Site icon Vistara News

Puneeth Rajkumar: ಪುನೀತ್​ ಸಮಾಧಿಗೆ ವಾಲ್ಮೀಕಿ ರಾಮಾಯಣ ಅರ್ಪಿಸಿದೆ

Valmiki Ramayana book dedicated to Puneeth Samadhi

#image_title

ಕಿರಣ್ ಕುಮಾರ್ ಕಲ್ಲಮ್ಮನವರ, ವಲಯ ಅರಣ್ಯ ಅಧಿಕಾರಿ ರಾಣೆಬೆನ್ನೂರು

ಬೆಟ್ಟದ ಹೂ ಸಿನಿಮಾದಲ್ಲಿ ಬಾಲಕ ರಾಮುಗೆ ಕುವೆಂಪುರವರ ಜನಪ್ರಿಯ ವಾಲ್ಮೀಕಿ ರಾಮಾಯಣ ಪುಸ್ತಕವನ್ನ ಕೊಂಡುಕೊಂಡು ಓದಬೇಕು ಎನ್ನುವ ಆಸೆ. ಅದಕ್ಕಾಗಿ ಅವನು ತುಂಬ ಕಷ್ಟಪಡುತ್ತಾನೆ. ಕೊನೆಗೆ ಪುಸ್ತಕ ಕೊಳ್ಳಲು ಬೇಕಾದ ಹತ್ತು ರೂಪಾಯಿ ಹೊಂದಿಸುತ್ತಾನೆ. ಆದರೆ,ತನ್ನ ತಂಗಿ ಬೆಡ್ ಶೀಟ್ ಇಲ್ಲದೇ ಚಳಿಗೆ ನಡುಗುತ್ತಾ ಮಲಗುವುದನ್ನ ನೆನೆಸಿಕೊಂಡು ಪುಸ್ತಕದ ಬದಲಾಗಿ ತಂಗಿಗೆ ಬೆಡ್ ಶೀಟ್ ಕೊಳ್ಳುತ್ತಾನೆ. ಆ ದೃಶ್ಯ ನನಗೆ ಕಣ್ಣೀರು ತರಿಸಿತ್ತು. ಜೀವನದಲ್ಲಿ ಪುನೀತ್ ರಾಜಕುಮಾರ ಅವರನ್ನು ಒಮ್ಮೆ ಭೇಟಿಯಾಗಬೇಕು, ಆಗ ಅವರಿಗೆ ಕುವೆಂಪುರವರ ಜನಪ್ರಿಯ ವಾಲ್ಮೀಕಿ ರಾಮಾಯಣ ಪುಸ್ತಕವನ್ನ ಉಡುಗೊರೆಯಾಗಿ ಕೊಡಬೇಕು ಎಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. 12 ಮಾರ್ಚ್ 2022 ರಂದು ಅವರ ಸಮಾಧಿಗೆ ಭೇಟಿ ನೀಡಿ, ನಮಸ್ಕರಿಸಿ ಕುವೆಂಪುರವರ ಜನಪ್ರಿಯ ವಾಲ್ಮೀಕಿ ರಾಮಾಯಣ ಪುಸ್ತಕವನ್ನ ಅವರ ಸಮಾಧಿಗೆ ಭಾರವಾದ ಮನಸ್ಸಿನಿಂದ ಅರ್ಪಿಸಿದೆ.

Exit mobile version