Site icon Vistara News

ವಿಜಯಪುರ, ಸುಂಟಿಕೊಪ್ಪದಲ್ಲಿ ಅಪಘಾತ, ಇಬ್ಬರ ಸಾವು

accidents

ವಿಜಯಪುರ/ಕೊಡಗು: ವಿಜಯಪುರ ಹಾಗೂ ಕೊಡಗಿನಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿನ ಕೃಷ್ಣಾನದಿ ಸೇತುವೆ ಮೇಲೆ ಸರ್ಕಾರಿ ರಾಜಹಂಸ ಬಸ್ ಹಾಗೂ ಬೊಲೆರೋ ಕಾರ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೊಲೆರೋದಲ್ಲಿದ್ದ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತರ ನಾಲ್ವರಿಗೆ ಗಾಯಗಳಾಗಿವೆ. ಮಂಗಳವಾರ ನಸುಕಿನ‌ ಜಾವ ಸಂಭವಿಸಿದ ದುರ್ಘಟನೆಯಲ್ಲಿ KA25 F 3093 ನಂಬರಿನ ಬಸ್ ಹಾಗೂ ಓಡಿಶಾ ಮೂಲದ OD 14 P 7605 ನಂಬರಿನ ಬೊಲೆರೋ ಕಾರ್ ಡಿಕ್ಕಿಯಾಗಿವೆ. ಮೃತನನ್ನು‌ ಓಡಿಶಾ ಮೂಲದ ಸುಂದರಘಡ ಜಿಲ್ಲೆಯ ಸಂದೀಪ ನಾಯಕ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು ಜಿಲ್ಲೆ ಸುಂಟಿಕೊಪ್ಪದಲ್ಲಿ ಕುಶಾಲನಗರ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಮಗುಚಿಬಿದ್ದು ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದಿದ್ದು, ಮೃತ ದುರ್ದೈವಿ ಮಂಗಳೂರು ಮೂಲದ ನಾಗಭೂಷಣ್ ಎಂದು ಗುರುತಿಸಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Accident | ಚಿತ್ರದುರ್ಗದಲ್ಲಿ ಕಾರು-ಲಾರಿ ನಡುವೆ ಅಪಘಾತ; ಬೆಂಗಳೂರಿನ ಮೂವರ ಸಾವು

Exit mobile version