Site icon Vistara News

Sabarimala Temple : ಇರುಮುಡಿ ಹೊತ್ತು ಶಬರಿಮಲೆಯತ್ತ ಸಾಗಿದ ಗೃಹ ಸಚಿವ ಆರಗ ಜ್ಞಾನೇಂದ್ರ

Aaraga jnanendra shabari 3

ಶಿವಮೊಗ್ಗ: ಬಿಜೆಪಿ ಕಾರ್ಯಕರ್ತರ ಒತ್ತಾಸೆ ಮೇರೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸೋಮವಾರ (ಜ.೧೬) ಬೆಳಗ್ಗೆ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದು, ಶಬರಿಮಲೆಯತ್ತ (Sabarimala Temple) ಹೆಜ್ಜೆ ಹಾಕಿದ್ದಾರೆ.

ಹಲವಾರು ವರ್ಷಗಳಿಂದ ಮಾಲೆ ಹಾಕಿಕೊಂಡು ಬರುತ್ತಿರುವ ಆರಗ, ಕಾರ್ಯದೊತ್ತಡದಿಂದ ಕಳೆದ ಕೆಲವು ವರ್ಷಗಳಿಂದ ತೆರಳಿರಲಿಲ್ಲ. ಆದರೆ, ಪಕ್ಷದ ಕಾರ್ಯಕರ್ತರು ಮಾಲೆ ಧರಿಸುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಕಳೆದ 15 ದಿನಗಳ ಹಿಂದೆ ಶಬರಿಮಲೆಗೆ ಹೋಗಿದ್ದ ಕೆಲವು ಕಾರ್ಯಕರ್ತರು, ಈ ಬಾರಿ ಜ್ಞಾನೇಂದ್ರ ಅವರನ್ನು ಶಬರಿಮಲೆಗೆ ಕರೆದುಕೊಂಡು ಬರುತ್ತೇವೆ ಎಂದು ಶಪಥ ಮಾಡಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿಗೆ ಬಂದ ಕಾರ್ಯಕರ್ತರು ಶಬರಿಮಲೆಗೆ ಮಾಲೆ ಧರಿಸಿ ಹೋಗಲೇಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಮಾಲೆ ಧರಿಸಲು ಒಪ್ಪಿದ ಆರಗ, ಸೋಮವಾರ ಬೆಳಗ್ಗೆ ಮಾಲೆ ಧರಿಸಿ, ಪೂಜೆ ಸಲ್ಲಿಸಿದರು. ಬಳಿಕ ಮಾಲೆ ಧರಿಸಿ ಸೆಕ್ಯುರಿಟಿ ಜತೆಗೆ ಪಾದಯಾತ್ರೆ ಆರಂಭಿಸಿದರು. ಇರುಮುಡಿ ಹೊತ್ತು ಶಬರಿಮಲೆಯತ್ತ ಸಾಗಿದರು.

ಇದನ್ನೂ ಓದಿ | Murder Case | ಪತ್ನಿ ಶೀಲ ಶಂಕಿಸಿದ ಪತಿ; ಉಸಿರುಗಟ್ಟಿಸಿ ಕೊಂದು ಪರಾರಿಯಾದ ಪಾಪಿ

Exit mobile version