Site icon Vistara News

Murder Case | ಪ್ರೀತಿಸಿದ್ದ ಯುವತಿಯ ಕತ್ತುಕೊಯ್ದು ಕೊಂದು, ವಿಷ ಕುಡಿದಿದ್ದ ಪಾಗಲ್​ ಪ್ರೇಮಿಯೂ ಸಾವು

Murder Case Davangere

ದಾವಣಗೆರೆ: ಪ್ರೀತಿಸಿದ ಹುಡುಗಿ ಕೈತಪ್ಪುತ್ತಿದ್ದಾಳೆಂಬ ಹತಾಶೆ, ಕ್ರೋಧದಲ್ಲಿ ಆಕೆಯ ಕತ್ತುಕೊಯ್ದು, ತಾನೂ ವಿಷ ಸೇವಿಸಿದ್ದ ಯುವಕ ಈಗ ಮೃತಪಟ್ಟಿದ್ದಾನೆ. ಚಾಂದ್​ ಸಾದತ್​ ಪೀರ್​ (29) ಮೃತ ಯುವಕ. ದಾವಣಗೆರೆ ನಗರದ ಪಿಜೆ ಬಡಾವಣೆಯ ಚರ್ಚ್​​ ಬಳಿ ನಿನ್ನೆ ಚಾಂದ್​ ಸುಲ್ತಾನ್​ ಎಂಬ 24 ವರ್ಷದ ಯುವತಿಯ ಹತ್ಯೆಯಾಗಿತ್ತು. ಆಕೆ ಮನೆಯಿಂದ ಕೆಲಸಕ್ಕೆ ಸ್ಕೂಟರ್​​ನಲ್ಲಿ ತೆರಳುತ್ತಿದ್ದಾಗ ಇದೇ ಚಾಂದ್​ ಸಾದತ್​ ಅವಳನ್ನು ಮಾತನಾಡಬೇಕು ಎಂದು ನಿಲ್ಲಿಸಿ, ಕತ್ತುಕೊಯ್ದು ಓಡಿಹೋಗಿ ವಿಷ ಕುಡಿದಿದ್ದ. ಇತ್ತ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರೂ ಅವಳನ್ನು ಬದುಕಿಸಲು ಸಾಧ್ಯವಾಗಿರಲಿಲ್ಲ.

ಇಲ್ಲಿ ಚಾಂದ್​ ಸಾದತ್​ ಮತ್ತು ಚಾಂದ್​ ಸುಲ್ತಾನ್​ ಇಬ್ಬರೂ ಸಂಬಂಧಿಕರಾಗಿದ್ದು, ಚಾಂದ್​ ಸುಲ್ತಾಳ್​​ಳನ್ನು ಸಾದತ್​ ಪಾಗಲ್​​ನಂತೆ ಪ್ರೀತಿಸುತ್ತಿದ್ದ. ಅತಿಸುಂದರಿಯಾಗಿದ್ದ ಆಕೆಯನ್ನೇ ಮದುವೆಯಾಗುವುದು ಎಂದು ನಿರ್ಧರಿಸಿಯೂಬಿಟ್ಟಿದ್ದ. ಆಕೆಯನ್ನು ಮದುವೆಯಾಗಲು ಸಾದತ್ ಮನೆಯಲ್ಲಿ ಒಪ್ಪಿಗೆಯೂ ಇತ್ತು. ಆದರೆ ಚಾಂದ್​ ಸುಲ್ತಾನ್​ ಮನೆಯಲ್ಲಿ ಈ ಮದುವೆಯನ್ನು ಒಪ್ಪಿರಲಿಲ್ಲ. ಅಷ್ಟಲ್ಲದೆ, ಚಾಂದ್​ ಸುಲ್ತಾನ್​​ಗೆ ಬೇರೊಬ್ಬನ ಜತೆ ಮದುವೆಯನ್ನೂ ನಿಶ್ಚಯ ಮಾಡಿದ್ದರು. ಇದೆಲ್ಲವನ್ನೂ ಸಹಿಸಲಾಗದ ಸಾದತ್​, ತಾನು ಪ್ರೀತಿಸಿದ ಹುಡುಗಿ ತನಗಿಲ್ಲ ಎಂದರೆ, ಬೇರೆಯವರಿಗೂ ಸಿಗಬಾರದು ಎಂಬ ಕಾರಣಕ್ಕೆ ಅವಳ ಕೊಲೆ ಮಾಡಿದ್ದ.

ಇನ್ನು ಈ ಪ್ರಕರಣ ನಡೆದ ಬಳಿಕ ಸಾದತ್​ ತಾನೂ ವಿಷ ಕುಡುದಿದ್ದ. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ದಾವಣಗೆರೆ ಸಿಟಿ ಸೆಂಟ್ರಲ್​ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗಲಿಲ್ಲ. ದಾವಣಗೆರೆ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

Exit mobile version