Site icon Vistara News

Ram mandir: ರಾಮನಗರಿ ಅಯೋಧ್ಯೆಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಭಾಗಿಯಾಗಿದ್ರು?

Which are all celebrities attend in Ramanagari Ayodhya

ರಾಮನಗರಿ ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ಜಪ ಜೋರಾಗಿದೆ. ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠೆ (Pran Pratishtha) ಮಾಡಲು ಕೆಲವೇ ಗಂಟೆಗಳು ಬಾಕಿ ಇವೆ.  ರಿಷಬ್‌ ಹಾಗೂ ಪ್ರಗತಿ ಶೆಟ್ಟಿ ಅಯೋಧ್ಯೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಡದ್ದು ಹೀಗೆ.

 ʻಪ್ರಾಣ ಪ್ರತಿಷ್ಠಾʼ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಿವುಡ್ ಸೆಲೆಬ್ರಿಟಿಗಳು ಅಯೋಧ್ಯೆಗೆ ತೆರಳಿದ್ದಾರೆ. ಕಂಗನಾ ರಣಾವತ್‌ ಸೀರೆಯಲ್ಲಿ ಮಿಂಚಿದ್ದಾರೆ.

ಅಮಿತಾಭ್‌ ಹಾಗೂ ಅಭಿಷೇಕ್‌ ಬಚ್ಚನ್‌ ಕಂಡದ್ದು ಹೀಗೆ.

ಅನುಪಮ್ ಅವರು ಹಿರಿಯ ನಟ ರಜನಿಕಾಂತ್ ಅವರೊಂದಿಗೆ ಪೋಸ್ ಕೊಟ್ಟಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಫೋಟೊದಲ್ಲಿ ಇಬ್ಬರೂ ನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. 

ಕತ್ರಿನಾ ಗೋಲ್ಡನ್ ಸೀರೆಯಲ್ಲಿ ಮಿಂಚಿದರೆ, ವಿಕ್ಕಿ ಶೇರ್ವಾನಿ ಧರಿಸಿದ್ದರು. 

ಜಾಕಿ ಶ್ರಾಫ್ ಕೂಡ ರಾಮಮಂದಿರ ಸಮಾರಂಭದಲ್ಲಿ ಇದ್ದರು. ಉದ್ಘಾಟನಾ ಸಮಾರಂಭದ ಮೊದಲು, ಜಾಕಿ ಮುಂಬೈ ರಾಮಮಂದಿರದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಆಲಿಯಾ ಸೀರಿಯಲ್ಲಿ ಕಂಡರೆ, ರಣಬೀರ್ ಕಪೂರ್ ಬಿಳಿ ಕುರ್ತಾ ಹಾಗೂ ಧೋತಿಯಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: Ram Mandir : ತಮಿಳುನಾಡು ಸ್ಟಾಲಿನ ಸರ್ಕಾರ ಹಿಂದೂ ವಿರೋಧಿ ನಡೆಗೆ ಮದ್ರಾಸ್ ಹೈಕೋರ್ಟ್​ ಚಾಟಿ

ಮಾಧುರಿ ದೀಕ್ಷಿತ್ ಅವರು ಹಳದಿ ಸೀರೆಯುಟ್ಟು ಪತಿ ಡಾ. ಶ್ರೀರಾಮ್ ನೆನೆಯೊಂದಿಗೆ ಅಯೋಧ್ಯೆಯಲ್ಲಿ ಕಂಡರು.

ನಟ ಚಿರಂಜೀವಿ, ಪುತ್ರ ರಾಮ್‌ಚರಣ್‌ ಹಾಗೂ ಪತ್ನಿಯೊಂದಿಗೆ ಅಯೋಧ್ಯೆಯಲ್ಲಿ. ರಜನಿಕಾಂತ್, ಧನುಷ್, ಮಧುರ್ ಭಂಡಾರ್ಕರ್, ಅನುಪಮ್ ಖೇರ್, ಕಂಗನಾ ರಣಾವತ್‌, ಶೆಫಾಲಿ ಶಾ, ಅನು ಮಲಿಕ್, ಲತಾ ಮಂಗೇಶ್ಕರ್ ಅವರ ಸೋದರಳಿಯ ಆದಿನಾಥ್ ಮಂಗೇಶ್ಕರ್, ಸೋನು ನಿಗಮ್, ಮನೋಹ್ ಜೋಶಿ, ರವಿ ಕಿಶನ್, ರಣದೀಪ್ ಹೂಡಾ ಮತ್ತು ವಿವೇಕ್ ಒಬೆರಾಯ್ ಅವರಂತಹ ಸೆಲೆಬ್ರಿಟಿಗಳು ಈಗಾಗಲೇ ಅಯೋಧ್ಯೆಯಲ್ಲಿದ್ದಾರೆ.

ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಪುಣ್ಯಭೂಮಿ ಅಯೋಧ್ಯೆಯಲ್ಲಿ ನಿಖಿಲ್‌ ಕುಮಾರ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ಸಂತೋಷದ ಗಳಿಗೆಯಲ್ಲಿ ‌ನಿಖಿಲ್‌ ಅವರು ತಂದೆ ಕುಮಾರಸ್ವಾಮಿ ಹಾಗೂ ತಾತ ದೇವೇಗೌಡ ಮತ್ತು ಅಜ್ಜಿ ಚೆನ್ನಮ್ಮ ಜತೆಯಲ್ಲಿದ್ದಿದ್ದರು.

Exit mobile version