Site icon Vistara News

Vijay Deverakonda: ರಜನಿಕಾಂತ್‌ ಕುರಿತು ‘ಆ’ ಒಂದು ಮಾತು ಆಡಿದ ವಿಜಯ್‌ ದೇವರಕೊಂಡ; ತಲೈವಾ ಫ್ಯಾನ್ಸ್‌ ಕೆಂಡ

Vijay Devarakonda On Rajinikanth

Vijay Deverakonda's Comment On Rajinikanth Sparks Controversy, Fans Slam Him

ಹೈದರಾಬಾದ್:‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿಮಾವು (Jailer Movie) ಭಾರತ ಸೇರಿ ಜಗತ್ತಿನಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಜೈಲರ್‌ ಸಿನಿಮಾವು 500 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಗಳಿಸಿದೆ. ಇದರ ಬೆನ್ನಲ್ಲೇ ರಜನಿಕಾಂತ್‌ ಕುರಿತು ‘ಅರ್ಜುನ್‌ ರೆಡ್ಡಿ’ ಖ್ಯಾತಿಯ ವಿಜಯ್‌ ದೇವರಕೊಂಡ (Vijay Deverakonda) ನೀಡಿದ ಒಂದು ಹೇಳಿಕೆಯು ವಿವಾದ ಸೃಷ್ಟಿಸಿದೆ. ರಜನಿಕಾಂತ್‌ (Rajinikanth) ಅಭಿಮಾನಿಗಳು ವಿಜಯ್‌ ದೇವರಕೊಂಡ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಜಯ್‌ ದೇವರಕೊಂಡ ಹೇಳಿದ್ದೇನು?

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಜಯ್‌ ದೇವರಕೊಂಡ, “ಚಿರಂಜೀವಿ, ರಜನಿಕಾಂತ್‌ ಅವರ ಸಿನಿಮಾಗಳು ಹಿಟ್‌ ಆಗಲಿ, ಬಿಡಲಿ ಅವರ ಖ್ಯಾತಿ, ತಾರಾಮೆರುಗಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ರಜನಿ ಸರ್‌ ಅವರು ಸತತ ಆರು ಬಾರಿ ಸೋಲುಂಡ ಸಿನಿಮಾಗಳನ್ನು ಕೊಡಲಿ, ಜೈಲರ್‌ನಂತಹ ಒಂದು ಸಿನಿಮಾ ಮಾಡಿ 500 ಕೋಟಿ ರೂ. ಗಳಿಕೆ ಕಾಣುವಂತೆ ಮಾಡುತ್ತಾರೆ. ನಾವು ಸುಮ್ಮನೆ ಕುಳಿತು ಅವರ ಸಿನಿಮಾ ನೋಡಬೇಕು” ಎಂದು ವಿಜಯ್‌ ದೇವರಕೊಂಡ ಹೇಳಿದ್ದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಕೆಂಡವಾದ ತಲೈವಾ ಫ್ಯಾನ್ಸ್‌

ರಜನಿಕಾಂತ್‌ ಅವರು ಸತತವಾಗಿ ಆರು ಸಿನಿಮಾ ಫ್ಲಾಪ್‌ ಆದರೂ… ಎಂದು ವಿಜಯ್‌ ದೇವರಕೊಂಡ ಹೇಳಿರುವುದಕ್ಕೆ ತಲೈವಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆರಳಿ ಕೆಂಡವಾಗಿದ್ದಾರೆ. “ರಜನಿಕಾಂತ್‌ ಸಿನಿಮಾಗಳು ಫ್ಲಾಪ್‌ ಆಗಿಲ್ಲ. ದರ್ಬಾರ್‌ ಹಾಗೂ ಅಣ್ಣಾತ್ತೆ ಸಿನಿಮಾ ಸರಾಸರಿ ಹಿಟ್‌ ಆದ ಸಿನಿಮಾಗಳು” ಎಂದು ಒಬ್ಬ ಅಭಿಮಾನಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಪ್ರತಿಕ್ರಿಯಿಸಿ, “ನೀವು ಎಲ್ಲದರ ಬಗ್ಗೆಯೂ ಅಭಿಪ್ರಾಯ ಹೊಂದಬೇಕಿಲ್ಲ. ಅದರಲ್ಲೂ, ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರನ್ನು ಹೊಗಳಲು ಕೂಡ ನೀವು ಹೀಗೆ ಹೇಳಬಾರದು” ಎಂದು ಹೇಳಿದ್ದಾರೆ. ಹೀಗೆ ನೂರಾರು ಜನ ವಿಜಯ್‌ ದೇವರಕೊಂಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ತ, ವಿಜಯ್‌ ದೇವರಕೊಂಡ ಅಭಿಮಾನಿಗಳು ಕೂಡ ರಜನಿಕಾಂತ್‌ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ. ಅರ್ಜುನ್‌ ರೆಡ್ಡಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Vijay Deverakonda: ವಿಜಯ್‌ ದೇವರಕೊಂಡ ಜತೆ ಮಾತು ನಿಲ್ಲಿಸಿದ್ದ ಸಮಂತಾ! ಇದಕ್ಕೂ ಇತ್ತು ಕಾರಣ…

ಚಿರಂಜೀವಿ ಬಗ್ಗೆಯೂ ದೇವರಕೊಂಡ ಪ್ರಸ್ತಾಪ

ಮೆಗಾ ಸ್ಟಾರ್‌ ಚಿರಂಜೀವಿ ಬಗ್ಗೆಯೂ ಮಾತನಾಡಿದ ವಿಜಯ್‌ ದೇವರಕೊಂಡ, “ಚಿರಂಜೀವಿ ಅವರ ಸಿನಿಮಾಗಳೂ ಒಂದರ ಹಿಂದೆ ಒಂದರಂತೆ ಮುಗ್ಗರಿಸುತ್ತವೆ. ಆದರೆ, ಅವರು ಸರಿಯಾದ ನಿರ್ದೇಶಕನನ್ನು ಭೇಟಿಯಾದರೆ ಸಿಡಿದೇಳುತ್ತಾರೆ. ಸಂಕ್ರಾಂತಿ ಸಿನಿಮಾವೇ ಇದಕ್ಕೆ ಸಾಕ್ಷಿಯಾಗಿದೆ. ಚಿರಂಜೀವಿ ಅವರು ಇಡೀ ಉದ್ಯಮವನ್ನು ಬದಲಾಯಿಸಿದ್ದಾರೆ. ಅವರು ನೃತ್ಯ, ಆ್ಯಕ್ಷನ್‌ ಮೂಲಕ ತುಂಬ ಜನ ಇಂಡಸ್ಟ್ರಿಗೆ ಬರಲು ಸ್ಫೂರ್ತಿಯಾಗಿದ್ದಾರೆ” ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆದರೆ, ರಜನಿಕಾಂತ್‌ ಅಭಿಮಾನಿಗಳು ಮಾತ್ರ ವಿಜಯ್‌ ದೇವರಕೊಂಡ ಮೇಲೆ ಕೆಂಡ ಕಾರುತ್ತಿದ್ದಾರೆ.

Exit mobile version