Site icon Vistara News

Actress Mahalakshmi: ನಟಿ ಮಹಾಲಕ್ಷ್ಮೀ ಪತಿ ರವೀಂದರ್ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ!

Mahalakshmi Husband Ravinder Chandrasekaran Hospitalized in ICU

ಬೆಂಗಳೂರು: ನಟಿ ಮಹಾಲಕ್ಷ್ಮೀ (mahalakshmi) ಹಾಗೂ ಅವರ ಪತಿ ರವೀಂದರ್ ಚಂದ್ರಶೇಖರ್ (Ravindar Chandrasekaran) ಆಗಾಗ ಸುದ್ದಿಯಲ್ಲಿ ಇರುತ್ತಾರೆ. ನಿರ್ಮಾಪಕರೊಬ್ಬರಿಗೆ ಮೋಸ ಮಾಡಿರುವ ಪ್ರಕರಣದಲ್ಲಿ ರವೀಂದರ್ ಬಂಧವಾಗಿತ್ತು. ಆ ವಿಚಾರ ಕೂಡ ಭಾರೀ ಸುದ್ದಿ ಆಗಿತ್ತು. ಇದೀಗ ರವೀಂದರ್ ಅವರಿಗೆ ಆಸ್ಪತ್ರೆಗೆ ದಾಖಲು ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಒಂದು ವಾರದಿಂದ ಟ್ರೀಟ್​ಮೆಂಟ್​ ಕೊಡಲಾಗುತ್ತಿದೆ.

ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ತಮಿಳು ಬಿಗ್‌ಬಾಸ್ ಕಾರ್ಯಕ್ರಮದ ಬಗ್ಗೆ ರವೀಂದರ್ ಮಾತನಾಡುತ್ತಿರುತ್ತಾರೆ. ಎಲ್ಲರೂ ಫೇಕ್ ಎಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುತ್ತಾರೆ. ಆದರೆ ಕೆಲವು ದಿನಗಳಿಂದ ರವೀಂದರ್‌ ಅವರು ವಿಡಿಯೊಗಳನ್ನು ಪೋಸ್ಟ್‌ ಮಾಡಿರಲಿಲ್ಲ. ಈ ಬಗ್ಗೆ ಅವರ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಕೂಡ ಮಾಡಿದ್ದರು. ಈ ಬಗ್ಗೆ ನಟಿ ಮಹಾಲಕ್ಷ್ಮೀ‌ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅವರ ಫ್ಯಾನ್ಸ್‌ಗೆ ಪ್ರತಿಕ್ರಿಯೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ರವೀಂದರ್ ಆಸ್ಪತ್ರೆಗೆ ದಾಖಲಾಗಿರುವ ವಿಡಿಯೊ ವೈರಲ್‌ ಆಗಿದೆ.

ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆಯೂ ರವೀಂದರ್‌ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ʻʻಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು ಎದೆನೋವು ಜಾಸ್ತಿಯಿದೆ. ಉಸಿರಾಟದ ಸಮಸ್ತೆ ಜಾಸ್ತಿ ಇದ್ದಿದ್ದರಿಂದ ಐಸಿಯುನಲ್ಲಿ ಒಂದು ಚಿಕಿತ್ಸೆ ಪಡೆದು ಬಂದೆ. ಐಸಿಯುನಲ್ಲಿ ಇದ್ದಾಗಲೂ ಬಿಗ್‌ಬಾಸ್ ಶೋ ನೋಡ್ದೆ. ಅದರ ಬಗ್ಗೆ ಮಾತನಾಡುತ್ತೀನಿ” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Actress Mahalakshmi: ಮೋಸ ಮಾಡಿ ಮದ್ವೆಯಾದ; ಗಂಡನ ವಿರುದ್ಧ ನಟಿ ಮಹಾಲಕ್ಷ್ಮಿ ಆರೋಪ?

ರವೀಂದರ್‌ ಅರೆಸ್ಟ್‌ ಆಗಿದ್ದೇಕೆ?

ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ ಎಂದು ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ಚೆನ್ನೈ ಮೂಲದ ಉದ್ಯಮಿ ಬಾಲಾಜಿ ಎಂಬುವರ ಬಳಿ 16 ಕೋಟಿ ಪಡೆದು ವಂಚಿಸಿದ್ದರು.

ಮದುವೆ ವಿಚಾರದಲ್ಲಿ ಮಹಾಲಕ್ಷ್ಮೀ-ರವೀಂದರ್‌ ಫೇಮಸ್‌

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ವಿವಾಹವಾಗಿದ್ದ ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮೀ (Actress Mahalakshmi) ಮತ್ತು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್​ ಸೆಪ್ಟೆಂಬರ್​ 1ರಂದು ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡರು.

ಅಂದಹಾಗೆ, ಮಹಾಲಕ್ಷ್ಮೀ ಮತ್ತು ರವಿಚಂದ್ರಶೇಖರ್ ಅವರಿಬ್ಬರಿಗೂ ಇದು ಎರಡನೇ ಮದುವೆ. ವಯಸ್ಸಿನಲ್ಲೂ ತುಂಬ ಅಂತರವಿದೆ. ರವೀಂದರ್ ಚಂದ್ರಶೇಖರ್ ಅವರು ವಿಪರೀತ ದಪ್ಪ ಇರುವ ವಿಷಯಕ್ಕೂ ಟ್ರೋಲ್​ ಆಗಿದ್ದರು. ಮಹಾಲಕ್ಷ್ಮೀ ಅವರು ರವಿಚಂದ್ರಶೇಖರ್​ ಬಳಿ ಇರುವ ಹಣ ನೋಡಿ ಮರುಳಾಗಿ ಮದುವೆಯಾಗಿದ್ದಾರೆ ಎಂದೂ ಅನೇಕರು ವ್ಯಂಗ್ಯವಾಡಿದ್ದರು. ಈ ಜೋಡಿಯ ಮಧ್ಯೆಯ ಪ್ರೀತಿಯೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಮಡದಿ ಮಹಾಲಕ್ಷ್ಮಿ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದ ರವಿಚಂದ್ರಶೇಖರ್​, ‘ಈಕೆ ನನ್ನ ಜೀವನದ 8ನೇ ಅಚ್ಚರಿ’ ಎಂದು ಹೇಳಿದ್ದರು.

Exit mobile version