Site icon Vistara News

Neenade Naa Serial: ರಿಯಲ್‌ ಲೈಫಲ್ಲೂ ಒಂದಾಗ್ತಿದ್ದಾರಾ ವಿಕ್ರಂ-ವೇದಾ? ಮದುವೆ ಯಾವಾಗ?

Neenade Naa Serial Dileep R Shetty khushi will be marry in real life

ಬೆಂಗಳೂರು: ಕೆಲ ಸಿನಿಮಾ ನಟನ ನಟಿಯರು ತೆರೆ ಮೇಲೆ ಒಂದಾಗಿರುವುದಲ್ಲದೇ ರಿಯಲ್‌ ಲೈಫ್‌ನಲ್ಲಿಯೂ ಒಂದಾಗಿರುವ ಅದೆಷ್ಟೋ ಉದಾಹರಣೆಗಳಿವೆ. ಜತೆಗೆ ವೀಕ್ಷಕರಿಗೂ ನಟ ನಟಿಯ ಜೋಡಿ ಇಷ್ಟವಾದರೆ ರಿಯಲ್‌ ಲೈಫ್‌ನಲ್ಲಿಯೂ ಒಂದಾಗಿ ಎಂದು ಆಶಿಸುತ್ತಾರೆ. ಇದೀಗ  “ನೀನಾದೆ ನಾ” (Neenade Naa Serial) ಧಾರಾವಾಹಿ ನಟ ನಟಿ ವಿಕ್ರಂ-ವೇದಾ ಇಬ್ಬರ ನಡುವೆ ಲವ್ವಾಗಿದೆ, ಮುಂದೆ ಇಬ್ಬರೂ ಮುದುವೆಯಾಗಲಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಈ ಜೋಡಿಯ ಮತ್ತೊಂದು ಸ್ಪೆಷಾಲಿಟಿ ಅಂದರೆ ಇದರಲ್ಲಿ ವಿಕ್ರಂ ಪಾತ್ರ ಮಾಡೋ ದಿಲೀಪ್ ಆರಡಿ ಕಟೌಟ್‌ . ಆದರೆ ವೇದಾ ಮಾತ್ರ ಕುಳ್ಳಿ. ವೇದಾ ಪಾತ್ರಧಾರಿ ಖುಷಿ, ವಿಕ್ರಂ ಪಾತ್ರ ಮಾಡುತ್ತಿರುವುದು ದಿಲೀಪ್‌. ಇದೀಗ ಇವರಿಬ್ಬರ ನಟನೆಗೆ ಹಾಗೇ ಜೋಡಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಕೆಲ ದಿನಗಳ ಹಿಂದೆ ತೆಲುಗು ಕಾರ್ಯಕ್ರಮಕ್ಕೆ ದಿಲೀಪ್ ಅವರ ವಿಶೇಷ ಸ್ನೇಹಿತೆ ಎಂದು ಸಪ್ರೈಸ್‌ ಆಗಿ ಖುಷಿ ಅವರನ್ನು ಆಹ್ವಾನಿಸಲಾಗಿತ್ತು. ಇಬ್ಬರ ಪ್ರೀತಿಗೆ ಬಿದ್ದಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು.

ಅಭಿಮಾನಿಗಳು ಕೂಡ ಇಬ್ಬರ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಪೇಜ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ. ನೀವಿಬ್ಬರು ನಿಜಜೀವನದಲ್ಲಿ ಒಂದಾದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.ಸ್ವತಃ ದಿಲೀಪ್ ಶೆಟ್ಟಿ ಈ ಚರ್ಚೆ ಬಗ್ಗೆ ಮಾತನಾಡಿದ್ದಾರೆ. ಯಾಕೆ ರಿಯಲ್‌ ಲೈಫ್‌ನಲ್ಲೂ ಜೋಡಿ ಆಗಬಾರದು? ಎನ್ನುವ ಪ್ರಶ್ನೆಗೆ “ಅದೆಲ್ಲಾ ವಿಧಿ. ಡೆಸ್ಟಿನಿಯಲ್ಲಿ ಏನು ಬರೆದಿರುತ್ತಾರೆ? ಅದೇ ಆಗುವುದು. ನೋಡೋಣ, ಡೆಸ್ಟಿನಿ ಏನು ಹೇಳುತ್ತದೆ” ಎಂದು ಹೇಳಿ ದಿಲೀಪ್‌ ನಕ್ಕಿದ್ದಾರೆ.

ಇದನ್ನೂ ಓದಿ: Neenade Naa Serial: ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನ ಹೊಚ್ಚ ಹೊಸ ಧಾರಾವಾಹಿ ‘ನೀನಾದೆ ನಾ’

 ‘ನೀನಾದೆ ನಾ’ ಧಾರಾವಾಹಿ

ವಿದ್ಯಾಭ್ಯಾಸ ಮುಗಿಸಿದರು ಕೂಡ ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ ಈ ಕಥಾ ನಾಯಕಿ ‘ವೇದಾ’. ಅಜ್ಜಿಯ ಪ್ರೀತಿಯ ಮೊಮ್ಮಗಳು ‘ವೇದಾ’ ನೇರ ನಡೆಯನ್ನು ಹೊಂದಿರುತ್ತಾಳೆ. ಈಕೆಗೆ ಮನೆಯವರ ಸಮ್ಮುಖದಲ್ಲಿ, ಹುಟ್ಟಿ ಬೆಳೆದ ಊರಲ್ಲಿ, ಮನೆಯವರು ನೋಡಿದ ಹುಡುಗನೊಂದಿಗೆ ಮದುವೆಯಾಗಬೇಕು ಎಂಬ ಆಸೆ ಇರುತ್ತದೆ. ಆದರೆ ಮುಂದೆ ನಡೆಯುವುದು ಮಾತ್ರ ವಿಧಿಲಿಖಿತ.

ಕಥಾ ನಾಯಕ ವಿಕ್ರಮ್. ಗೂಂಡಾಗಿರಿ ಮಾಡಿಕೊಂಡು, ತನ್ನ ಬಾಸ್ ಹೇಳಿದನ್ನು ಚಾಚು ತಪ್ಪದೆ ಮಾರುವ ಈತನಿಗೆ , ಆಚಾರ-ವಿಚಾರ ಸಂಸ್ಕಾರವಂತೂ ಇಲ್ಲವೇ ಇಲ್ಲ. ಪದವಿ ಪಡೆದಿದ್ದರೂ ಕೂಡ ಈತ ಹೀಗಿರುವುದರಿಂದ ಅಪ್ಪನಿಗೂ ಇವನ ಮೇಲೆ ಸಿಕ್ಕಾಪಟ್ಟೆ ಕೋಪವಿರುತ್ತದೆ. ಅಚಾನಕ್ ಆಗಿ ಒಂದು ದಿನ ದೇವರ ಸನ್ನಿಧಾನದಲ್ಲಿ ವಿಧಿಯಾಟದಂತೆ ವಿಕ್ರಮ್- ವೇದಾಳಿಗೆ ತಾಳಿ ಕಟ್ಟುತ್ತಾನೆ.

ನೀನಾದೆ ನಾ’ ಧಾರಾವಾಹಿಯು ಅದ್ಭುತ ತಾರಾಬಳಗವನ್ನು ಹೊಂದಿದ್ದು, ನಾಯಕನ ಪಾತ್ರದಲ್ಲಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಗೆ ಖ್ಯಾತ ನಟ ರಮೇಶ್ ಅರವಿಂರ್‌ ಅವರು ‘ವಂದನ ಮೀಡಿಯಾ’ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

Exit mobile version