Site icon Vistara News

Rain News | ಪ್ರಾಣದ ಹಂಗನ್ನೂ ತೊರೆದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಯುವಕ!

Rain

ಚಾಮರಾಜನಗರ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ (Rain News) ಚಾಮರಾಜನಗರ ಜಿಲ್ಲೆಯು ತತ್ತರಿಸಿ ಹೋಗಿದೆ. ಬೆಳೆ ಹಾನಿ, ಮನೆಗಳ ಕುಸಿತ ಸೇರಿ ಹಲವು ಅವಾಂತರಗಳಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೇ, ಮಳೆ ನೀರಿಗೆ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬೈಕ್‌ ಸವಾರರನ್ನು ಯುವಕನೊಬ್ಬ ಪ್ರಾಣದ ಹಂಗನ್ನೂ ತೊರೆದು ರಕ್ಷಿಸಿದ್ದಾನೆ.

ಚಾಮರಾಜನಗರ ತಾಲೂಕು ಹೊಂಗನೂರು ಗ್ರಾಮದ ಬಳಿಯ ಸೇತುವೆ ಮೇಲೆಯೂ ನೀರು ಹರಿಯುತ್ತಿದೆ. ನಿಶ್ಚಿತಾರ್ಥಕ್ಕೆಂದು ಸಿದ್ದಯ್ಯನಪುರಕ್ಕೆ ತೆರಳಿ ಮಸಣಾಪುರಕ್ಕೆ ಇಬ್ಬರು ಬೈಕ್‌ ಸವಾರರು ಆಗಮಿಸುತ್ತಿದ್ದರು. ಸೇತುವೆ ನೀರು ಹರಿಯುತ್ತಿದ್ದನ್ನು ನೋಡಿಯೂ ಬೈಕ್‌ ಮೇಲೆ ಸಾಗಿದ ಅವರು ಅರ್ಧ ದಾರಿಗೆ ತೆರಳುತ್ತಲೇ ನೀರಿನ ರಭಸಕ್ಕೆ ಸಿಲುಕಿದ್ದಾರೆ.

ಬೈಕ್‌ ಸವಾರರು ನೀರಿನ ರಭಸಕ್ಕೆ ಸಿಲುಕಿ ಹೋಗುತ್ತಿದ್ದನ್ನು ಕಂಡ ಯುವಕನೊಬ್ಬ ನೀರಿಗೆ ಧುಮುಕಿ, ಹಗ್ಗ ಕಟ್ಟಿ ಬೇರೆಯವರ ಸಹಾಯದಿಂದ ಇಬ್ಬರನ್ನೂ ರಕ್ಷಿಸಿದ್ದಾನೆ. ಯುವಕನ ಸಾಹಸಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಚಾಮರಾಜನಗರ ಶಾಸಕ ಎನ್‌.ಮಹೇಶ್‌ಗೆ ಮಳೆಹಾನಿ ಗ್ರಾಮಸ್ಥರ ತರಾಟೆ

Exit mobile version