Site icon Vistara News

Ballari News: ಟಿ. ವೆಂಕಟೇಶ್ ಬಳ್ಳಾರಿಯ ನೂತನ ಜಿಲ್ಲಾಧಿಕಾರಿ

T Venkatesh as the new DC of Ballari

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ (DC) ಟಿ. ವೆಂಕಟೇಶ್‌ ಅವರನ್ನು ರಾಜ್ಯ ಸರ್ಕಾರ (State Govt) ವರ್ಗಾವಣೆ (Transfer) ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಪವನ್‌ ಕುಮಾರ್ ಮಾಲಪಾಟಿ ಅವರನ್ನು ಸ್ಥಳ ನಿಯೋಜಿಸದೆ ಸರ್ಕಾರ ವರ್ಗಾವಣೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಬಳ್ಳಾರಿ ಡಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದರು, ಆದರೆ ಸ್ಥಳ ನಿಯೋಜಿಸದೇ ವರ್ಗಾವಣೆ ಮಾಡಿರುವುದು ಆಶ್ಚರ್ಯ ಮೂಡಿಸಿದೆ.

ಡಿಸಿ ಪವನ್‌ ಕುಮಾರ್‌ ಮಾಲಪಾಟಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದರು. ಇದೀಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: Virat kohli : ಧೋನಿ- ತೆಂಡೂಲ್ಕರ್ ಸಾಲಿಗೆ ಸೇರಲಿದ್ದಾರೆ ವಿರಾಟ್ ಕೊಹ್ಲಿ, ಏನದು ದಾಖಲೆ?

ನೂತನ ಜಿಲ್ಲಾಧಿಕಾರಿಯಾಗಿರುವ ಟಿ.ವೆಂಕಟೇಶ್‌ ಅವರು, ಪ್ರಸ್ತುತ ವಿಜಯನಗರ ಡಿಸಿಯಾಗಿ ಕಾರ್ಯನಿರ್ವನಿರ್ವಹಿಸುತ್ತಿದ್ದರು, ಬಳ್ಳಾರಿ ಜಿಲ್ಲೆಯು ನೂತನ ಡಿಸಿ ವೆಂಕಟೇಶ್‌ ಅವರಿಗೆ ಹೊಸತೇನಲ್ಲ, ಈ ಹಿಂದೆ ಬಳ್ಳಾರಿ ಎಡಿಸಿಯಾಗಿ ಕಾರ್ಯ ನಿರ್ವಹಿಸಿದ್ದರು.

Exit mobile version