Site icon Vistara News

Weekend With Ramesh: ‘ವೀಕೆಂಡ್ ವಿದ್‌ ರಮೇಶ್ 5’ ಸೀಸನ್‌ ಮೊದಲ ಅತಿಥಿ ಯಾರು?

Weekend With Ramesh

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಮನ ಮೆಚ್ಚಿದ ಶೋ ಎಂದರೆ ‘ವೀಕೆಂಡ್ ವಿದ್ ರಮೇಶ್ (Weekend With Ramesh) ಸಾಧಕರನ್ನು ಕರೆಸಿ ಕೆಂಪು ಕುರ್ಚಿಯಲ್ಲಿ ಕೂರಿಸಿ ಅವರ ಬದುಕಿನ ನೋವು-ನಲಿವು, ಏಳು-ಬೀಳಿನ ಬಗ್ಗೆ ಮೆಲುಕು ಹಾಕಿ, ಸಾಧನೆಯ ಹಾದಿಯಲ್ಲಿ ನಡೆದ ಘಟನೆಗಳನ್ನು ಪ್ರೇಕ್ಷಕರ ಎದುರು ತೋರಿಸುವ ಅತೀ ದೊಡ್ಡ, ಜನ ಮೆಚ್ಚಿದ ಶೋ ಇದು. ಇದೀಗ ಮಾರ್ಚ್‌ 25ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ.

ಕಾರ್ಯಕ್ರಮದ ಮೊದಲ ಎಪಿಸೋಡ್‌ ಚಿತ್ರೀಕರಣ ಮಾರ್ಚ್‌ 8ರಂದು ಬೆಂಗಳೂರಿನ ಅಬ್ಬಯ‌ ನಾಯ್ಡು ಸ್ಟುಡಿಯೊದಲ್ಲಿ ಪೂರ್ಣಗೊಂಡಿದ್ದು, ಮೈಸೂರು ಮೂಲದ ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರು ಚಿತ್ರೀಕರಣಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

ಕೆಲದಿನಗಳ ಹಿಂದೆ ಜೀ ವಾಹಿನಿ ವೀಕೆಂಡ್‌ ವಿ‌ದ್ ರಮೇಶ್‌ ಮತ್ತೆ ಬರುತ್ತಿದೆ ಪ್ರೊಮೊ ಪ್ರಸಾರ ಮಾಡಿತ್ತು. ನಟ ರಮೇಶ್‌ ಕೂಡ ಪ್ರೊಮೊ ಹಂಚಿಕೊಂಡಿದ್ದರು. ರಾಧಿಕಾ ಚೇತನ್ ಕೂಡ ಕಾಣಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ವಾಹಿನಿಯು ಪ್ರೊಮೊ ರಿಲೀಸ್ ಮಾಡಿ, “ಸ್ಫೂರ್ತಿದಾಯಕ ಕಥೆಗಳೊಂದಿಗೆ ವೀಕೆಂಡ್‌ಗೆ ಸಾರ್ಥಕತೆ ತುಂಬೋಕೆ ಬರ್ತಿದ್ದಾರೆ ನಿಮ್ಮ ರಮೇಶ್ ಅರವಿಂದ್” ಎಂದು ಹೇಳಿಕೆ ನೀಡಿತ್ತು.

ಇದನ್ನೂ ಓದಿ: Weekend With Ramesh |  ಕೆಂಪು ಕುರ್ಚಿ ಅಲಂಕರಿಸಲು ಬರಲಿದೆಯಾ‌ ವೀಕೆಂಡ್ ವಿದ್ ರಮೇಶ್ ಸೀಸನ್ 5?

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಬಾರಿಯ ಮೊದಲ ಅತಿಥಿ ಆಗಲಿದ್ದಾರೆ ಎನ್ನಲಾಗಿದೆ. ಈ ಬಾರಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ನಿರೂಪಕಿ ಅನುಶ್ರೀ, ಧ್ರುವ ಸರ್ಜಾ, ಹೀಗೆ ಹಲವು ಹೆಸರುಗಳು ಕೇಳಿ ಬಂದಿವೆ.

