Site icon Vistara News

Vistara News Launch | ಶಿಕ್ಷಣ ಪ್ರೇಮಿ ಉದ್ಯಮಿ ರವೀಂದ್ರ ಪೈಗೆ ಒಲಿದು ಬಂದ ಕಾಯಕ ಯೋಗಿ ಪ್ರಶಸ್ತಿ

Vistara News Launch

ಪ್ರತಿಯೊಬ್ಬರಿಗೂ ಪರಿಪೂರ್ಣ ಶಿಕ್ಷಣ ದೊರೆಯಬೇಕೆಂಬ ಹಂಬಲ ಹೊತ್ತು, ತಮ್ಮ ವ್ಯವಹಾರದ ಜತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವವರು ಶಿಕ್ಷಣ ಪ್ರೇಮಿ ರವೀಂದ್ರ ಪೈ.

ವಿದ್ಯಾಶಿಲ್ಪ ಎಜುಕೇಷನ್‌ ಗ್ರೂಪ್‌ನ ಜಾಯಿಂಟ್‌ ಮ್ಯಾನೇಜಿಂಗ್‌ ಟ್ರಸ್ಟಿ ಆಗಿರುವ ರವೀಂದ್ರ ಪೈ ಶಿಕ್ಷಣದಿಂದಲೇ ಬದಲಾವಣೆ ಎಂದು ನಂಬಿದವರು. ಬೆಂಗಳೂರಿನಲ್ಲಿ ಹಲವಾರು ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಾ ವಿದ್ಯಾರ್ಥಿಗಳು ಅನುಭವದಿಂದ ಪಾಠ ಕಲಿಯುವಂತೆ ಮಾಡಿದವರು.

ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕಲಿತಿರುವ ರವೀಂದ್ರ ಪೈ ತಾವು ಕಲಿತಿದ್ದು ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಬೇಕೆಂದು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಹಲವಾರು ಪ್ರಯೋಗ ನಡೆಸಿದ್ದಾರೆ. ಸೆಂಚುರಿ ರಿಯಲ್‌ ಎಸ್ಟೇಟ್‌ ಹೋಲ್ಡಿಂಗ್ಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿ ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ವಸತಿ ಸೌಕರ್ಯ ದೊರೆಯಬೇಕೆಂದು ಶ್ರಮಿಸುತ್ತಿದ್ದಾರೆ.

ಶಿಕ್ಷಣ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ವಿಭಿನ್ನ ರೀತಿಯ ಕೊಡುಗೆ ನೀಡುತ್ತಿರುವ ಶ್ರೀ ರವೀಂದ್ರ ಪೈ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

Exit mobile version