Site icon Vistara News

Shrirasthu Shubhamasthu: ಅಂತ್ಯ ಹಾಡಲಿದೆಯಾ ‘ಶ್ರೀರಸ್ತು ಶುಭಮಸ್ತು’? ಶಾರ್ವರಿ ರಹಸ್ಯ ಬಯಲಾಗೇ ಬಿಡ್ತಾ?

Shrirasthu Shubhamasthu serial will be end

ಬೆಂಗಳೂರು:  ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ‘ಶ್ರೀರಸ್ತು ಶುಭಮಸ್ತು’ (Shrirasthu Shubhamasthu) ಕೂಡ ಒಂದು. ಟಿಆರ್‌ಪಿಯಲ್ಲಿ ಮೊದ ಮೊದಲು ಒಳ್ಳೆಯ ಟಿಆರ್‌ಪಿ ಪಡೆದ ಧಾರಾವಾಹಿ ಬರಬರುತ್ತಾ ಟಾಪ್‌ 5ನಲ್ಲೇ ಇಲ್ಲವಾಗಿತ್ತು. ಆದರೀಗ ಧಾರಾವಾಹಿ ಮುಕ್ತಾಯಗೊಳ್ಳಲಿದೆ ಎಂದು ಗಾಸಿಪ್‌ಗಳು ಹರಿದಾಡುತ್ತಿವೆ. ಏಕೆಂದರೆ ಜೀ ಕನ್ನಡ ಹೊಸ ಪ್ರೋಮೊ ಹಂಚಿಕೊಂಡಿದೆ.

ಪ್ರತಿ ಧಾರಾವಾಹಿಯಲ್ಲಿಯೂ ಕಥೆಯಲ್ಲಿ ಯಾವುದಾದರೂ ಮುಖ್ಯ ರಹಸ್ಯವನ್ನು ಗುಟ್ಟಾಗಿಯೇ ಇಡುತ್ತಾರೆ. ಆ ಗುಟ್ಟು ರಟ್ಟಾದರೆ ಧಾರಾವಾಹಿಯೇ ಅಂತ್ಯಗೊಂಡಂತೆ. ಆದರೀಗ ಶಾವರ್ರಿ ಪಾತ್ರಧಾರಿ ತಾನು ಇಷ್ಟೂ ದಿನ ಸೇಡು ತೀರಿಸಿಕೊಳ್ಳಲು ಕಾರಣ ಏನು ಎಂಬುದುನ್ನು ಹೇಳ ಹೊರಟ್ಟಿದ್ದಾಳೆ. ಶಾರ್ವರಿ ತನ್ನ ಗಂಡನ ಅಣ್ಣ ಮಾಧವ್​,ಮತ್ತು ಅವರ ಪತ್ನಿ, ಮಕ್ಕಳನ್ನು ಮುಗಿಸಿಲೆಂದು ಹೊಂಚು ಹಾಕಿ ಆ್ಯಕ್ಸಿಡೆಂಟ್​ ಮಾಡಿಸಿರುತ್ತಾಳೆ. ಆಗ ಮಾಧವನ ಪತ್ನಿ ತೀರಿಕೊಳ್ಳುತ್ತಾರೆ. ಇದಾದ ಬಳಿಕ ಮಾಧವನ ಮಕ್ಕಳು ತಮ್ಮ ಅಪ್ಪನನ್ನು ತಾಯಿ ಕೊಲ್ಲಲು ತಂದೆಯೇ ಕಾರಣವೆಂದು ಅಪ್ಪನನ್ನು ಕೀಳಾಗಿ ನೋಡಿಕೊಂಡು ಬರುತ್ತಿರುತ್ತಾರೆ. ಇನ್ನು ಶಾರ್ವರಿ ಅನ್ನು ದೇವರಂತೆ ಪೂಜೆ ಮಾಡುತ್ತಿರುತ್ತಾರೆ ಮಾಧವನ ಮಕ್ಕಳು. ಇದೀಗ ಶಾರ್ವರಿ ಗಂಡ ಮಹೇಶನಿಗೆ ಶಾರ್ವರಿಯೇ ಆಕ್ಸೆಡೆಂಟ್‌ ಮಾಡಿಸಿದ್ದು ಎಂದು ಗೊತ್ತಾಗಿದೆ. ಶಾರ್ವರಿಯ ಗುಟ್ಟು ರಟ್ಟಾದರೆ ಅಲ್ಲಿ ಕಥೆ ಮುಗಿದಂತೆ. ಆದರೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ತುಳಸಿ ಪೂಜೆ ಮುಗಿಸುತ್ತಿದ್ದಂತೆಯೇ ಸಂಪೂರ್ಣ ಸತ್ಯವನ್ನು ಒಪ್ಪಿಕೊಳ್ಳುವಂತೆ ಮಹೇಶ್‌ ಪತ್ನಿ ಶಾರ್ವರಿಗೆ ಹೇಳಿದ್ದಾನೆ.

