Site icon Vistara News

Road Accident: ಫ್ಲೈಓವರ್​​ ತಡೆಗೋಡೆಗೆ ಗುದ್ದಿದ ಬೈಕ್​; ಯುವಕನ ಪ್ರಾಣ ಕಸಿದ ಜಾಲಿರೈಡ್

Man Injured In Accident

ಬೆಂಗಳೂರು: ತಡರಾತ್ರಿ ಬೈಕ್​​ನಲ್ಲಿ ಜಾಲಿ ರೈಡ್​ಗೆಂದು ಹೋಗಿದ್ದ ಇಬ್ಬರು ಯುವಕರು ಭೀಕರ ಅಪಘಾತಕ್ಕೀಡಾಗಿದ್ದಾರೆ (Road Accident). ಒಬ್ಬ ಯುವಕ ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡಿದ್ದಾರೆ. ರಾತ್ರಿ 2ಗಂಟೆ ಹೊತ್ತಿಗೆ ಇವರು ಬೈಕ್​ನಲ್ಲಿ ನೈಟ್​ ರೈಡ್​​ಗೆಂದು ತೆರಳಿದ್ದರು. ಆದರೆ ಇವರ ದ್ವಿಚಕ್ರವಾಹನ ತಡೆಗೋಡೆಗೆ ಡಿಕ್ಕಿ ಹೊಡೆದು ಅನಾಹುತವಾಗಿದೆ. ರಾಮ್​​ಕುಮಾರ್​ (29) ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಹುಡುಗ ಯಶವಂತ್​ (22) ಗಾಯಗೊಂಡಿದ್ದಾನೆ.

ರಾಮ್​ಕುಮಾರ್ ಮತ್ತು ಯಶವಂತ್ ಇಬ್ಬರೂ ಬ್ಯಾಟರಾಯನಪುರದ ಪ್ರಮೋದ ಲೇಔಟ್​ ನಿವಾಸಿಗಳು. ಇವರಲ್ಲಿ ರಾಮ್​ಕುಮಾರ್​ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬೈಕ್​​ನಲ್ಲಿ ರಾಮ್​ಕುಮಾರ್ ಹಿಂದೆ ಕುಳಿತಿದ್ದರೆ, ಯಶವಂತ್​ ಬೈಕ್ ಓಡಿಸುತ್ತಿದ್ದ. ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್​​ ಬಳಿ ಬೈಕ್​ ಫ್ಲೈಓವರ್​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂದೆ ಕುಳಿತಿದ್ದ ರಾಮ್​ಕುಮಾರ್ ವಾಹನದಿಂದ ಹಾರಿ, ಕೆಳಗೆ ಬಿದ್ದಿದ್ದಾನೆ. ಹೀಗೆ ಬಿದ್ಧ ರಭಸಕ್ಕೆ ಅವನ ತಲೆಗೆ ಏಟು ಬಿದ್ದು ಪ್ರಾಣವೇ ಹೋಗಿದೆ.

ಇದನ್ನೂ ಓದಿ: Road Accident: ಬಸ್​-ಕ್ರೂಸರ್​ ಮುಖಾಮುಖಿ ಡಿಕ್ಕಿ; 8 ಪ್ರಯಾಣಿಕರ ದುರ್ಮರಣ

ಗಾಯಗೊಂಡ ಯಶವಂತ್​​ನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ. ರಾಮ್​ಕುಮಾರ್​ ಮೃತದೇಹವನ್ನು ಶವಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ಒಯ್ಯಲಾಗಿದೆ. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹುಡುಗರು ಮದ್ಯ ಸೇವಿಸಿ, ಜಾಲಿರೈಡ್​ಗೆ ಹೋಗಿದ್ದ ಅನುಮಾನ ವ್ಯಕ್ತವಾಗಿದೆ.

Exit mobile version