Site icon Vistara News

Mahanati Show: ಈ` ಮಹಾನಟಿ’ ಸ್ಪರ್ಧಿಗೆ ಶುಭ ಹಾರೈಸಿದ್ರಂತೆ ದರ್ಶನ್‌; ಅವರ ತಂದೆ ಕೂಡ ದಚ್ಚುಗೆ ಕ್ಲೋಸ್‌ ಫ್ರೆಂಡ್‌!

Mahanati Show Darshan wished Priyanka the contestant

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ‘ಮಹಾನಟಿ’ ರಿಯಾಲಿಟಿ ಶೋ (Mahanati Show) ಗ್ರ್ಯಾಂಡ್ ಫಿನಾಲೆಯ ದಿನ ಐದು ಫೈನಲಿಸ್ಟ್‌ಗಳು (Mahanati Grand Finale) ವೇದಿಕೆಗೆ ತಲುಪಿದ್ದರು‌. ಮೂರುವರೆ ತಿಂಗಳಿಂದ ಎಲ್ಲರನ್ನು ರಂಜಿಸಿದ ಈ ಶೋ ಕೊನೆಗೊಂಡಿತ್ತು. ಅದ್ಧೂರಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಮೈಸೂರಿನಲ್ಲಿ ಪ್ರಿಯಾಂಕಾ ಮಹಾನಟಿ ಸೀಸನ್‌ 1ರ ವಿಜೇತೆಯಾಗಿ ಹೊರಹೊಮ್ಮಿದ್ದರು. ಇದೀಗ ಎಲ್ಲೋ ಜೋಗಪ್ಪ ನಿನ್​ ಅರಮನೆ…ಹಾಡಿಗೆ ಪ್ರಿಯಾಂಕಾ ರೀಲ್ಸ್​ ಮಾಡಿದ್ದು, ಅದನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. ಅಂದಹಾಗೆ, ಪ್ರಿಯಾಂಕಾ ಅವರು ಮೈಸೂರಿನವರು. ಈ ಶೋನಲ್ಲಿ ಇವರು ಜೈಲಿನಲ್ಲಿರುವ ದರ್ಶನ್​ ಕುರಿತು ಹೇಳಿಕೊಂಡಿದ್ದರು.

ʻʻತಮ್ಮ ತಂದೆ ಹಾಗೂ ದರ್ಶನ್ ಕ್ಲೋಸ್​ ಫ್ರೆಂಡ್ಸ್​. ನಾನು ಈ ಶೋಗೆ ಆಯ್ಕೆ ಆಗಿದ್ದ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದರು. ಚೆನ್ನಾಗಿ ಹೇಳುವುದನ್ನು ಕೇಳು ಎಂದು ವಿಶ್​ ಮಾಡಿದ್ದರುʼʼ ಎಂಬುದಾಗಿ ಹೇಳಿದ್ದರು. ಮಹಾನಟಿಯಲ್ಲಿ ಸೆಲೆಕ್ಟ್​ ಆದ ಬಳಿಕ ತಾವು ದರ್ಶನ್ ಅವರನ್ನ ಖುದ್ದು ಭೇಟಿಯಾಗಿ ಆಶೀರ್ವಾದ ಪಡೆದಿರುವುದಾಗಿಯೂ ಹೇಳಿಕೊಂಡಿದ್ದರು.

ಅಷ್ಟಕ್ಕೂ ಪ್ರಿಯಾಂಕಾ ಅವರು ಹಲವಾರು ರೌಂಡ್ಸ್​ಗಳಲ್ಲಿ ಉತ್ತಮ ರೀತಿಯಲ್ಲಿಯೇ ಅಭಿನಯದ ಮೂಲಕ ತೀರ್ಪುಗಾರರ ಗಮನ ಸೆಳೆದಿದ್ದರು. ತನ್ನ ಕನಸುಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಮನೆಯವರ ಬಲವಂತಕ್ಕೆ ಮದುವೆಯಾದ ಯುವತಿಯ ಕಥೆ ಸಾರುವ ‘ಅನುರಾಗ’ ಎನ್ನುವ ಶಾರ್ಟ್ ಫಿಲಂನಲ್ಲಿ ನಟಿಸಿ ಎಲ್ಲರ ಹೃದಯ ಗೆದ್ದಿದ್ದರು.

ಇದನ್ನೂ ಓದಿ: Mahanati Show: ಫಿನಾಲೆಗೆ ಆಯ್ಕೆಯಾಗಿಲ್ಲ ದಾವಣಗೆರೆ ಟೀಚರ್; ಕೋಪಗೊಂಡ ನೆಟ್ಟಿಗರು!

.ಪ್ರಿಯಾಂಕಗೆ ಸಿಕ್ಕಿದ್ದು 15 ಲಕ್ಷದ ಪ್ಯೂರ್ ಚಿನ್ನದ ಕಿರೀಟ. ತಮ್ಮ ಅಭಿನಯದಿಂದ ಧನ್ಯಶ್ರೀ ಗಮನ ಸೆಳೆದರೆ ಅವರ ತಂದೆ ಹಾಸ್ಯದಿಂದ ಗಮನ ಸೆಳೆದರು. ಇದೀಗ ಎರಡನೇ ರನ್ನರ್ ಅಪ್ ಆಗಿ ಹತ್ತು ಲಕ್ಷ ಬಹುಮಾನವನ್ನು ಧನ್ಯಶ್ರೀ ಪಡೆದಿದ್ದಾರೆ.  ಮೂರನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ, ನಾಲ್ಕನೇ ಸ್ಥಾನ ಪಡೆದ ಆರಾಧನಾ ಭಟ್‌, ಐದನೇ ಸ್ಥಾನ ಶ್ವೇತಾ ಭಟ್‌ಗೆ ತಲಾ ಒಂದು ಲಕ್ಷ ಬಹುಮಾನ ನೀಡಲಾಯಿತು. ಮೂರನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ, ನಾಲ್ಕನೇ ಸ್ಥಾನ ಪಡೆದ ಆರಾಧನಾ ಭಟ್‌, ಐದನೇ ಸ್ಥಾನ ಶ್ವೇತಾ ಭಟ್‌ಗೆ ತಲಾ ಒಂದು ಲಕ್ಷ ಬಹುಮಾನ ನೀಡಲಾಯಿತು.

Exit mobile version