Site icon Vistara News

Mandya Ravi | ಕಿರುತೆರೆ ಕಲಾವಿದ ಮಂಡ್ಯ ರವಿ ಆರೋಗ್ಯ ಸ್ಥಿತಿ ಗಂಭೀರ

Mandya Ravi

ಬೆಂಗಳೂರು : ಟಿ ಎನ್ ಸೀತಾರಾಮ್ ಅವರ ಹಲವು ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಕಿರುತೆರೆ ಕಲಾವಿದ ಮಂಡ್ಯ ರವಿ (Mandya Ravi ) ಅವರು ಅನಾರೋಗ್ಯದ ಕಾರಣದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಕುರಿತು ಅವರ ಕುಟುಂಬ ಸದಸ್ಯರು ʼವಿಸ್ತಾರ ನ್ಯೂಸ್‌ʼಗೆ ಮಾಹಿತಿ ನೀಡಿದ್ದಾರೆ.

ʻಜಾಂಡೀಸ್‌ ಕಾಯಿಲೆಯಿಂದ ರವಿ ಬಳಲುತ್ತಿದ್ದರು. ಅದು ಸ್ವಲ್ಪ ತಡವಾಗಿ ತಿಳಿದುಬಂದಿದೆ. ಇದೀಗ ಮೂರು ದಿನದ ಹಿಂದೆ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಕಿಡ್ನಿ, ಲಿವರ್‌ ಸಮಸ್ಯೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಚೇತರಿಸಿಕೊಳ್ಳುವ ಭರವಸೆ ನಮಗೆ ಇದೆʼ ಎಂದಿದ್ದಾರೆ. ಈ ಕುರಿತು ಅನೇಕರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ನೋವು ವ್ಯಕ್ತಪಡಿಸಿದ್ದಾರೆ.

ಹಲವು ಧಾರಾವಾಹಿಗಳಲ್ಲಿ ನಟಿಸಿದ ರವಿ, ʻಮಗಳು ಜಾನಕಿʼ, ʻನಮ್ಮನೆ ಯುವರಾಣಿʼ ಹೀಗೆ ಹಲವು ಧಾರಾವಾಹಿಗಳ ಮೂಲಕ ಖ್ಯಾತಿಯನ್ನು ಪಡೆದಿದ್ದರು.

ಇದನ್ನೂ ಓದಿ | Virat kohli | ಶತಕ ಬಾರಿಸಿದರೂ ವಿರಾಟ್‌ ಕೊಹ್ಲಿಯ ಟೀಕೆ ನಿಲ್ಲಿಸಲಿಲ್ಲ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌!

Exit mobile version