Site icon Vistara News

Seetha Rama Serial: ಪ್ರೇಕ್ಷಕರ ಅಚ್ಚುಮೆಚ್ಚಿನ `ಸೀತಾ ರಾಮ’ ಧಾರಾವಾಹಿಯ ಸಿಹಿ ಕನ್ನಡದವಳಲ್ಲ!

ritu sing with Vaishnavi Gowda

ಬೆಂಗಳೂರು: ಜೀ ವಾಹಿನಿಯಲ್ಲಿ `ಸೀತಾ ರಾಮ’ ಧಾರಾವಾಹಿ (Seetha Rama Serial) ಪ್ರಸಾರ ಕಾಣುತ್ತಿದೆ. ಒಂದು ವಾರದಲ್ಲೇ ಟಿಆರ್‌ಪಿ ನಾಲ್ಕನೇ ಸ್ಥಾನದಲ್ಲಿದೆ. ಪ್ರೇಕ್ಷಕರು ಈ ಧಾರಾವಾಹಿ ನೋಡಿ ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಈಗ ಎಲ್ಲ ಕಡೆ ಈ ಧಾರಾವಾಹಿಯ ಪುಟ್ಟ ಪೋರಿ ಸಿಹಿಯದೇ ಮಾತು. ಇದರಲ್ಲಿ ಸೀತೆ ಮತ್ತು ರಾಮ ನಾಯಕ, ನಾಯಕಿ. ಇವರಿಬ್ಬರ ನಡುವೆ ಇರುವ ಮುದ್ದು ಪುಟಾಣಿ ಹೆಸರು ಸಿಹಿ. ಈ ಮಗುವಿನ ನಿಜವಾದ ಹೆಸರು ರೀತು ಸಿಂಗ್‌. ರಿತು ಸಿಂಗ್‌ ಫ್ಯಾಮಿಲಿ ಈಗ ಬೆಂಗಳೂರಲ್ಲಿ ವಾಸವಾಗಿದ್ದರೂ ಇವರ ಮೂಲ ಮನೆ ಇರುವುದು ನೇಪಾಳದಲ್ಲಿ.

ಸಿಹಿ ಪಾತ್ರ ನಿಭಾಯಿಸುತ್ತಿರುವ ರಿತು

ಧಾರಾವಾಹಿಯಲ್ಲಿ (seetha rama zee kannada serial) ಈ ಮಗುವಿಗೆ ಮಧುಮೇಹ ಸಮಸ್ಯೆ ಇದೆ. ಪ್ರತಿದಿನ ಸಿಹಿ ಇನ್ಸುಲಿನ್‌ ಇಂಜೆಕ್ಷನ್ ತಗೆದುಕೊಳ್ಳಬೇಕು. ಇವಳ ಅಮ್ಮ ಸೀತಮ್ಮ (ವೈಷ್ಣವಿ ಗೌಡ) ಮಗುವಿಗೆ ಇಂಜೆಕ್ಷನ್‌ ಕೊಡುವಾಗ ಅಳುತ್ತಾಳೆ. ಆದರೆ ಸಿಹಿ ಮಾತ್ರ ತಾಯಿಯಂತೆ ಅಮ್ಮನನ್ನು ಸಮಾಧಾನ ಮಾಡುತ್ತಾಳೆ. ಸೀತಾರಾಮ ಪ್ರೋಮೊ ಬಂದಾಗ ಒಂದಿಷ್ಟು ಪ್ರೇಕ್ಷಕರು ಈ ಮಗುವನ್ನು ಎಲ್ಲೋ ನೋಡಿದ ಹಾಗೇ ಇದೆಯಲ್ಲಾ ಎಂದು ಹೇಳಿದ್ದು ಉಂಟು. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ರಿತೂ ಸಿಂಗ್ ಕನ್ನಡಿಗರ ಗಮನ ಸೆಳೆದಿದ್ದಳು. ರವಿಚಂದ್ರನ್‌ ಅವರನ್ನು ಬಹಳ ಬಹಳ ಇಷ್ಟಪಡ್ತಿದ್ದ ಈ ಪುಟಾಣಿ ಈಗ ಸೀತಾರಾಮದಲ್ಲಿ ಪ್ರಮುಖ ಹೈಲೈಟ್‌. 5 ವರ್ಷ ರಿತು ಸಿಂಗ್‌ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಸಿಹಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Seetha Raama Serial: ಸೀತಾ ರಾಮ ಧಾರಾವಾಹಿ ರಿಲೀಸ್‌ ಡೇಟ್‌ ಯಾವಾಗ? ಗೊತ್ತಾಗೋವರೆಗೂ ನಟಿಸಲ್ಲ ಎಂದ ರೀತು ಸಿಂಗ್!

