Site icon Vistara News

Accident In Bangalore | ಜೀವ ಉಳಿಸಬೇಕಾದ ಆ್ಯಂಬುಲೆನ್ಸ್‌ನಿಂದ ಅಪಘಾತ : ದ್ವಿಚಕ್ರ ವಾಹನ ಚೂರುಚೂರು

Accident In Bangalore

ಬೆಂಗಳೂರು : ಹೈ ಸ್ಪೀಡ್‌ನಲ್ಲಿದ್ದ ಆ್ಯಂಬುಲೆನ್ಸ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಮತ್ತಿಕೆರೆ ಬಸ್ ಸ್ಟಾಪ್ ಬಳಿ (Accident In Bangalore) ಮಂಗಳವಾರ (ಆ.17) ರಾತ್ರಿ 11:30ಕ್ಕೆ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ಸುಹಾಸಿನಿ ಎಂಬವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಸ್ಪೀಡ್ ಲಿಮಿಟ್‌ ಇಲ್ಲದೆ ಆ್ಯಂಬುಲೆನ್ಸ್‌ಗಳ ಓಡಾಟ ಹೆಚ್ಚಳವಾಗಿದೆ. ಹೈ ಸ್ಪೀಡ್‌ನಲ್ಲಿದ್ದ ಆ್ಯಂಬುಲೆನ್ಸ್ ಮಹಿಳೆ ಓಡಿಸುತ್ತಿದ್ದ ಆ್ಯಕ್ಟಿವಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆ್ಯಕ್ಟಿವಾ ವಾಹನ ಛಿದ್ರವಾಗಿದೆ. ಮಹಿಳೆ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಯಶವಂತಪುರ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಅಪಘಾತಕ್ಕೆ ಒಳಗಾದ ಮಹಿಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ | Accidents in Bangalore | ಅಪಘಾತಗಳ ನಗರವಾಗ್ತಿದೆ ಸಿಲಿಕಾನ್‌ ಸಿಟಿ, 4 ತಿಂಗಳಲ್ಲಿ 231 ಜನರ ಸಾವು

Exit mobile version