Site icon Vistara News

Ballari News: ವಧು ಸಿಕ್ಕಿಲ್ಲವೆಂದು ಮನನೊಂದು ಯುವಕ ಆತ್ಮಹತ್ಯೆ

young man Balaram Reddy suicide at Kampli

ಕಂಪ್ಲಿ (ಬಳ್ಳಾರಿ): ವಧು ಸಿಕ್ಕಿಲ್ಲವೆಂದು ಮನನೊಂದು ಯುವಕನೊಬ್ಬ (Young man) ಕ್ರಿಮಿನಾಶಕ (Pesticide) ಸೇವಿಸಿ ಆತ್ಮಹತ್ಯೆ (suicide) ಮಾಡಿಕೊಂಡ ಘಟನೆ ಕಂಪ್ಲಿ ತಾಲೂಕಿನ ಹೊಸ ನೆಲ್ಲುಡಿ ಗ್ರಾಮದಲ್ಲಿ ಜರುಗಿದೆ.

ಬಲರಾಮ್ ರೆಡ್ಡಿ (24) ಆತ್ಮಹತ್ಯೆಗೀಡಾದ ಯುವಕ. ಬುಧವಾರ ರಾತ್ರಿ ಬಲರಾಮ್ ರೆಡ್ಡಿ ಕ್ರಿಮಿನಾಶಕ ಸೇವಿಸಿರುವ ಕುರಿತು ಮಾಹಿತಿ ತಿಳಿದು ಪೋಷಕರು ಕಂಪ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು ಎಂದು ತಿಳಿದು ಬಂದಿದ್ದು, ಚಿಕಿತ್ಸೆ ಫಲಕಾರಿಯಾಗದ ಕಾರಣ ಮರಳಿ ಕಂಪ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗಿನ ಜಾವ ಯುವಕ ಮೃತ ಪಟ್ಟಿದ್ದಾನೆ.

ಇದನ್ನೂ ಓದಿ: Soujanya muder case : ಧರ್ಮಸ್ಥಳದ ಸೌಜನ್ಯ ಕೊಲೆ, ಅತ್ಯಾಚಾರ ಪ್ರಕರಣ; ಸಂತೋಷ್‌ ರಾವ್‌ ಖುಲಾಸೆ

ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Exit mobile version