ಏನಿದು ಕಥೆ?

ಗಂಡನಿಂದ ದೂರ ಆಗಿರುವ ಸೀತಾಗೆ ಸಿಹಿ ಎಂಬ ಪುಟ್ಟ ಮಗಳಿದ್ದಾಳೆ. ಗಂಡ ಮಾಡಿದ ಸಾಲದ ಜತೆಗೆ ಶುಗರ್ ಕಾಯಿಲೆ ಇರುವ ಮಗಳನ್ನು ಸೀತಾ ಸಾಕಬೇಕಿದೆ. ಇನ್ನೊಂದು ಕಡೆ ಚಿಕ್ಕಮ್ಮ ಭಾರ್ಗವಿಯ ಮೋಸ, ಕುತಂತ್ರ ಅರಿಯದೆ ನಾಯಕ ರಾಮ್ ಜೀವನ ನಡೆಸುತ್ತಿದ್ದಾನೆ. ಒಮ್ಮೆ ಪ್ರೀತಿ ಕಳೆದುಕೊಂಡಿರುವ ರಾಮ್ ಮತ್ತೆ ಪ್ರೀತಿ ಹುಡುಕಿಕೊಳ್ಳುತ್ತಾನಾ? ಸಿಹಿ ಸೀತಾ-ರಾಮ್‌ರನ್ನು ಒಂದು ಮಾಡುತ್ತಾಳಾ ಎಂದು ಕಾದು ನೋಡಬೇಕಿದೆ.

ʻಸೀತಾ ರಾಮʼ ಟೈಟಲ್‌ ಟ್ರ್ಯಾಕ್‌ ಮೋಡಿ

ಈ ಹಾಡಿಗೆ ಅದ್ಭುತವಾದ ಸಾಲುಗಳನ್ನು ಬರೆದು ಜನರ ಮನಸ್ಸನ್ನು ಕದ್ದಿದವರು ಬೇರೆ ಯಾರು ಅಲ್ಲ ʻಕಾಂತಾರʼ ಸಿನಿಮಾದ ಸಿಂಗಾರ ಸಿರಿಯೇ ಹಾಡು ಬರೆದ ಪ್ರಮೋದ್‌ ಮರವಂತೆ. ಸೀತಾ ರಾಮ ಧಾರಾವಾಹಿ ಹಾಡು ಎಲ್ಲರ ಮನ ಗೆಲ್ಲುತ್ತಿದೆ.

ಗಾಯಕ ಶಶಾಂಕ್ ಶೇಷಗಿರಿ ಸಂಯೋಜನೆಯ ಈ ಹಾಡನ್ನು ಕಾಂತಾರ ಚಿತ್ರದ ಸಿಂಗಾರಿ ಸಿರಿಯೇ ಖ್ಯಾತಿಯ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಬರೆದಿದ್ದಾರೆ. ಪ್ರಮೋದ್ ಬರೆದ ಈ ಸಾಲುಗಳನ್ನು ಅಷ್ಟೇ ಅದ್ಭುತವಾಗಿಯೇ ಗಾಯಕ ಕಲ್ಯಾಣ್ ಮಂಜುನಾಥ್ ಹಾಡಿದ್ದಾರೆ.

Exit mobile version