Site icon Vistara News

Muddulakshmi Serial: ಕಿರುತೆರೆ ಲೋಕಕ್ಕೆ ಮತ್ತೆ ಎಂಟ್ರಿ ಕೊಡುತ್ತಿರುವ ʻಮುದ್ದು ಲಕ್ಷ್ಮೀʼ ಖ್ಯಾತಿಯ ಅಶ್ವಿನಿ

Muddulakshmi Serial Ashwini re entry

ಬೆಂಗಳೂರು : ʻಅನುರಾಗ ಸಂಗಮʼ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅಶ್ವಿನಿ ಅವರು ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ʻಮುದ್ದು ಲಕ್ಷ್ಮೀʼ ಧಾರಾವಾಹಿ (Muddulakshmi Serial) ಮೂಲಕ ಮನೆಮಾತಾಗಿದ್ದ ಇವರು, ʻʻಮದ್ದು ಮಣಿಗಳುʼʼಎಂದು ಹೊಸ ಅಧ್ಯಾಯ ಧಾರಾವಾಹಿ ಶುರು ಮಾಡಿದೆ. ಇದೀಗ ಅಶ್ವಿನಿ ಹೊಸ ರೂಪದಲ್ಲಿ ʻಮುದ್ದು ಮಣಿಗಳುʼ ಧಾರಾವಾಹಿಯಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಶುರು ಮಾಡುತ್ತಿದ್ದಾರೆ.

ಮುದ್ದು ಲಕ್ಷ್ಮೀ ಧಾರಾವಾಹಿ ಸಾವಿರ ಸಂಚಿಕೆ ಪೂರೈಸಿದ ನಂತರ ಮುದ್ದು ಮಣಿಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಅಧ್ಯಾಯ ಎರಡು ಶುರುವಾಗಿತ್ತು. ಇದರಲ್ಲಿ ಮತ್ತೆ ಅಶ್ವಿನಿ ಅವರು ಎಂಟ್ರಿ ಕೊಡುತ್ತಿದ್ದಾರೆ. ಕುತಂತ್ರಿ ಶಾರ್ವರಿಗೆ ಬುದ್ಧಿ ಕಲಿಸಿ, ಮಕ್ಕಳನ್ನು ಕಾಪಾಡಲು ಬರುತ್ತಿದ್ದಾಳೆ ‘ಮುದ್ದುಲಕ್ಷ್ಮಿ’ .

ಇದನ್ನೂ ಓದಿ: Kantara Movie | ಕಿರುತೆರೆಯಲ್ಲಿ ಕಾಂತಾರ: ಡೇಟ್‌ ರಿವೀಲ್‌, ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಸಿನಿಮಾ ಅಬ್ಬರ

ʻಅನುರಾಗ ಸಂಗಮ’ ಧಾರಾವಾಹಿಯಲ್ಲಿ ಛಾಯಾ ಪಾತ್ರದ ಮೂಲಕ ಮನ ಸೆಳೆದರು. ‘ಕುಲವಧು’ ಧಾರಾವಾಹಿಯಲ್ಲಿ ಅಶ್ವಿನಿ ಮೊದಲ ಬಾರಿಗೆ ಖಳನಾಯಕಿಯಾಗಿ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾದರು. ತದ ನಂತರ ಪೌರಾಣಿಕ ಧಾರಾವಾಹಿ ‘ಗಿರಿಜಾ ಕಲ್ಯಾಣ’ದಲ್ಲಿ ಅಭಿನಯಿಸಿದರು. ಪರಭಾಷೆಯಲ್ಲೂ ನಟನಾ ವೃತ್ತಿಗೆ ನಟಿ ಕಾಲಿಟ್ಟಿದ್ದು, ತೆಲುಗಿನ ʻʻಮಟ್ಟಿಗಾಜಲುʼʼಧಾರಾವಾಹಿಯಲ್ಲಿ ಚಿಟ್ಟಿಯಾಗಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: Vaishnavi Gowda | ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡ್ರಾ? ಶಂಕರ್​ ಬಿದರಿಯೂ ಇದ್ದಾರೆ ಫೋಟೋದಲ್ಲಿ!

Exit mobile version