಿದೆ. ಅಗ್ನಿ ಮತ್ತು ಬೆಟ್ಟಪ್ಪನಿಗೆ ಶಿಕ್ಷೆ ನೀಡಬೇಕಿದೆ ಅಷ್ಟೇ. ಧಾರಾವಾಹಿಯು ಕೊನೆಯ ಹಂತವನ್ನು ತಲುಪಿದ್ದು, ಕೊನೆಯ ದಿನದ ಶೂಟಿಂಗ್ ಕೂಡ ಮುಕ್ತಾಯಗೊಂಡಿದೆ.

ಇದನ್ನೂ ಓದಿ: ಖೇಲ್‌ರತ್ನ, ಅರ್ಜುನ ಪ್ರಶಸ್ತಿ ವಾಪಸ್​ ಮಾಡುವ ನಿರ್ಧಾರ ಘೋಷಿಸಿ ಮೋದಿಗೆ ಪತ್ರ ಬರೆದ ವಿನೇಶ್‌ ಫೋಗಟ್

ಇದಾದ ಬಳಿಕ ಹೊಸ ಧಾರಾವಾಹಿ ಯಾವುದು ಎಂಬುದು ಇದುವೆರೆಗೆ ತಿಳಿದು ಬಂದಿಲ್ಲ. ಕೌಟುಂಬಿಕ ಧಾರಾವಾಹಿಯೇ ಬರಲಿದೆ ಎಂದು ಮೂಲ ಹೇಳುತ್ತಿದೆ. ಕೆಲವೇ ದಿನಗಳಲ್ಲಿ ಜೀ ವಾಹಿನಿ ಹೊಸ ಧಾರಾವಾಹಿ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ. ಇನ್ನು ರಕ್ಷ್‌ ಹಾಗೂ ನಿಶಾ ಅವರು ಸಿನಿರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ʻಬರ್ಮʼ (BURMA Kannada New Movie) ಎಂಬ ವಿಭಿನ್ನ ಬಗೆಯ ಟೈಟಲ್ ಇರುವ ಸಿನಿಮಾಗೆ ಗಟ್ಟಿಮೇಳ ಧಾರಾವಾಹಿಯ ʻರಕ್ಷ್ ರಾಮ್ʼ (Rakksh Raam) ನಾಯಕ.

ಬರ್ಮʼ ಆ್ಯಕ್ಷನ್ ಮತ್ತು ಎಂಟರ್​ಟೈನ್​ನ್ಮೆಂಟ್​ ಸಿನಿಮಾವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದೆ. ವಿ. ಹರಿಕೃಷ್ಣ ಈ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಬಹದ್ದೂರ್, ಭರ್ಜರಿ ಸಿನಿಮಾದ ಮೂಲಕ ಮೋಡಿ ಮಾಡಿದ್ದ ಹರಿಕೃಷ್ಣ ಹಾಗೂ ಚೇತನ್ (CHETHAN KUMAR P) ಜೋಡಿ ಮೂರನೇ ಬಾರಿಗೆ ಒಂದಾಗುತ್ತಿರುವುದು ಸಿನಿರಸಿಕರಿಗೆ ನಿರೀಕ್ಷೆ ಹೆಚ್ಚಿಸಿದೆ.

ರಕ್ಷ್ ರಾಮ್ ಯಾರು?

ʻಗಟ್ಟಿಮೇಳ’ ಸೀರಿಯಲ್‌ನಲ್ಲಿ ರಕ್ಷ್ ರಾಮ್‌ ಅವರು ವೇದಾಂತ್ ವಸಿಷ್ಠ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಪುಟ್ಟಗೌರಿ ಮದುವೆ’ ಸೀರಿಯಲ್ ಮೂಲಕ ಅವರು ಸಾಕಷ್ಟು ಖ್ಯಾತಿ ಪಡೆದಿದ್ದರು. ಈ ಧಾರಾವಾಹಿಯಲ್ಲಿ ರಕ್ಷ್‌ ಮತ್ತು ನಿಶಾ ರವಿಕೃಷ್ಣನ್ ಅವರ ಜೋಡಿ ನೋಡುಗರ ಮನಸ್ಸು ಗೆದ್ದಿದೆ.

ಲಾಕ್‌ಡೌನ್ ಘೋಷಣೆಯಾಗುವ ಮುನ್ನ ರಕ್ಷ್ ರಾಮ್‌ ಅವರ ಅಭಿನಯದ ‘ನರಗುಂದ ಬಂಡಾಯ’ ಸಿನಿಮಾ ರಿಲೀಸ್ ಆಗಿತ್ತು. ರಕ್ಷ್ ಕೈಯಲ್ಲಿ ಇನ್ನು ಕೆಲ ಸಿನಿಮಾಗಳಿವೆ.

Exit mobile version