Site icon Vistara News

ನಮ್ಮುಡುಗಿ ಜತೆ ಮದುವೆಯಾಗಲಿ; ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಭೂಪ!

Writing on BANANA

ತುಮಕೂರು: ಮುಂದಿನ ಸಿಎಂ ಸಿದ್ದರಾಮಯ್ಯ, ಈ ಸಲ ಕಪ್‌ ನಮ್ದೇ RCB ಎಂದು ಬರೆದ ಬಾಳೆಹಣ್ಣುಗಳನ್ನು ರಥಕ್ಕೆ ಎಸೆದ ಹಲವು ಉದಾಹರಣೆಗಳನ್ನು ಈಗಾಗಲೇ ಕಂಡಿದ್ದೇವೆ. ಆದರೆ ಇಲ್ಲೊಬ್ಬ ಪ್ರೀತಿಸಿದ ಹುಡುಗಿ ಜತೆಯೇ ಮದುವೆಯಾಗಲಿ ಎಂದು ಬರೆದು ರಥಕ್ಕೆ ಬಾಳೆ ಹಣ್ಣು ಎಸೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಯುವಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಆದರೆ ತಿಪಟೂರಿನ ಕೆಂಪಮ್ಮ ದೇವಿ ಜಾತ್ರೆಯಲ್ಲಿ ಓರ್ವ ಬಾಳೆಹಣ್ಣಿನ ಮೇಲೆ “ನಮ್ಮುಡುಗಿ ಜತೆ ಮದುವೆ ಆಗಲಿ‌” ಎಂದು ಬರೆದು ರಥಕ್ಕೆ ಎಸೆದು, ಈ ಮೂಲಕ ದೇವಿಯ ಮೊರೆ ಹೋಗಿದ್ದಾನೆ. ಈ ಕುರಿತ ಫೋಟೊ ಈಗ ಎಲ್ಲೆಡೆ ಹರಿದಾಡುತ್ತಿದೆ.

ದನ್ನೂ ಓದಿ | ʼನೀನಂದ್ರೆ ನಂಗಿಷ್ಟʼ ಅಂತ ಆಗಾಗ ಹೇಳಬೇಕು ಕಣ್ರೀ!

Exit mobile version