Site icon Vistara News

Accident | ಟ್ಯಾಂಕರ್ ಹರಿದು ವ್ಯಕ್ತಿ ಹಾಗೂ 18 ಕುರಿಗಳು ಸಾವು

ಟ್ಯಾಂಕರ್‌

ಕೊಪ್ಪಳ : ಟ್ಯಾಂಕರ್‌ ಹರಿದು (Accident) ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 18 ಕುರಿಗಳು ಕೂಡ ಸತ್ತಿವೆ. ಶನಿವಾರ (ಆ.13) ಬೆಳಗಿನ ಜಾವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಬಳಿ ಯಲ್ಲಪ್ಪ ಬಸಪ್ಪ ಚಿಗರಿ (45) ಮೃತಪಟ್ಟಿದ್ದಾರೆ. ಜತೆಗೆ 18 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.

ಇದನ್ನೂ ಓದಿ | Rain news | ಮಳೆ ರಭಸಕ್ಕೆ ಕುಸಿದು ಬಿದ್ದ ಕುರಿ ಶೆಡ್ಡು; ಕುರಿ, ಮೇಕೆಗಳ ಸಾವು

ಮೃತ ಯಲ್ಲಪ್ಪ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದವರು ಎನ್ನಲಾಗಿದೆ. ಬೆಳಗಿನ ಜಾವ ಕುರಿಗಳನ್ನು ಹೊಡೆದುಕೊಂಡು ಹೋಗುತ್ತಿದ್ದಾಗ ಟ್ಯಾಂಕರ್‌ ಹರಿದಿದೆ ಎನ್ನಲಾಗಿದೆ. ಪೊಲೀಸರು ಟ್ಯಾಂಕರ್‌ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು, ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಇದನ್ನೂ ಓದಿ | ಕುರಿದೊಡ್ಡಿಗೆ ದುಷ್ಕರ್ಮಿಗಳಿಂದ ಬೆಂಕಿ: ಹೊತ್ತಿ ಉರಿದ ಶೆಡ್!

Exit mobile version