Site icon Vistara News

Vijay Deverakonda: ವಿಜಯ್‌ ದೇವರಕೊಂಡ ಜತೆ ಮಾತು ನಿಲ್ಲಿಸಿದ್ದ ಸಮಂತಾ! ಇದಕ್ಕೂ ಇತ್ತು ಕಾರಣ…

Vijay Deverakonda Samantha

ಬೆಂಗಳೂರು: ನಿರ್ದೇಶಕ ಶಿವ ನಿರ್ವಾಣ ಅವರ ‘ಖುಷಿ‘ (Kushi) ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijay Deverakonda) ಮತ್ತು ಸಮಂತಾ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್‌ಗೆ ಈ ಚಿತ್ರ ಸಜ್ಜಾಗುತ್ತಿದೆ. ಆಗಸ್ಟ್ 5ರಂದು ʼಖುಷಿʼ ಸಿನಿಮಾದ ಕಾರ್ಯಕ್ರಮವೊಂದರಲ್ಲಿ (musical concert ) ವಿಜಯ್ ದೇವರಕೊಂಡ ಅವರು ಸಮಂತಾ ಬಗ್ಗೆ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ವಿಜಯ್ ಅವರು ಸಮಂತಾ (Samantha) ಮೈಯೋಸಿಟಿಸ್‌ ಎಂಬ ಆರೋಗ್ಯ ಸಮಸ್ಯೆಯಿಂದ (MYOSITIS) ಹೇಗೆ ಶೂಟಿಂಗ್‌ ಸಮಯದಲ್ಲಿ ಹೋರಾಡಿದ್ದರು ಎಂಬುದರ ಕುರಿತು ಹೇಳಿಕೊಂಡಿದ್ದಾರೆ.

ವಿಜಯ್‌ ಮೊದಲಿಗೆ ʻʻಸಮಂತಾ ಅವರ ಮುಖದಲ್ಲಿ ನಗುವನ್ನು ಕಾಣಬೇಕೆಂದು ಬಯಸಿದ್ದೇನೆ. ಅವರ ಶ್ರಮಕ್ಕೆ ಈ ಚಿತ್ರ ಯಶಸ್ವಿಯಾಗಲಿʼʼ ಎಂದರು. ನಟ ಮಾತು ಮುಂದುವರಿಸಿ “ನನಗಿಂತ ಹೆಚ್ಚಾಗಿ, ಸಮಂತಾ ನಗುವನ್ನು ನೋಡಲು ನಾನು ಇಷ್ಟ ಪಡುತ್ತೇನೆ. ಅವರು ಈ ಚಿತ್ರಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಏಪ್ರಿಲ್ 2022ರಲ್ಲಿ ಈ ಸಿನಿಮಾ ಶೂಟಿಗ್‌ ಶುರು ಮಾಡಿದೆವು. ಶೇಕಡಾ 60ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದ್ದೆವು. ಕೇವಲ ಶೇಕಡಾ 30-35ರಷ್ಟು ಚಿತ್ರೀಕರಣ ಬಾಕಿ ಇತ್ತು. ಆ ಜುಲೈ ವೇಳೆಗೆ ಸಮಂತಾ ಅವರ ಆರೋಗ್ಯ ಹದಗೆಟ್ಟಿತು. ನೋಡೋಕೆ ಎಲ್ಲರಂತೆ ಕಾಣುತ್ತಿದ್ದರು. “ನೀವು ಸುಂದರವಾಗಿ ಕಾಣುತ್ತೀರಿ. ನಿಮಗೆ ಏನು ಸಮಸ್ಯೆ ಇದೆ?” ಎಂದು ನಾನು ಮತ್ತೆ ಶಿವ ಅವರು ತಮಾಷೆಯಿಂದ ಪ್ರಶ್ನೆ ಮಾಡಿದ್ದೆವು. ಅವರ ಮಾತನ್ನು ನಾವು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನಂತರ ಅವರ ಕಷ್ಟ ಅರ್ಥವಾಯಿತು’ ಎಂದಿದ್ದಾರೆ ವಿಜಯ್ ದೇವರಕೊಂಡ.

ಇದನ್ನೂ ಓದಿ: Kushi Trailer: ಪ್ರೀತಿ, ಪ್ರೇಮ, ಸಂಸಾರ ಜಗಳವೇ ʻಖುಷಿʼಯ ಹೈಲೆಟ್!

ʻʻಜುಲೈನಲ್ಲಿ, ನಾನು ನನ್ನ ಇನ್ನೊಂದು ಚಿತ್ರದ ಪ್ರಚಾರ ಮಾಡುವಾಗ, ಸಮಂತಾ ಅವರ ಅನಾರೋಗ್ಯದ ಬಗ್ಗೆ ನನಗೆ ತಿಳಿದಿತ್ತು. ಆರಂಭದಲ್ಲಿ ಅವರು ಅದರ ಬಗ್ಗೆ ಮಾತನಾಡಲಿಲ್ಲ. ನಾವು ಕಲಾವಿದರು. ನಮ್ಮ ಕಷ್ಟದ ಬಗ್ಗೆ ನಾವು ಹೇಳಬಾರದು ಎಂಬುದು ನನ್ನ ಅಭಿಪ್ರಾಯವೂ ಆಗಿತ್ತು. ಮುಂದೆ ಅನಾರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡುವುದು ನನ್ನ ಜವಾಬ್ದಾರಿ ಎಂದು ಸಮಂತಾ ಭಾವಿಸಿದರು. ಆ ಬಳಿಕ ಅವರು ನಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ನಮ್ಮನ್ನು ನೋಡುವುದನ್ನೂ ನಿಲ್ಲಿಸಿದರು. ಅವರು ತೀರಾ ಅಸ್ವಸ್ಥರಾಗಿದ್ದರು’ ಎಂದು ವಿಜಯ್ ದೇವರಕೊಂಡ ಮಾಹಿತಿ ನೀಡಿದ್ದಾರೆ.

ವಿಜಯ್‌ ಮಾತು ಮುಂದುವರಿಸಿ ʻಎಷ್ಟೋ ಜನ ಸಮಂತಾ ಅವರ ಬಳಿ ಆರೋಗ್ಯ ಬಗ್ಗೆ ಸಲಹೆ ಕೇಳಿದ್ದಾರೆ. ಇಂದು ಅನೇಕರಿಗೆ ಸ್ಯಾಮ್‌ ಸ್ಫೂರ್ತಿಯಾಗಿದ್ದಾರೆ. ಸಮಂತಾ ಇಂದಿಗೂ ಸಂಪೂರ್ಣವಾಗಿ ಆರೋಗ್ಯವಾಗಿಲ್ಲ. ಎಲ್ಲರಿಗಿಂತ ಹೆಚ್ಚಾಗಿ, ನಾನು ಸೆಪ್ಟೆಂಬರ್ 1ರಂದು ಅವರ ಮುಖದಲ್ಲಿ ದೊಡ್ಡ ನಗುವನ್ನು ನೋಡಲು ಬಯಸುತ್ತೇನೆ. ಇದು ನನ್ನ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ” ಎಂದು ವಿಜಯ್ ಹೇಳಿಕೊಂಡರು.

ಇದನ್ನೂ ಓದಿ: Kabhi Khushi Kabhie Gham: ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ʻಕಭಿ ಖುಷಿ ಕಭಿ ಗಮ್ʼ ಸಿನಿಮಾದ ಪೂಜಾ

ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ‘ಖುಷಿ’ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.

Exit mobile version