2019ರ ಜುಲೈ ತಿಂಗಳಿನಲ್ಲಿ ‘ವೀಕೆಂಡ್ ವಿದ್‌ ರಮೇಶ್ 4’ ಕಾರ್ಯಕ್ರಮ ಮುಗಿದಿತ್ತು. ಇದಾದ ಬಳಿಕ ಹೊಸ ಸೀಸನ್ ಶುರುವಾಗಿಲ್ಲ. ‘ವೀಕೆಂಡ್ ವಿದ್ ರಮೇಶ್ ’ ಮತ್ತೆ ಯಾವಾಗ ಶುರುವಾಗುತ್ತದೆ ಎಂದು ವೀಕ್ಷಕರು ಕೇಳುತ್ತಲೇ ಇದ್ದಾರೆ. ‘ವೀಕೆಂಡ್ ವಿದ್ ರಮೇಶ್ ’ ಕಾರ್ಯಕ್ರಮದ ಮೊದಲ ಸೀಸನ್‌ 2014ರಲ್ಲಿ ಪ್ರಸಾರ ಕಂಡಿತ್ತು. ಎರಡನೇ ಸೀಸನ್ 2015-16ರಲ್ಲಿ, ಮೂರನೇ ಸೀಸನ್ 2017ರಲ್ಲಿ, 4ನೇ ಸೀಸನ್ 2019ರಲ್ಲಿ ಪ್ರಸಾರವಾಗಿತ್ತು.

ಇದನ್ನೂ ಓದಿ: TPL SEASON 2: ಮಾರ್ಚ್ 12ರಿಂದ ಕಿರುತೆರೆ ತಾರೆಯರ ಕ್ರಿಕೆಟ್ ರಂಗು ಆರಂಭ

ಪುನೀತ್ ರಾಜ್‌ಕುಮಾರ್, ವಿ. ರವಿಚಂದ್ರನ್, ಅರ್ಜುನ್ ಸರ್ಜಾ, ಯಶ್, ದ್ವಾರಕೀಶ್, ಟಿ.ಎನ್‌.ಸೀತಾರಾಮ್, ಯೋಗರಾಜ್ ಭಟ್, ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಪ್ರಕಾಶ್ ರಾಜ್, ಜಗ್ಗೇಶ್, ಗಂಗಾವತಿ ಪ್ರಾಣೇಶ್, ಭಾರತಿ ವಿಷ್ಣುವರ್ಧನ್, ಜಯಂತ್ ಕಾಯ್ಕಿಣಿ, ಕಾಶೀನಾಥ್, ನ್ಯಾ. ಎನ್. ಸಂತೋಷ್ ಹೆಗ್ಡೆ, ಬಿ. ಜಯಶ್ರೀ, ವಿಜಯ್ ಸಂಕೇಶ್ವರ್, ಎಚ್‌.ಡಿ.ದೇವೇಗೌಡ, ಗಣೇಶ್, ಡಾ. ವೀರೇಂದ್ರ ಹೆಗ್ಗಡೆ, ಪ್ರೇಮ, ಎನ್‌.ಆರ್.ನಾರಾಯಣ ಮೂರ್ತಿ, ಸುಧಾ ಮೂರ್ತಿ, ಸುಮಲತಾ, ಟಿ.ಎಸ್‌.ನಾಗಾಭರಣ, ಟೈಗರ್ ಬಿ.ಬಿ.ಅಶೋಕ್ ಕುಮಾರ್, ಚಂದ್ರಶೇಖರ ಕಂಬಾರ ಮುಂತಾದ ಸಾಧಕರು ‘ವೀಕೆಂಡ್ ವಿಥ್ ರಮೇಶ್ ’ ಕಾರ್ಯಕ್ರಮದ ಸಾಧಕರ ಸೀಟ್‌ನಲ್ಲಿ ಭಾಗಿಯಾಗಿದ್ದರು.

Exit mobile version