Site icon Vistara News

ಧರ್ಮಸ್ಥಳದ ಅನ್ನ ಛತ್ರದಲ್ಲಾಗಿದೆ ಮಹತ್ವದ ಬದಲಾವಣೆ, ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

ಅನ್ನ ಛತ್ರ ಉದ್ಘಾಟನೆ

ಮಂಗಳೂರು: ಸುಪ್ರಸಿದ್ಧ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಳದಲ್ಲಿ ನೂತನವಾಗಿ ನಿರ್ಮಿಸಿರುವ ಅನ್ನ ಛತ್ರವನ್ನು ಶನಿವಾರ ಉದ್ಘಾಟಿಸಲಾಯಿತು.

ಧರ್ಮಸ್ಥಳ ದೇಗುಲದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅನ್ನ ಛತ್ರ ಉದ್ಘಾಟನೆ ನೆರವೇರಿಸಿದರು. ಡಾ. ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಹೆಗ್ಗಡೆ ಸೇರಿ ಕುಟುಂಬಸ್ಥರು ಈ ವೇಳೆ ಉಪಸ್ಥಿತರಿದ್ದರು. ಈ “ಅನ್ನಪೂರ್ಣ ಅನ್ನ ಛತ್ರʼʼದಲ್ಲಿ ಸಾವಿರಾರು ಜನರು ಏಕಕಾಲದಲ್ಲಿ ಟೇಬಲ್‌ನಲ್ಲಿ ಊಟ ಮಾಡುವ ಸುಸಜ್ಜಿತ ವ್ಯವಸ್ಥೆ ಇರುವುದು ವಿಶೇಷ. ಇದುವರೆಗೆ ಧರ್ಮಸ್ಥಳದ ಅನ್ನ ಛತ್ರದಲ್ಲಿ ನೆಲದ ಮೇಲೆಯೇ ಕುಳಿತು ಊಟ ಸೇವಿಸುವ ವ್ಯವಸ್ಥೆ ಇತ್ತು.

ನೂತನವಾಗಿ ನಿರ್ಮಿಸಿದ ಸುಸಜ್ಜಿತ ಅನ್ನ ಛತ್ರ ಉದ್ಘಾಟನೆಯನ್ನು ಡಾ. ವೀರೇಂದ್ರ ಹೆಗ್ಗಡೆ ನೆರವೇರಿಸಿದರು. ಡಾ.ಹೇಮಾವತಿ ಹಗ್ಗಡೆ, ಹರ್ಷೇಂದ್ರ ಹೆಗ್ಗಡೆ ಸೇರಿ ಕುಟುಂಬ ಸದಸ್ಯರು ಭಾಗಿಯಾದರು.

ಇದನ್ನೂ ಓದಿ| SDM ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಯಶೋವರ್ಮ ಸಿಂಗಾಪುರದಲ್ಲಿ ವಿಧಿವಶ

Exit mobile version