ಶಾರ್ವರಿ ಅಪಘಾತ ಮಾಡಿಸಲು ಕಾರಣವೂ ಇದೆ. ಮಾಧವ್​ ಪತ್ನಿ ಸುಮತಿಗೆ ಮನೆಯಲ್ಲಿ ಎಲ್ಲರೂ ಗೌರವ ಕೊಡುತ್ತಿರುತ್ತಾರೆ. ಅವಳ ಮುಂದೆಯೇ ತಲೆಬಾಗಿ ಎಲ್ಲರೂ ಮರ್ಯಾದೆ ಕೊಡುತ್ತಾರೆ, ನಾನೂ ಆ ಮನೆಯ ಸೊಸೆ. ಆದರೆ ನನಗೆ ಯಾರೂ ಮರ್ಯಾದೆ ಕೊಡುತ್ತಿರಲಿಲ್ಲ. ಅದಕ್ಕಾಗಿ ಕೊಲೆ ಮಾಡಿಸಿದೆ ಎಂದು ಎಷ್ಟು ಸಲೀಸಾಗಿ ಹಿಂದೆ ಒಪ್ಪಿಕೊಂಡಿದ್ದಳು ಶಾರ್ವರಿ. ಆದರೆ ಈಗ ಮಾಧವನಿಗೆ ಎರಡನೇ ಹೆಂಡತಿಯಾಗಿ ತುಳಸಿ ಬಂದಿರುತ್ತಾಳೆ. ತುಳಸಿಗೂ ಅದೇ ಗೌರ ಸಿಕ್ಕಿರುವುದನ್ನು ಸಹಿಸಲು ಆಗುತ್ತಿಲ್ಲ ಶಾರ್ವರಿಗೆ. ಈಗ ಮಹೇಶ ಆಜ್ಞೆಯಂತೆ ಮನೆಯವರ ಮುಂದೆ ಎಲ್ಲ ಸತ್ಯವನ್ನು ಒಪ್ಪಿಕೊಳ್ಳಬೇಕಿದೆ.

ಇದನ್ನೂ ಓದಿ: Shrirasthu Shubhamasthu Serial: ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯ ಮಾಧವ್‌ ಕಿರುತೆರೆಗೆ ಹೊಸಬರಲ್ಲ!

ಪೂಜೆ ಮುಗಿಯುತ್ತಿದ್ದಂತೆಯೇ ಶಾರ್ವರಿ ನಾನು ಸತ್ಯವನ್ನು ಹೇಳಬೇಕಿದೆ. ಎಲ್ಲರ ಎದುರು ಸತ್ಯ ಹೇಳುತ್ತಿದ್ದೇನೆ ಎಂದು ಹೇಳಿದ್ದಾಳೆ. ಅದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಶಾರ್ವರಿ ನಿಜಕ್ಕೂ ಸತ್ಯ ನುಡಿದರೆ ಸೀರಿಯಲ್‌ ಮುಗಿದಂತೆಯೇ ಎಂದು ಪ್ರೇಕ್ಷಕರು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಹೇಳುವ ಭರದಲ್ಲಿ ಬೇರೆ ಏನಾದರೂ ಶಾರ್ವರಿ ಹೇಳಬಹುದು ಎಂದು ನೋಡುಗರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Shrirasthu Shubhamasthu | ದುಡಿದು, ದಣಿವ ಅಮ್ಮಂದಿರ ದನಿಯಾಗಿ ಬರುತ್ತಿದೆ ಹೊಸ ಕಥೆ: ಶ್ರೀರಸ್ತು ಶುಭಮಸ್ತು!

 ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯು ಮರಾಠಿಯ ‘ಅಗ್ಗಾಬಾಯಿ ಸಾಸುಭಾಯಿ’ಯ ರಿಮೇಕ್ ಆಗಿದೆ. ‘ಶ್ರೀರಸ್ತು ಶುಭಮಸ್ತು’ 100 ಕ್ಕೂ ಹೆಚ್ಚು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಸೊಸೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮಧ್ಯ ವಯಸ್ಕನ ಪಾತ್ರವನ್ನು ಅಜಿತ್‌ ನಿರ್ವಹಿಸುತ್ತಿದ್ದಾರೆ.

Exit mobile version