Site icon Vistara News

Ballari News: ಸೀಮಾಂಧ್ರದ ವಿರುಪಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಬಳ್ಳಾರಿಯ ಇಬ್ಬರ ಸಾವು

lightning two person died in Seemandhra

ಬಳ್ಳಾರಿ: ನೆರೆಯ ರಾಜ್ಯ ಸೀಮಾಂಧ್ರ ಪ್ರದೇಶದ ವಿರುಪಾಪುರ ಗ್ರಾಮದಲ್ಲಿ ಬಳ್ಳಾರಿ ಜಿಲ್ಲೆಯ ಇಬ್ಬರು ಸಿಡಿಲು (Lightning) ಬಡಿದು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಬೊಮ್ಮಲಾಪುರ ಗ್ರಾಮದ ಬಸವನಗೌಡ (32), ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಶೇಖರಗೌಡ (33) ಇಬ್ಬರೂ ಸಂಬಂಧಿಗಳಾಗಿದ್ದು, ನೆರೆಯ ಸೀಮಾಂದ್ರ ಪ್ರದೇಶದ ಸುಳುವಾಯಿ ಗ್ರಾಮಕ್ಕೆ ಸಂಬಂಧಿಗಳ ಮದುವೆಗೆ ಹೋಗಿ ಬರುತ್ತಿರುವಾಗ ಗಾಳಿ ಮಳೆ ಬಂದಿದ್ದರಿಂದ ವಿರುಪಾಪುರ ಗ್ರಾಮದ ಹತ್ತಿರದ ಗಿಡದ ಆಸರೆಯಲ್ಲಿ ನಿಂತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಬೊಮ್ಮಲಾಪುರ ಗ್ರಾಮದ ಮೃತನ ಮನೆಗೆ ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ಕಂದಾಯ ಅಧಿಕಾರಿ ಬಸವರಾಜ ಅವರು ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ಅನರ್ಹನಾದ ಬಳಿಕವೇ ನನಗೆ ಹೆಚ್ಚುಅವಕಾಶ: ಅಮೆರಿಕದಲ್ಲಿ ರಾಹುಲ್‌ ಗಾಂಧಿ ಹೇಳಿಕೆ

ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಮೃತನ ಮನೆಗೆ ಉಪ ತಹಸೀಲ್ದಾರ್ ರಾಘವೇಂದ್ರ, ಕಂದಾಯ ಅಧಿಕಾರಿ ಹನುಮಂತಪ್ಪ ಭೇಟಿ ನೀಡಿದ್ದಾರೆ. ಈ ಬಗ್ಗೆ ಸೀಮಾಂಧ್ರ ಪ್ರದೇಶದ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Exit mobile version