Site icon Vistara News

Bellary News: ಹರಕೆ ಊಟದ ವೇಳೆ ಸುಂಟರಗಾಳಿ; ಹಾರಿ ಹೋದ ಬೃಹತ್ ಶಾಮಿಯಾನ

A huge shamiana that flew away in a tornado in bellary

#image_title

ಬಳ್ಳಾರಿ: ಸುಮಾರು 50 ಸಾವಿರ ಜನಕ್ಕೆ ಅಲ್ಲಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಏಕಾಏಕಿ ಬಂದ ಸುಂಟರಗಾಳಿಯ ರಭಸಕ್ಕೆ ಬೃಹತ್‌ ಗಾತ್ರದ ಶಾಮಿಯಾನ ಹಾರಿಹೋಗಿದ್ದರಿಂದ ಜನರು ಊಟದ ಮಧ್ಯೆಯೇ ಓಡಿ ಹೋದ ಘಟನೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ (Bellary News) ನಡೆದಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಬಳ್ಳಾರಿಯ ಜೋಳದರಾಶಿ ಗ್ರಾಮದ ಬಳಿ ಕುಂಟ ಮಾರಮ್ಮ ದೇವಿಗೆ ಹರಕೆ ಹೊತ್ತ ಹಿನ್ನೆಲೆಯಲ್ಲಿ 50 ಸಾವಿರ ಮಂದಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದರು. ಈ ವೇಳೆ ಭಾರಿ ಸುಂಟರಗಾಳಿ ಅಪ್ಪಳಿಸಿದ್ದರಿಂದ ಮೂರು ಬೃಹತ್‌ ಶಾಮಿಯಾನಗಳು ಕಂಬಗಳ ಸಮೇತ ಕಿತ್ತು ಬಂದಿವೆ. ಶಾಮಿಯಾನ ಹಾರಿಹೋಗಿದ್ದರಿಂದ ಗಾಬರಿಯಿಂದ ಜನರು ಓಡಿಹೋಗಿದ್ದು ಕಂಡುಬಂತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಇದನ್ನೂ ಓದಿ | D.K. Shivakumar: ಭಾರತ ಹಿಂದು ರಾಷ್ಟ್ರ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌

Exit mobile version