Site icon Vistara News

Varun Aradya: ವರ್ಷಾ ಕಾವೇರಿ ಜತೆಗಿನ ಬ್ರೇಕಪ್ ಬಗ್ಗೆʼಬೃಂದಾವನʼ ಹೀರೊ ವರುಣ್ ಆರಾಧ್ಯ ಹೇಳಿದ್ದೇನು?

What did Brindavan hero Varun Aaradhya say about his breakup with Varsha Kaveri

ಬೆಂಗಳೂರು: ಸೋಷಿಯಲ್ ಮೀಡಿಯಾ ಸ್ಟಾರ್, ʼಬೃಂದಾವನʼ (Brindavana) ಧಾರಾವಾಹಿಯ ಪ್ರಮುಖ ಪಾತ್ರಧಾರಿ ವರುಣ್‌ ಆರಾಧ್ಯ ಅವರು ವರ್ಷಾ ಕಾವೇರಿ ಜತೆಗಿನ ತಮ್ಮ ಬ್ರೇಕಪ್ ಬಗ್ಗೆ ಮೌನ ಮುರಿದಿದ್ದಾರೆ. ಕನ್ನಡದಲ್ಲಿ ಯಾವುದೇ ಸಿನಿಮಾಗಳು ಬಿಡುಗಡೆಯಾದರೆ, ಈ ಜೋಡಿ ಹಾಡು, ಡೈಲಾಗ್‌ಗಳನ್ನು ಡಬ್‌ಸ್ಮ್ಯಾಶ್‌ ಮತ್ತು ರೀಲ್ಸ್‌ ಮಾಡದೇ ಇರುತ್ತಿರಲಿಲ್ಲ. ಈ ಜೋಡಿ ಬ್ರೇಕಪ್ ಮಾಡಿಕೊಂಡಿತ್ತು. ವರುಣ್ ಮತ್ತು ವರ್ಷಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬ ಅದೆಷ್ಟೋ ಬಾರಿ ಒಟ್ಟಿಗೆ ಯುಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡಿದ್ದರು.

ಈ ಜೋಡಿಯ ಬ್ರೇಕಪ್ ಯಾಕೆ ಆಯ್ತು ಎಂಬ ಅಸಲಿ ವಿಚಾರ ಎಲ್ಲೂ ರಿವೀಲ್ ಆಗಿರಲಿಲ್ಲ. ಈಗ ಮೊದಲ ಬಾರಿಗೆ ವರುಣ್ ಪ್ರತಿಕ್ರಿಯೆ ನೀಡಿದ್ದಾರೆ. ಬ್ರೇಕಪ್ ಬಗ್ಗೆ ಪ್ರಶ್ನೆ ಮಾಡಿದಾಗ ‘ಕಾಲಾಯ ತಸ್ಮೈ ನಮಃ’ ಎಂದು ಹೇಳಿದ್ದಾರೆ.ಬ್ರೇಕಪ್ ಆಗಬೇಕು ಅಂತಿತ್ತು ಕಾಣುತ್ತೆ, ಬ್ರೇಕಪ್ ಆಯ್ತು. ಅದರ ಬಗ್ಗೆ ಮತ್ತೇನು ಮಾತು ಬೇಡ ಎಂದು ವರುಣ್ ಮಾತನಾಡಿದ್ದಾರೆ.

ಈ ಮುಂಚೆ ವರ್ಷಾ ಕಾವೇರಿ ಅವರು ತಮ್ಮ ಬ್ರೇಕಪ್‌ ಕುರಿತಾಗಿ ಪೋಸ್ಟ್‌ ಹಂಚಿಕೊಂಡಿದ್ದರು. ʻʻನನ್ನ ಮತ್ತು ವರುಣ್‌ ಮಧ್ಯೆ ಯಾವುದೇ ರೀತಿಯ ಪ್ರೀತಿ ಸಂಬಂಧ ಇರುವುದಿಲ್ಲ. ಅವನು ಬೇರೆ ಹುಡುಗಿಯ ಜತೆ ಪ್ರೀತಿಯಲ್ಲಿ ಇದ್ದಾನೆ. ಈ ಹುಡುಗಿ ಜತೆ ಖುಷಿಯಾಗಿರಲಿ. ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ. ನಾನು ಅವರಿಗಾಗಿ ಜೀವನವನ್ನು ನಡೆಸಲೇಬೇಕು. ಆದುದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ. ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ದಯವಿಟ್ಟು ಇದನ್ನು ನೀವು ಅರ್ಥಮಾಡಿಕೊಳ್ಳುವಿರಿ ಎಂದು ನಾನು ಭಾವಿಸಿದ್ದೇನೆʼʼಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Varsha Varun Aradya: ಟಿಕ್‌ಟಾಕ್‌ ಜೋಡಿ ವರುಣ್-ವರ್ಷಾ ಬ್ರೇಕಪ್‌; ದುಡ್ಡು ಎಂಥವರನ್ನು ಬದಲಾಯಿಸುತ್ತೆ ಅಂದ್ರು ನೆಟ್ಟಿಗರು!

ʼಬೃಂದಾವನʼ ಧಾರಾವಾಹಿಯ ಪ್ರಮುಖ ಪಾತ್ರಧಾರಿ ವರುಣ್‌ ಆರಾಧ್ಯ

ಈ ಮಧ್ಯೆ ಜನಪ್ರಿಯ ʼಬೃಂದಾವನʼ (Brindavana) ಧಾರಾವಾಹಿಯ ಪ್ರಮುಖ ಪಾತ್ರಧಾರಿಯಾಗಿ ವರುಣ್‌ ಆರಾಧ್ಯ ಬಂದಿದ್ದಾರೆ. ‘ಪುಟ್ಟಗೌರಿ ಮದುವೆ’, ‘ಮಂಗಳಗೌರಿ ಮದುವೆ’, ‘ರಂಗನಾಯಕಿ’, ‘ನಾಗಿಣಿ- 2’, ‘ಗೀತಾ’, ‘ರಾಣಿ’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ.ಎಸ್. ರಾಮ್‌ ಜೀ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಕೂಡು ಕುಟುಂಬದ ಕಥೆ ಹೊಂದಿರುವ ಈ ಧಾರಾವಾಹಿಯ ಆಕಾಶ್‌ ಪಾತ್ರದಲ್ಲಿ ಬಿಗ್​ಬಾಸ್ ಸ್ಪರ್ಧಿಯಾಗಿದ್ದ ಗಾಯಕ ವಿಶ್ವನಾಥ್ ಹಾವೇರಿ ಕಾಣಿಸಿಕೊಂಡಿದ್ದರು. ಆದರೆ ಸೀರಿಯಲ್‌ನ ಕೇವಲ 25ರಷ್ಟು ಸಂಚಿಕೆ ಮುಗಿಯುವಷ್ಟರಲ್ಲಿ ಅವರು ಬದಲಾಗಿದ್ದರು.

Exit mobile version